ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಅವರು ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಬುಧವಾರ ಲಯನ್ಸ್ ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಜಾವಿದಿ ಬೋಧಿಸಿ ಮಾತನಾಡಿದರು.
ರಾಷ್ಟ್ರದ ಬಗ್ಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ, ವಿಶ್ವ ಶಾಂತಿಗಾಗಿ ಲಯನ್ಸ್ ಬಂಧುಗಳು ಮಿಡಿಯುತ್ತಾರೆ. ಸಮಾಜದಲ್ಲಿ ನೀತಿ ಬೋಧನೆಗಳೊಂದಿಗೆ ಸಮಾಜಮುಖಿಯಾಗಿ ಜೀವನ ಕಟ್ಟಿಕೊಳ್ಳಬೇಕು. ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿಯುವ ಮನಸುಗಳು ಸದಾ ಹಸನಾಗಿರುತ್ತವೆ. ನಾಯಕತ್ವ ಗುಣ ಬೆಳಿಸಿ ಕೊಂಡು ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.ಸೇವೆಯ ಬಗ್ಗೆ ಅರಿವು ಮೂಡಿಸಬೇಕು. ಸದಸ್ಯರು ಕ್ಲಬ್ನಿಂದ ಹಿಮ್ಮುಖವಾಗುವಂತೆ ನೋಡಿಕೊಳ್ಳಬೇಕು. ಕ್ಲಬ್ಗಳಿಗೆ ಸದಸ್ಯರು ಕ್ಷಿಣಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಶಾಂತಿ, ಸುವವ್ಯಸ್ಥೆ ಕಾಪಾಡುವಲ್ಲಿ ಸದಸ್ಯರು ಶ್ರಮ ವಹಿಸಬೇಕು. ಎಲ್.ಸಿ.ಎಫ್ ಫಂಡ್ನಿಂದ ಶಾಲಾ ಕಾಲೇಜ್, ಆಸ್ಪತ್ರೆ ನಿರ್ಮಾಣ, ನೆರೆ ಹಾಗೂ ಬರಗಾಲ ಪರಿಹಾರ ಕಾರ್ಯಕ್ಕೆ ಸಹಕಾರವಾಗುತ್ತದೆ ಎಂದರು.
ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಗ್ರಾಮೀಣ ಭಾಗದ ಮಕ್ಕಳಿಗೆ ನೀಡಲಾಗುತ್ತಿದೆ. ಅರೋಗ್ಯ ಕ್ಷೇತ್ರದಲ್ಲೂ ವಿಶೇಣ ಛಾಪು ಮೂಡಿಸಲಾಗಿದೆ. ಶೈಕ್ಷಣಿಕ, ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು. ಕೈಮರ ವೃತ್ತದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ 10 ಒಲಿಗೆ ಯಂತ್ರ ನೀಡಲಾಗುವುದು ಎಂದರು.