ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕನ್ನಡ ಹೋರಾಟಗಾರರನ್ನು ಸ್ಮರಣೆ ಮಾಡುವ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದದ್ದು, ಹ.ವಿ.ನಟರಾಜು, ಗು.ಪುರುಷೋತ್ತಮ್, ಸಾವಿರಾರು ಕನ್ನಡ ಹೋರಾಟ ಮಾಡಿದ್ದಾರೆ. ಹ.ವಿ.ನಟರಾಜು ಪ್ರತಿ ಹೋರಾಟದಲ್ಲೂ ಕೊಡುಗೈ ದಾನಿಯಾಗಿದ್ದರು. ನಾನು ಗು.ಪುರುಷೋತ್ತಮ ಒಡನಾಡಿ. ಹೋರಾಟದಲ್ಲಿ ಅವರು ಎಂದಿಗೂ ಅಜರಾಮರ ಎಂದರು.ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾಗಿತ್ತು:
ಕನ್ನಡ ಹೋರಾಟಗಾರ ಶಾ.ಮುರುಳಿ ಮಾತನಾಡಿ, ಕನ್ನಡ ಪರ ಹೋರಾಟಗಾರದ ಹ.ವಿ.ನಟರಾಜು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾಗಿತ್ತು. ಕನ್ನಡ ಚಳವಳಿಗಾರರನ್ನು ಸರ್ಕಾರ ಗುರುತಿಸಬೇಕು. ಅವರ ಮೇಲೆ ಪೊಲೀಸ್, ರಾಜ್ಯ ಗುಪ್ತಚರ ಇಲಾಖೆ, ರಾಷ್ಟ್ರೀಯ ಗುಪ್ತಚರ ಇಲಾಖೆ ವರದಿ ಪಡೆದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಆಗಬೇಕು. ಅರ್ಜಿ ಹಾಕಿಕೊಂಡು ರಾಜ್ಯೋತ್ಸವ ಪ್ರಶಸ್ತಿ ಪಡೆಯಬೇಕೋ? ಸರ್ಕಾರ ಸ್ವಂತ ಇಚ್ಛೆಯಿಂದ ನೀಡಿದರೆ ಸ್ವೀಕರಿಸಬಹುದು ಆಗ ಪ್ರಶಸ್ತಿ ಪಡೆದ ತೃಪ್ತಿ ಇರುತ್ತದೆ ಎಂದರು.ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ನಗರಸಭಾ ಮಾಜಿ ಅಧ್ಯಕ್ಷ ಮಹದೇವನಾಯಕ, ತಮಿಳು ಸಂಘದ ಜಗದೀಶ್, ಹ.ವಿ.ನಟರಾಜು ಪುತ್ರ ಮೋಹನ್ ಕುಮಾರ್, ವಿಶ್ವಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಜಧ್ವನಿ ಗೋವಿಂದರಾಜು, ನಂಜುಂಡಶೆಟ್ಟಿ, ಪಣ್ಯದಹುಂಡಿ ರಾಜು, ರಾಚಪ್ಪ,ಶಿವಲಿಂಗಮೂರ್ತಿ, ಬಸವರಾಜು ನಾಯಕ, ಮುತ್ತುರಾಜು, ಆಟೋ ಲಿಂಗರಾಜು, ಆಟೋ ಶಂಕರ್, ಮಹೇಶ್, ಅಭಿ, ಗಡಿ ಯಜಮಾನ ಮಹದೇವಶೆಟ್ಟಿ, ಜಯಣ್ಣ, ಮಲ್ಲಿಕಾರ್ಜುನ, ನಾಗೇಶ್, ಪ್ರದೀಪ್, ಮೋಹನ್ ಹಾಜರಿದ್ದರು.