ಜಿ. ಸೋಮಶೇಖರ
ಪರೀಕ್ಷೆಯಲ್ಲಿ ರಾಜ್ಯದ ಮೊದಲ ಟಾಪರ್ ಸ್ಥಾನ ಪಡೆದುಕೊಳ್ಳಲೇಬೇಕೆಂದು ಆಸೆ ಹೊಂದಿ ಪ್ರತಿ ನಿತ್ಯ ನಾಲ್ಕೈದು ತಾಸು ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಆದಿತ್ಯ ತನ್ನ ಶಾಲೆಯಾದ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಮಾಡುತ್ತಿದ್ದ ಪಾಠ ಪ್ರವಚನಗಳನ್ನು ಮನನ ಮಾಡಿಕೊಂಡು ಅಭ್ಯಾಸ ಮಾಡಿದಾತ.
ಟಾಪರ್ ಸ್ಥಾನ ಬರಬೇಕೆಂಬ ಕಾರಣಕ್ಕಾಗಿ ಟ್ಯೂಷನ್ಗೆ ಹೋಗಲೇಬೇಕೆಂಬ ಕೆಲವಲ್ಲಿರುವ ಅಭಿಪ್ರಾಯವನ್ನು ಸುಳ್ಳಾಗಿಸಿದ್ದಾರೆ. ತಂದೆ ಶಿಕ್ಷಕ ಕೊಟ್ರಯ್ಯ ಮತ್ತು ತಾಯಿ ರೂಪಾ ಅವರ ಪ್ರೋತ್ಸಾಹ ಸಲಹೆ ಪಾಲಿಸುತ್ತ ಓದಿನತ್ತ ಮುನ್ನುಗ್ಗಿ ಈ ಸಾಧನೆ ತೋರಿದ್ದಾರೆ. ತಂದೆ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯ ಚಿತ್ರಕಲಾ ಶಿಕ್ಷಕರಾಗಿದ್ದಾರೆ.ಪರೀಕ್ಷೆಯಲ್ಲಿ ಆದಿತ್ಯ ಕನ್ನಡದಲ್ಲಿ 124, ಇಂಗ್ಲಿಷ್-100, ಹಿಂದಿ-100, ಗಣಿತ-98, ವಿಜ್ಞಾನ-100, ಸಮಾಜವಿಜ್ಞಾನ-99 ಅಂಕಗಳನ್ನು ಗಳಿಸಿದ್ದಾರೆ.
ಆದಿತ್ಯ ಈ ಸಾಧನೆ ಮಾಡುವ ಬಗ್ಗೆ ಶಾಲೆಯ ಶಿಕ್ಷಕರಿಗೆ ಭರವಸೆ ಇತ್ತು. ಅದರಂತೆ ಆದಿತ್ಯ ಪೂರ್ಣ ಪ್ರಮಾಣದಲ್ಲಿ ನಿರಂತರ ಅಭ್ಯಾಸ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನ ಹೊಂದಿರುವುದು ನಮ್ಮ ಶಾಲೆ ಮತ್ತು ಸಂಸ್ಥೆಗೆ ಹೆಮ್ಮೆ ತಂದಿದೆ. ಇದಕ್ಕಾಗಿ ಆತನನ್ನು ಅಭಿನಂದಿಸುತ್ತೇವೆ ಎನ್ನುತ್ತಾರೆ ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಕೋಡಿಹಳ್ಳಿ.