ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಉಚಿತ ಶಿಕ್ಷಣವೇ ಸಂಸ್ಥೆಯ ಧ್ಯೇಯ
ಉಚಿತ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದ್ದು ಈ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು, ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಬುದ್ಧಿವಂತರಾಗಬೇಕು, ದೇಶದ ಮಹಾನ್ ವ್ಯೆಕ್ತಿಗಳಾಗಬೇಕೆಂದರು.ಮುಖ್ಯಶಿಕ್ಷಕ ಎಚ್.ಎಲ್.ಆನಂದ ಮಾತನಾಡಿ ದಾನಿಗಳಾದ ಆರ್ಕಾಟ್ ಚಂದ್ರಣ್ಣ ಹಾಗೂ ಸತ್ಯಭಾಮರವರು ನಮ್ಮ ಶಾಲೆಗೆ ಉಚಿತವಾಗಿ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ, ೨೦೦೬ ರಿಂದ ಪ್ರತಿ ವರ್ಷವೂ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತç ನೀಡುತ್ತಾ ಬಂದಿರುವುದು ಶ್ಲಾಘನೀಯ, ಅಭಿನಂದನಾರ್ಹ ಎಂದರು.ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಆರ್.ಆಶ್ವಥ್ ಮಾತನಾಡಿ ಸರ್ಕಾರಿ ಶಾಲೆಗಳಿಗೆ ನೀಡುವ ಸಮವಸ್ತ್ರ, ಶೂ, ಸಾಕ್ಸ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲೆಯ ಮಕ್ಕಳಿಗೆ ಸರ್ಕಾರ ನೀಡದೇ ಇರುವುದು ಶೋಚನೀಯ ಸಂಗತಿ. ಸರ್ಕಾರಗಳು ಮಲತಾಯಿ ಧೋರಣೆ ತೊರೆದು ಸರ್ಕಾರಿ ಶಾಲೆಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲೆಯ ಮಕ್ಕಳಿಗೆ ನೀಡಬೇಕೆಂದು ಒತ್ತಾಯಿಸಿದರು.
ವೇದಿಕೆಯಲ್ಲಿ ದಾನಿಗಳಾದ ರಾಘವೇಂದ್ರ ಅಭಿಷೇಕ್, ದಿನಿ, ಅರುಶ್, ಅನರ್ಘ್ಯ, ಆಕಾಂಕ್ಷ, ನಾಗೇಶ್, ಶಿಕ್ಷಕ ವೃಂದದವರಾದ ಎಸ್.ಗಿರಿಜಮ್ಮ, ಉಷಾರಾಣಿ, ಚಂದ್ರಕಲ, ಚಂದನ ಹಾಜರಿದ್ದರು.