ಲಿಂಗಾಯಿತ ಮಠಗಳಿಂದ ಶಿಕ್ಷಣ ಕ್ರಾಂತಿಗೆ ಮುನ್ನುಡಿ:

KannadaprabhaNewsNetwork |  
Published : Sep 02, 2024, 02:01 AM IST
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಂಸ್ಥಾಪಕರ ದಿನ ಮತ್ತು ದತ್ತಿ ಕಾರ್ಯಕ್ರಮ ಆರ್. ಮಹೇಶ್ ಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನ ದಲ್ಲಿ ಸಂಸ್ಥಾಪಕರ ದಿನ ಮತ್ತು ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ಸಾರ್ವತ್ರೀಕರಣಗೊಳ್ಳದೆ ಇರುವ ಕಾಲದಲ್ಲಿ, ಬಡವರು, ಹಿಂದುಳಿದವರಿಗೆ ಶಿಕ್ಷಣ ಎಂಬುದು ಕನಸಿನ ಮಾತಾಗಿದ್ದ ಕಾಲದಲ್ಲಿ ಮೈಸೂರು ಸುತ್ತೂರು ಮಹಾ ಸಂಸ್ಥಾನ ಮಠ ಸಮಾಜದ ಎಲ್ಲಾ ವರ್ಗದವರಿಗೆ ಅನ್ನ, ಶಿಕ್ಷಣ, ಆಶ್ರಯವನ್ನು ನೀಡುವ ಮೂಲಕ ಸಾಮಾಜಿಕ ಕ್ರಾಂತಿ ಮಾಡಿತು ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಜಿ.ಧನಂಜಯ ಹೇಳಿದರು.

ಅವರು ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಂಸ್ಥಾಪಕರ ದಿನ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ, ‘ಮೈಸೂರು ಸುತ್ತೂರು ಮಹಾ ಸಂಸ್ಥಾನದ ಪರಮಪೂಜ್ಯ ಲಿಂಗೈಕ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಮತ್ತು ಕೊಡುಗೆಗಳು’ಎಂಬ ವಿಷಯ ಕುರಿತು ಮಾತನಾಡಿದರು.

ಶಿಕ್ಷಣ ಎಂಬುದು ಕೇವಲ ಉದ್ಯೋಗ, ವ್ಯವಹಾರ ಆಧಾರಿತ ಎಂಬುದಕ್ಕೆ ಮಾತ್ರ ಸೀಮಿತವಾಗದೆ, ನೈತಿಕ ಕೌಶಲ್ಯಭರಿತ ಸ್ವತಃ ಅಭಿವೃದ್ಧಿಯನ್ನು ಶಿಕ್ಷಣ ನೀಡುವುದರ ಮೂಲಕ ಎಲ್ಲರ ಸರ್ವತೋಮುಖ ಅಭಿವೃದ್ಧಿ ಆಗಬೇಕು. ಮಾನವೀಯತೆಯನ್ನು ಭೋದಿಸದ ಶಿಕ್ಷಣ ನಮಗೆ ಅಗತ್ಯವಿಲ್ಲ ಎಂಬ ಮಹತ್ತರವಾದ ಉದ್ದೇಶದೊಂದಿಗೆ ಸರ್ಕಾರದ ವತಿಯಿಂದ ಸಾಧ್ಯವಾಗದ ಅನೇಕ ಕಾರ್ಯಗಳನ್ನು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ದಕ್ಷಿಣ ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿ ಯನ್ನುಂಟು ಮಾಡುವ ಮೂಲಕ ಮಾದರಿ ಮಠವನ್ನಾಗಿಸಿದರು ಎಂದರು.

ಗೆಲುವು ಎಲ್ಲರಿಗೂ ಸಿಗುವುದಿಲ್ಲ. ಆದರೆ ಗೆಲ್ಲುವ ಸಾಮರ್ಥ್ಯ ಎಲ್ಲರಿಗೂ ಸಿಗುತ್ತದೆ. ಇದಕ್ಕೆ ದೃಢ ನಿಶ್ಚಯ, ಪ್ರಾಮಾಣಿಕತೆ, ನಿಷ್ಠೆಗಳು ಬಹು ಮುಖ್ಯವಾಗಿ ಬೇಕಾಗುತ್ತದೆ. ಇಂತಹ ಸಂಗತಿಗಳೊಂದಿಗೆ ತಾವು ಕಂಡ ಕನಸನ್ನು ನನಸು ಮಾಡುವವರೇ ನಿಜವಾದ ಕ್ರಾಂತಿಕಾರಿಗಳು ಎಂದು ಆ ರೀತಿ ಬದುಕಿ ಸಮಾಜಕ್ಕೆ ಬೆಳಕಾಗಿ ಮಾರ್ಗದರ್ಶಕರಾದರು ಎಂದರು.

ಎನ್.ಎಸ್.ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಆರ್.ಮಹೇಶ್ ಕುಮಾರ್ ಸಮಾರಂಭ ಉದ್ಘಾಟಿಸಿದರು. ಎಂ. ವಿರುಪಾಕ್ಷಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರೇನಲ್ಲೂರು ಎಚ್.ಎಸ್.ವೀರಸಂಗಪ್ಪ ದತ್ತಿಯ ದತ್ತಿದಾನಿ ಕಮಲಮ್ಮ ವೀರಸಂಗಪ್ಪ, ವಿ.ಕುಮಾರ್, ಮಲ್ಲಿಕಾಂಬ ವಿರುಪಾಕ್ಷಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕದಳಿ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು. ವಿ.ರಾಜಶೇಖರಪ್ಪ ಸ್ವಾಗತಿಸಿ, ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಕತ್ತಲಗೆರೆ ತಿಮ್ಮಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!