-೪,೧೭,೦೦೦ ರು. ಮೌಲ್ಯದ ೧೫ ಕ್ವಿಂಟಾಲ್ ೪೫ ಕೆಜಿ ತೂಕದ ೨೨ ಅಡಕೆ ಚೀಲ ಕಳವು
----
ಕನ್ನಡಪ್ರಭ ವಾರ್ತೆ ಭದ್ರಾವತಿಅಡಕೆ ಖೇಣಿ ಮಾಡುವ ಖೇಣಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳವು ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ತಡವಾಗಿ ದೂರು ದಾಖಲಾಗಿದೆ.
ಫೆ.೨ರಂದು ಪ್ರಹ್ಲಾದ ಅವರ ತಾಯಿಯವರು ನಿಧನ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕೆಲವು ದಿನಗಳವರೆಗೆ ಖೇಣಿ ಮನೆಗೆ ಹೋಗಿರುವುದಿಲ್ಲ. ಅಡಕೆ ಮಾರಾಟ ಮಾಡುವ ಉದ್ದೇಶದಿಂದ ಮಾ.೩ರಂದು ಖೇಣಿ ಮನೆಗೆ ಹೋಗಿ ನೋಡಿದಾಗ ಅಡಕೆ ಮೂಟೆಗಳು ಕಡಿಮೆ ಇರುವುದು ಕಂಡು ಬಂದಿರುತ್ತದೆ. ಎಣಿಸಿ ನೋಡಿದಾಗ ಮೂಟೆಗಳಲ್ಲಿ ತಲಾ ೬೦ ಕೆಜಿ ತೂಕದ ಒಟ್ಟು ೮೦,೦೦೦ ರು. ಮೌಲ್ಯದ ಒಟ್ಟು ೪ಕ್ವಿಂಟಾಲ್ ೨೦ ಕೆಜಿ ತೂಕದ ೭ ಚೀಲ ಗೊರಬಲು ಅಡಕೆ. ಒಟ್ಟು ೧,೮೭,೦೦೦ ರು. ಮೌಲ್ಯದ ತಲಾ ೭೫ ಕೆಜಿ ತೂಕದ ೫ ಚೀಲ ರಾಶಿ ಇಡಿ ಅಡಕೆ. ಒಟ್ಟು ೬೭,೫೦೦ ರು. ಮೌಲ್ಯದ ತಲಾ ೭೫ ಕೆಜಿ ತೂಕದ ೫ ಚೀಲ ಚಾಲಿ ಅಡಕೆ ಹಾಗೂ ಒಟ್ಟು ೮೨,೫೦೦ ರು. ಮೌಲ್ಯದ ತಲಾ ೭೫ ಕೆಜಿ ತೂಕದ ೫ ಚೀಲ ಒಟ್ಟು ತೂಕ ೩ ಕ್ವಿಂಟಾಲ್ ೭೫ ಕೆಜಿ ಸೆಕೆಂಡ್ ಕ್ಯಾಲಿಟಿ ಅಡಕೆ ಕಳವು ಮಾಡಿರುವುದು ತಿಳಿದು ಬಂದಿದೆ.
ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಒಟ್ಟು ೪,೧೭,೦೦೦ ರು. ಮೌಲ್ಯದ ಒಟ್ಟು ೧೫ ಕ್ವಿಂಟಾಲ್ ೪೫ ಕೆಜಿ ತೂಕದ ೨೨ ಅಡಕೆ ಚೀಲ ಕಳವು ಮಾಡಲಾಗಿದ್ದು, ಕಳವು ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.