5 ಕಿಮೀ ಕ್ರಮಿಸಲು ಬಸ್ಸಲ್ಲಿ 2 ತಾಸು ಪ್ರಯಾಣ!

KannadaprabhaNewsNetwork |  
Published : Sep 18, 2026, 03:45 AM IST
ನಾಳೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಅದ್ಧೂರಿ ಶಿಕ್ಷಕರ ದಿನಾಚರಣೆ | Kannada Prabha

ಸಾರಾಂಶ

ವೈಟ್‌ಫೀಲ್ಡ್, ಗುಂಜೂರು, ವರ್ತೂರು ಭಾಗದಲ್ಲಿ ಬೆಳಗಿನ ಅವಧಿಯಲ್ಲಿ ಶಾಲಾ ಮಕ್ಕಳು 4-5 ಕಿ.ಮೀ ದೂರದಲ್ಲಿನ ಶಾಲೆ ತಲುಪಲು ರಸ್ತೆಯಲ್ಲಿ ಬರೋಬ್ಬರಿ ಎರಡು ತಾಸು ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಮಕ್ಕಳ ಪಾಲಕರು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಟ್‌ಫೀಲ್ಡ್, ಗುಂಜೂರು, ವರ್ತೂರು ಭಾಗದಲ್ಲಿ ಬೆಳಗಿನ ಅವಧಿಯಲ್ಲಿ ಶಾಲಾ ಮಕ್ಕಳು 4-5 ಕಿ.ಮೀ ದೂರದಲ್ಲಿನ ಶಾಲೆ ತಲುಪಲು ರಸ್ತೆಯಲ್ಲಿ ಬರೋಬ್ಬರಿ ಎರಡು ತಾಸು ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಮಕ್ಕಳ ಪಾಲಕರು ದೂರಿದ್ದಾರೆ.

ಬೆಳಗಿನ ಅವಧಿಯಲ್ಲಿ ಗುಂಜೂರು ರಸ್ತೆಯಲ್ಲಿ ಕಿ.ಮೀ ದೂರದವರೆಗಿನ ಟ್ರಾಫಿಕ್‌ನಲ್ಲಿ ನಿಂತಿರುವ ಹತ್ತಾರು ಶಾಲಾ ವಾಹನಗಳು ಹಾಗೂ ಮತ್ತಿತರ ವಾಹನಗಳ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖಾಸಗಿ ಕಂಪನಿ ಸಹ ಸಂಸ್ಥಾಪಕ ನಿತೀಶ್ ರೆಡ್ಡಿ, ವೈಟ್‌ಫೀಲ್ಡ್‌ನ ಮಕ್ಕಳು ಪ್ರತಿನಿತ್ಯ ಎರಡು ತಾಸು ಸಮಯವನ್ನು ವರ್ತೂರು ರಸ್ತೆಯಲ್ಲಿ ಕಳೆಯುತ್ತಿದ್ದಾರೆ. ವೈಟ್‌ಫೀಲ್ಡ್‌ಗೆ ಸೂಕ್ತ ಮೂಲಸೌಕರ್ಯಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಹದಗೆಟ್ಟ ರಸ್ತೆ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಜೊತೆಗೆ ನಾಗರಿಕರು ಬೇಕಾಬಿಟ್ಟಿಯಾಗಿ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡುತ್ತಿರುವುದು ಕೂಡ ಭಾರಿ ಟ್ರಾಫಿಕ್‌ ಜಾಮ್‌ಗೆ ಕಾರಣವಾಗುತ್ತಿದೆ ಎಂದು ಅನೇಕರು ದೂರಿದ್ದಾರೆ.

ವರ್ತೂರಿನಲ್ಲಿ ಎಲ್ಲೆಂದರಲ್ಲೇ ಅಪಾರ್ಟ್‌ಮೆಂಟ್, ವಿಲ್ಲಾಗಳು ತಲೆ ಎತ್ತುತ್ತಿವೆ. ಕಟ್ಟಡಗಳ ಎತ್ತರಕ್ಕೆ ತಕ್ಕಂತೆ ಸೂಕ್ತ ರಸ್ತೆಗಳು ಇಲ್ಲದ ಕಡೆ ಆಸ್ತಿಗಳನ್ನು ಖರೀದಿಸಿರುವ ನಾಗರಿಕರು ಈಗ ಟ್ರಾಫಿಕ್ ಸಮಸ್ಯೆ ಎಂದು ದೂರುತ್ತಿದ್ದಾರೆ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಭಾರಿ ವಾಹನಗಳು ಟ್ರಾಫಿಕ್‌ ಜಾಮ್‌ಗೆ ಕಾರಣವಾಗುವ ಜೊತೆಗೆ ರಸ್ತೆಗಳನ್ನು ಹಾಳು ಮಾಡುತ್ತಿವೆ. ಬರೀ ಸರ್ಕಾರ, ಜಿಬಿಎ ಮಾತ್ರವಲ್ಲ ನಾಗರಿಕರು ಕೂಡ ಈ ಸಮಸ್ಯೆಗಳಿಗೆ ಹೊಣೆ ಎಂದು ಬ್ರಯಾನ್ ಎಂಬುವರು ಹೇಳಿದ್ದಾರೆ.

ಇಲ್ಲೇ ನರಕ ಎಂದ ಐಎಫ್‌ಎಸ್ ಅಧಿಕಾರಿ!:

ಬೆಂಗಳೂರಿನಲ್ಲಿ ನಿಮ್ಮ ಮನೆ, ಶಾಲೆ ಮತ್ತು ಕಚೇರಿ 5 ಕಿ.ಮೀ ವ್ಯಾಪ್ತಿಯಲ್ಲಿ ಇಲ್ಲದಿದ್ದರೆ ಇದೇ ಜನ್ಮದಲ್ಲಿ ನೀವು ನರಕವನ್ನು ಅನುಭವಿಸಬಹುದು. ಒಂದು ವೇಳೆ ರಸ್ತೆ ಸರಿಯಿಲ್ಲದಿದ್ದರಂತೂ 2 ಕಿ.ಮೀ ಕ್ರಮಿಸುವುದು ಕೂಡ ಯಾತನೆಮಯವಾಗುತ್ತದೆ ಎಂದು ಐಎಫ್‌ಎಸ್ ಅಧಿಕಾರಿ ದೀಪಿಕಾ ಬಜಪೈ ‘ಎಕ್ಸ್‌’ನಲ್ಲಿ ಕಮೆಂಟ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಇನ್ವೆಂಚರ್ ಅಕಾಡೆಮಿ ಸಹ ಸಂಸ್ಥಾಪಕಿ ನೂರೈನ್ ಫಜಲ್, ಗುರುವಾರದಂದು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ತಲುಪಲು ಮಕ್ಕಳು ಮತ್ತು ಶಿಕ್ಷಕರು ಸುಮಾರು ಏಳು ತಾಸು ರಸ್ತೆಯಲ್ಲೇ ಕಳೆದಿದ್ದಾರೆ. ಟ್ರಾಫಿಕ್ ಸಮಸ್ಯೆಗೆ ತುರ್ತಾಗಿ ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ನಿ ಮೇಲೆ ಭೀಕರ ಹಲ್ಲೆ ನಡೆಸಿ ಆ್ಯಸಿಡ್ ಎರಚಿದ!
ಮದುವೆ ಆಗು ಎಂದು ಪೀಡಿಸಿದ್ದಕ್ಕೆಪ್ರೇಯಸಿ ಕೊಂದ ಪ್ರಿಯತಮ ಸೆರೆ