ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರೈತರಿಗೆ ಮತ್ತು ಕೃಷಿ ಆಸಕ್ತರಿಗೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಸಂಪೂರ್ಣ ಮಾಹಿತಿ, ಉತ್ತಮ ಗುಣಮಟ್ಟದ ಬೀಜಗಳು, ಸಸಿಗಳು ಮತ್ತು ಕೃಷಿ ಪರಿಕರಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಈ ಸಂತೆಯು ಅತ್ಯಂತ ಉಪಯುಕ್ತ ವೇದಿಕೆಯಾಗಿ ಮೂಡಿಬಂದಿದೆ. ಗೃಹಿಣಿಯರು ಅಲಂಕಾರಿಕ ಗಿಡಗಳು, ಹೂವಿನ ಸಸಿಗಳು ಹಾಗೂ ಸಣ್ಣ ಪ್ರಮಾಣದ ಉಪಕರಣಗಳನ್ನು ಉತ್ಸಾಹದಿಂದ ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
40 ರಿಂದ 45 ಲಕ್ಷ ವಹಿವಾಟು: ಸಂತೆಯಲ್ಲಿ ಜರುಗಿದ ಸುಮಾರು 25 ರಿಂದ 30 ನರ್ಸರಿ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಕಸಿ ಗಿಡಗಳು, ಹೂವು ಹಾಗೂ ಔಷಧೀಯ ಸಸ್ಯಗಳು ಸಹಿತ ಸುಮಾರು 50 ರಿಂದ 60 ಸಾವಿರ ಸಸಿಗಳು ಮಾರಾಟವಾಗಿವೆ. ಇದರಿಂದ ಸುಮಾರು 40 ರಿಂದ 45 ಲಕ್ಷ ರು. ಭರ್ಜರಿ ವಹಿವಾಟು ನಡೆದಿರುವುದು ನರ್ಸರಿ ಮಾಲೀಕರಲ್ಲಿ ಸಂತಸ ಮೂಡಿಸಿದೆ.ಸಂತೆಯ ಪ್ರಮುಖ ಆಕರ್ಷಣೆಗಳು: ಕೃಷಿ ಮತ್ತು ತೋಟಗಾರಿಕೆ ಉಪಕರಣಗಳು, ಜೈವಿಕ ಹಾಗೂ ಸಾವಯವ ಗೊಬ್ಬರಗಳು, ಮೌಲ್ಯವರ್ಧಿತ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ಮಳಿಗೆಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದವು. ಮಲೆನಾಡಿನ ಸಾಂಪ್ರದಾಯಿಕ ವಿಶೇಷ ಖಾದ್ಯವಾದ ‘ತೊಡೆದೇವು’ ಸಂತೆಯ ಪ್ರಮುಖ ಆಕರ್ಷಣೆಯಾಗಿತ್ತು. ನಂಜುವಳ್ಳಿ ಗ್ರಾಮದ ಗುರುರಾಜ್ ತಯಾರಿಸಿದ 4,000ಕ್ಕೂ ಹೆಚ್ಚು ತೊಡೆದೇವು ಖಾದ್ಯಗಳು ಮಾರಾಟವಾಗಿದ್ದು, ಸುಮಾರು 70,000 ರು.ಆದಾಯ ತಂದುಕೊಟ್ಟಿದೆ.