ಮುದಗಲ್: ಪಟ್ಟಣ ಸಮೀಪದ ತಲೇಖಾನ ಗ್ರಾಮದಲ್ಲಿ ಭಾನುವಾರ ಶ್ರೀ ಲಕ್ಷ್ಮೀ ವೆಂಕಟೇಶ್ವರ ಉತ್ಸವ ಜರುಗಿತು.
ಗ್ರಾಮಗಳು ಅಭಿವೃದ್ಧಿಯಾಗಬೇಕಾದರೇ ಇಲ್ಲಿನ ಜನರ ಸಹಕಾರ ತುಂಬ ಮುಖ್ಯವಾಗಿದೆ. ಚುನಾವಣೆ ನಡೆದಾಗ ಮಾತ್ರ ಪಕ್ಷಪಾತ ಮಾಡಬೇಕು ಚುನಾವಣೆ ಮುಗಿದ ಬಳಿಕ ಎಲ್ಲಾರೂ ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನ ಸಮೀತಿ ವತಿಯಿಂದ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಹಾಗೂ ದೇವಪ್ಪ ರಾಠೋಡ ಅವರಿಗೆ ಸನ್ಮಾನಿಸಿದರು.ದಸರಾ ಅಂಗವಾಗಿ ಅ.3ರಿಂದ ಆರಂಭವಾಗಿರುವ ಉತ್ಸವದಲ್ಲಿ 9ದಿನಗಳ ಕಾಲ ವಿವೀಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳ ನಡೆಯುತ್ತದೆ. ಉತ್ಸವದಲ್ಲಿ ದೇವರಿಗೆ ನಿತ್ಯ ನೈವೇದ್ಯ ಪ್ರಸಾದ ಕಾರ್ಯಕ್ರಮ ಜರಗುಲಿದ್ದು, ಎಲ್ಲಾ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಿದೆ ಎಂದು ದೇವಸ್ಥಾನ ಸಮಿತಿ ಪರವಾಗಿ ರಘುರಾಜ ಕುಲಕರ್ಣಿ ಮನವಿ ಮಾಡಿದರು.