ಬಸವರಾಜ ಹಿರೇಮಠ
ಜಿಲ್ಲೆಯ ಕ್ರೀಡಾ ಪ್ರತಿಭೆಗಳ ಹಲವು ವರ್ಷಗಳ ಕನಸು ಇನ್ನೇನು ನನಸಾಯ್ತು... ಜತೆಗೆ ಸುಮಾರು ಹತ್ತು ವರ್ಷಗಳಿಂದ ಈಜುಗೊಳಕ್ಕಾಗಿ ಕಾಯ್ದಿದ್ದಕ್ಕೂ ಸಾರ್ಥಕ ಆಯ್ತು ಎಂದುಕೊಳ್ಳುತ್ತಿದ್ದವರಿಗೆ ನಿರಾಸೆ ಆವರಿಸಿದೆ. ₹ 52 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಕ್ರೀಡಾ ಸಂಕೀರ್ಣ ಉದ್ಘಾಟನೆಗೊಂಡು ಒಂದೂವರೆ ತಿಂಗಳಾದರೂ ಇನ್ನೂ ಬಾಗಿಲು ತೆರೆದಿಲ್ಲ.
ಮಾ. 14ರಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಈ ಕ್ರೀಡಾ ಸಂಕೀರ್ಣ ಉದ್ಘಾಟನೆಗೊಂಡಿತ್ತು. ಕೆಲವೇ ದಿನಗಳಲ್ಲಿ ಈ ಸಂಕೀರ್ಣದಲ್ಲಿರುವ ಅಂತಾರಾಷ್ಟ್ರೀಯ ಸೌಲಭ್ಯವುಳ್ಳ ಈಜುಗೊಳ ಸೇರಿ ಹಲವು ಕ್ರೀಡಾ ಚಟುವಟಿಕೆ ಶುರುವಾಗಲಿವೆ ಎಂಬ ನಿರೀಕ್ಷೆ ಇತ್ತು.ಈಗಾಗಲೇ ವಿಳಂಬವಾಗಿ ನಿರ್ಮಿಸಿರುವ ಕ್ರೀಡಾ ಸಂಕೀರ್ಣದ ಪ್ರಯೋಜನ ಪಡೆಯಲು ಕ್ರೀಡಾ ಪ್ರತಿಭೆಗಳು ಕಾತರದಿಂದ ಕಾಯುತ್ತಿದ್ದರು. ಪ್ರಮುಖವಾಗಿ ಬೇಸಿಗೆ ಕಾಲವಿದ್ದು, ಈಜುಗೊಳಕ್ಕಾಗಿ ಮಕ್ಕಳಾದಿಯಾಗಿ ಧಾರವಾಡ ಜನತೆ ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಆದರೆ, ಕ್ರೀಡಾ ಸಂಕೀರ್ಣದ ನಿರ್ವಹಣೆ ಯಾರಿಗೆ ನೀಡಬೇಕು ಎಂಬುದೇ ಇನ್ನೂ ಅಂತಿಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಕ್ರೀಡಾ ಸಂಕೀರ್ಣದ ಬಾಗಿಲು ತೆರೆದಿಲ್ಲ.
ಏನೆಲ್ಲ ಸೌಲಭ್ಯ?
ನೆಲಮಹಡಿಯಲ್ಲಿ ಕಾರ್ಯಾಲಯ, ಶೂಟಿಂಗ್ ಆರ್ಚರಿ ಇದ್ದು ಇದರೊಂದಿಗೆ ಕಾರ್, ಬೈಕ್ಗಳಿಗೆ ಪ್ರತ್ಯೇಕ ಪಾರ್ಕಿಂಗ್, ಕ್ಯಾಂಟಿನ್ ವ್ಯವಸ್ಥೆ ಇದೆ. ಕ್ರೀಡಾಂಗಣದ ಮುಂಭಾಗದ ರಸ್ತೆಗೆ ಹೊಂದಿಕೊಂಡು 8 ಮಳಿಗೆ, ಕ್ರೀಡಾಂಗಣದ ಒಳಗಡೆ ವೀಕ್ಷಕರ ಗ್ಯಾಲರಿ, ಅಲ್ಲದೇ, ಸಿಬ್ಬಂದಿ ವಸತಿಗೃಹ, ಸೆಕ್ಯುರಿಟಿ ಕ್ಯಾಬಿನ್, ಟಿಕೆಟ್ ಕೌಂಟರ್ ಸಹ ಇದೆ.
ಒಟ್ಟಾರೆ ಬಹೂಪಯೋಗಿ ಕ್ರೀಡಾ ಸಂಕೀರ್ಣ ಇದಾಗಿದ್ದು, ಬೇಸಿಗೆ ಮುಗಿಯುವ ಒಳಗೆ ಕ್ರೀಡಾ ಸಂಕೀರ್ಣ ಕ್ರೀಡಾಪಟುಗಳಿಗೆ ಮುಕ್ತವಾಗಬೇಕು. ಇಲ್ಲದಿದ್ದರೆ ಕ್ರೀಡಾ ಸಂಕೀರ್ಣ ಪ್ರಯೋಜನ ಈ ವರ್ಷಕ್ಕೆ ಅಷ್ಟಕ್ಕಷ್ಟೇ ಎಂದು ಕ್ರೀಡಾಸಕ್ತರು ಆಡಳಿತ ವ್ಯವಸ್ಥೆ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೋಟ್...ರವಾಡಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕಾಂಪ್ಲೆಕ್ಸ್ ತಂದು ಕೊಟ್ಟಿದ್ದೇವೆ. ಅದರ ನಿರ್ವಹಣೆಗೆ ಜಿಲ್ಲಾಡಳಿತವು ಸಂಘ-ಸಂಸ್ಥೆಗಳಿಗೆ ನೀಡಲು ಸಹ ಉದ್ಘಾಟನೆ ದಿನವೇ ಸೂಚಿಸಲಾಗಿದೆ. ಇಷ್ಟಾಗಿಯೂ ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳದೆ ಇರುವುದು ನಮಗೂ ಬೇಸರ ಮೂಡಿಸಿದೆ. ಶೀಘ್ರ ಕ್ರೀಡಾ ಸಂಕೀರ್ಣ ಕ್ರೀಡಾಪಟುಗಳಿಗೆ ಮುಕ್ತ ಮಾಡಲು ತಾವು ಸೂಚನೆ ನೀಡಲಾಗುವುದು.