ಅನುವಾದಕರು ಬರಹಗಾರನ ಆಂತರಿಕ ಪ್ರಪಂಚ ಅರ್ಥಮಾಡಿಕೊಳ್ಳಬೇಕು: ಶ್ರೀನಾಥ್‌ ಪೆರೂರ್

KannadaprabhaNewsNetwork |  
Published : Jul 08, 2024, 12:37 AM IST
5 | Kannada Prabha

ಸಾರಾಂಶ

ಪುಸ್ತಕ ಅನುವಾದ ಮಾಡುವಾಗ ಪರಸ್ಪರ ಪದವನ್ನು ಅರ್ಥಮಾಡಿಕೊಳ್ಳುವುದು ಮತ್ತು ಬರಹಗಾರರ ಆಂತರಿಕ ಪ್ರಪಂಚವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅನುವಾದ ಮಾಡುವ ಮೊದಲು ಈ ಪುಸ್ತಕದ ಬಗ್ಗೆ ಇತರರೊಡನೆ ಚರ್ಚೆ ಮಾಡುವುದರಿಂದ ಅನುವಾದ ಮಾಡಲು ಸಹಾಯ ಮಾಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅನುವಾದ ಮಾಡುವಾಗ ಪರಸ್ಪರ ಪದವನ್ನು ಅರ್ಥಮಾಡಿಕೊಳ್ಳುವುದು ಮತ್ತು ಬರಹಗಾರರ ಆಂತರಿಕ ಪ್ರಪಂಚವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಲೇಖಕ ಶ್ರೀನಾಥ್‌ ಪೆರೂರು ತಿಳಿಸಿದರು.

ಮೈಸೂರು ಸಾಹಿತ್ಯ ಸಂಭ್ರಮದ ಬಿಟ್ವೀನ್‌ ಟೂ ನಾಕ್ಸ್‌ ಸಕೀನಾಸ್‌ ಕಿಸ್‌ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪುಸ್ತಕ ಅನುವಾದ ಮಾಡುವಾಗ ಪರಸ್ಪರ ಪದವನ್ನು ಅರ್ಥಮಾಡಿಕೊಳ್ಳುವುದು ಮತ್ತು ಬರಹಗಾರರ ಆಂತರಿಕ ಪ್ರಪಂಚವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅನುವಾದ ಮಾಡುವ ಮೊದಲು ಈ ಪುಸ್ತಕದ ಬಗ್ಗೆ ಇತರರೊಡನೆ ಚರ್ಚೆ ಮಾಡುವುದರಿಂದ ಅನುವಾದ ಮಾಡಲು ಸಹಾಯ ಮಾಡುತ್ತದೆ ಎಂದರು.

ಕೃತಿಯ ಲೇಖಕ ವಿವೇಕ್ ಶಾನುಭಾಗ್‌ ಮಾತನಾಡಿ, ನಾನು ಇಂಗ್ಲಿಷ್ ನಲ್ಲಿ ಚೆನ್ನಾಗಿ ಮಾತನಾಡಬಲ್ಲೆ ಎಂಬ ಕಾರಣಕ್ಕೆ ಕನ್ನಡದೊಂದಿಗೆ ಹೊಂದಿರುವ ಸಂಬಂಧವನ್ನು ಇಂಗ್ಲಿಷ್ ನಲ್ಲಿ ಹೊಂದಿದ್ದೇನೆ ಎಂದಲ್ಲ. ಆದ್ದರಿಂದ ಶ್ರೀನಾಥ್ ಪೆರೂರ್ ಅವರನ್ನು ಕೊಚ್ಚಿಯಲ್ಲಿ ಭೇಟಿಯಾಗಿದ್ದು, ಸಕೀನಾ ಕಿಸ್ ಕೃತಿಯನ್ನು ಭಾಷಾಂತರಿಸಲು ನಿಮಗೆ ಆಸಕ್ತಿ ಇದೆಯೇ ಎಂದು ನಾನು ಅವರನ್ನು ಕೇಳಿದೆ. ಅವರು ಮೂರು ದಿನಗಳನ್ನು ತೆಗೆದುಕೊಂಡು ನಂತರ ಒಪ್ಪಿಕೊಂಡಿದ್ದಾಗಿ ಹೇಳಿದರು.

ತಮ್ಮ ಕೃತಿಗಳನ್ನು ಬೇರೆ ಭಾಷೆಗೆ ಅನುವಾದ ಮಾಡುವ ಮೊದಲು ಅನುವಾದಕರು ಸೃಜನಾತ್ಮಕ ಬರವಣಿಗೆಯಲ್ಲಿ ಒಳಗೊಂಡಿರುವ ಪ್ರಕ್ರಿಯೆ ಯಾವುದು ಮತ್ತು ಬರಹಗಾರನು ಭಾಷೆಯೊಂದಿಗೆ ಹೊಂದಿರುವ ಸಂಬಂಧ ತಿಳಿಯಬೇಕು. ನಾನು ಬರೆಯುವಾಗ ಅದು ಮಾತನಾಡುವ ವಿಧಾನವಲ್ಲ. ನಾನು ಹೇಳಿಕೆ ನೀಡಲು ಬರೆಯುವುದಿಲ್ಲ. ರಾಜಕೀಯ ಅಥವಾ ಸಾಮಾಜಿಕ ಅಥವಾ ಯಾವುದನ್ನಾದರೂ ಹೇಳಲು ಪ್ರಯತ್ನಿಸುವುದಿಲ್ಲ. ಆದರೆ, ಕೃತಿಯಲ್ಲಿ ಗಮನಿಸಿದ್ದಾಗ ಬರಹಗಾರನಿಗೆ ಇದು ಅನಿವಾರ್ಯ ಎಂದರು.

ಕಥೆ ಬರೆಯುವಾಗ ನಮ್ಮ ಸುತ್ತ ನಡೆಯುತ್ತಿರುವ ಘಟನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಸಾಮಾನ್ಯ ತಿಳುವಳಿಕೆ ನಿಮಗೆ ತಿಳಿದಿದೆ. ಜೀವನದಲ್ಲಿ ನಾವು ರಾಜಕೀಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅದು ಪಕ್ಷ ರಾಜಕಾರಣವಲ್ಲ. ವಿಭಿನ್ನ ರಾಜಕೀಯಗಳಿವೆ ಎಂದು ಬರಹಗಾರನಾಗಿ ನಾನು ಹೇಳಬಲ್ಲೆ ಎಂದು ವಿವರಿಸಿದರು.

ಗೋಷ್ಠಿಯನ್ನು ಲೇಖಕಿ ಸೀತಾ ಭಾಸ್ಕರ್ ಮತ್ತು ಅನುವಾದಕಿ ಜಯಶ್ರೀ ಜಗನಾಥ್ ನಡೆಸಿಕೊಟ್ಟರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ