ಅಂಜಲಿ ಕುಟುಂಬಕ್ಕೆ ನೆರವು ಸಂಗ್ರಹ

KannadaprabhaNewsNetwork |  
Published : May 20, 2024, 01:35 AM IST
ಹುಕ್ಕೇರಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಹುಕ್ಕೇರಿ ಹಿರೇಮಠದಲ್ಲಿ ಶಿವದೀಕ್ಷೆ ಪಡೆದ ವಟುಗಳು ಭಿಕ್ಷೆ ಬೇಡಿ ಹಣವನ್ನುಸಂಗ್ರಹಿಸಿ ಧನಸಹಾಯವಾಗಿ ನೀಡಿದ್ದಾರೆ. ಜೋಳಿಗೆಯಲ್ಲಿ ಬಂದ ಹಣ ಹಾಗೂ ಹುಕ್ಕೇರಿ ಹಿರೇಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನೀಡಿದ ಹಣ ಒಟ್ಟು ₹50 ಸಾವಿರ ನೀಡಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಹುಕ್ಕೇರಿ ಹಿರೇಮಠದಲ್ಲಿ ಶಿವದೀಕ್ಷೆ ಪಡೆದ ವಟುಗಳು ಭಿಕ್ಷೆ ಬೇಡಿ ಹಣವನ್ನುಸಂಗ್ರಹಿಸಿ ಧನಸಹಾಯವಾಗಿ ನೀಡಿದ್ದಾರೆ. ಜೋಳಿಗೆಯಲ್ಲಿ ಬಂದ ಹಣ ಹಾಗೂ ಹುಕ್ಕೇರಿ ಹಿರೇಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನೀಡಿದ ಹಣ ಒಟ್ಟು ₹50 ಸಾವಿರ ನೀಡಲು ಮುಂದಾಗಿದ್ದಾರೆ.

ವಿರಶೈವ ಧರ್ಮದಲ್ಲಿ ಜಂಗಮರಿಗೆ ಲಿಂಗದೀಕ್ಷೆ ಮಹತ್ವದ್ದಾಗಿದೆ. ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಶ್ರೀ ಗುರುಶಾಂತೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಶಿವದೀಕ್ಷಾ ಕಾರ್ಯಕ್ರಮದ ಬಳಿಕ ವಟುಗಳು ಭಿಕ್ಷಾಟನೆ ನಡೆಸಿದರು. ಜಂಗಮರ ಜೋಳಿಗೆಯಲ್ಲಿ ಬಂದಂತಹ ಹಣ ಹಾಗೂ ಮಠದ ಹಣ ಸೇರಿ ಒಟ್ಟು ₹ 50 ಸಾವಿರನ್ನು ಮೃತ ಅಂಜಲಿ ಅಂಬಿಗೇರ ಕುಟುಂಬಕ್ಕೆ ನಿಡಲು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನಿರ್ಧರಿಸಿದ್ದಾರೆ.

ಈ ವೇಳೆ ಮಾತನಾಡಿದ ಶ್ರೀಗಳು ವೀರಶೈವ ಮಠಗಳು ಕೇವಲ ಪೂಜೆ ಪುನಸ್ಕಾರಗಳನ್ನು ಮಾಡಲು ಸೀಮಿತವಾಗದೆ. ಕಷ್ಟದಲ್ಲಿ ನೊಂದ ಕುಟುಂಬಕ್ಕೆ ನೆರವಾಗುವ ಕೆಲಸವನ್ನು ಮಾಡುತ್ತಿವೆ. ಇಂದು ಹುಕ್ಕೇರಿ ಹಿರೇಮಠದಲ್ಲಿ ನಡೆದ ಶಿವದೀಕ್ಷೆಯಲ್ಲಿ ವಟುಗಳ ಜೋಳಿಗೆಯಲ್ಲಿ ಬಂದಂತಹ ಹಣವನ್ನು ಮೃತ ಅಂಜಲಿ ಅಂಬಿಗೇರ ಕುಟುಂಬಕ್ಕೆ ನೀಡಿದ್ದೆವೆ. ಸರ್ಕಾರ ಕೂಡಲೇ ನೇಹಾ ಹಿರೇಮಠ ಹಂತಕ ಹಾಗು ಅಂಜಲಿ ಅಂಬಿಗೇರ ಕೊಲೆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌
2 ದಿನದಲ್ಲಿ 2ನೇ ಬಾರಿ ಸಿದ್ದು ಆಪ್ತ ರಾಜಣ್ಣ- ಡಿಕೆಶಿ ಭೇಟಿ