ಮದುವೆಗೆ ಹೆಣ್ಣು ಸಿಗುತ್ತಿಲ್ಲವೆಂದು ಟವರ್ ಏರಿದ ಯುವಕ!

KannadaprabhaNewsNetwork |  
Published : May 26, 2026, 03:00 AM IST
ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಟವರ್ ಏರಿದ ಯುವಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಯುವಕನೊಬ್ಬ ಮೊಬೈಲ್‌ ಟವರ್‌ ಏರಿದ ಅಪರೂಪದ ಘಟನೆ ತಿಕೋಟಾ ತಾಲೂಕಿನ‌ ಕೋಟ್ಯಾಳ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಯುವಕನೊಬ್ಬ ಮೊಬೈಲ್‌ ಟವರ್‌ ಏರಿದ ಅಪರೂಪದ ಘಟನೆ ತಿಕೋಟಾ ತಾಲೂಕಿನ‌ ಕೋಟ್ಯಾಳ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ.

ತಿಕೋಟಾ ತಾಲೂಕಿನ‌ ಕೋಟ್ಯಾಳ ಗ್ರಾಮದ ಶ್ರೀಶೈಲ ರಾಮತೀರ್ಥ ಎಂಬಾತನೇ ಮೊಬೈಲ್ ಟವರ್‌ ಏರಿದ ಯುವಕ. ವಯಸ್ಸು 32 ಮೀರುತ್ತಿದ್ದರೂ ಮದುವೆಗೆ ಇನ್ನೂ ಹೆಣ್ಣು ಸಿಗುತ್ತಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ಬೆಳ್ಳಂಬೆಳಗ್ಗೆ ಟವರ್‌ ಏರಿ ಕುಳಿತಿದ್ದ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ತಿಕೋಟಾ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರೀಶೈಲ ರಾಮತೀರ್ಥನ ಮನವೊಲಿಸಿ ಕೆಳಗಿಳಿಸಿದ್ದಾರೆ.

ಇದೇ ಮೊದಲಲ್ಲದೆ ಈ‌ತ ಮದ್ಯಕ್ಕಾಗಿ ಹಾಗೂ ಗುಟಕಾ ಬೇಕೆಂದು ಈ ಹಿಂದೆಯೂ 2 ಬಾರಿ ಮೊಬೈಲ್ ಟವರ್‌ ಏರಿದ್ದ. ಆವಾಗಲೂ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಶ್ರೀಶೈಲನ ಮನವೊಲಿಸಿ ಕೆಳಗಿಳಿಸಿದ್ದೆವು ಎಂದು ಅಗ್ನಿಶಾಮಕ ದಳದ ಅಧಿಕಾರಿ ಉಮೇಶ ತಳಕೇರಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಪದೇ ಪದೇ ಮೊಬೈಲ್ ಟವರ್‌ ಏರಿ‌ ಕಿರಿಕ್ ಮಾಡುತ್ತಿರುವ ಯುವಕನ ಕಿರಿಕಿರಿಯಿಂದಾಗಿ ಸ್ಥಳೀಯರು ಸಹ ಬೇಸತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿನ ಬಿಲ್‌ ಪಾವತಿಗೆ ಆಗ್ರಹಿಸಿ ರೈತರ ಧರಣಿ
ಉಪನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವ