ಕನ್ನಡಪ್ರಭ ವಾರ್ತೆ ಜಮಖಂಡಿ
ಹೆಣ್ಣು ಮಕ್ಕಳು ಸಮಾಜದಲ್ಲಿ ಚೆನ್ನಾಗಿ ಬೆಳೆಯಬೇಕು. ಅವರಲ್ಲಿರುವ ಪ್ರತಿಭೆಗೆ ಅವಕಾಶಗಳು ದೊರೆಯಬೇಕು. ಯಾವುದೇ ಕಾರಣದಿಂದ ಮಹಿಳೆಯರು ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸಮಾಜಮುಖಿಯಾಗಿ, ಮಹಿಳಾ ಸಬಲೀಕರಣಕ್ಕೆ ಶ್ರಮಿಸುವ ಉದ್ದೇಶವಿದೆ ಎಂದು ತಿಳಿಸಿದರು.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನನ್ನ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಹರ್ಷ ತಂದಿದೆ. ಇದರಿಂದ ಸಮಾಜ ಸೇವೆಗೆ ಪ್ರೋತ್ಸಾಹ ಮತ್ತು ಜವಾಬ್ದಾರಿ ಹೆಚ್ಚಿಸಿದೆ.. ಡಾಕ್ಟರೇಟ್ ಪದವಿ ಬಂದಿರುವುದು ತಮ್ಮ ತಾಯಿಯ ಕನಸು ನನಸಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಅನೇಕರಿಗೆ ಸೇವೆ ಸಲ್ಲಿಸುವ ಬಯಕೆಯನ್ನು ಮಕ್ಕಳು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.ಸಾಹಿತಿ ಡಾ. ಶಾರದಾ ಮುಳ್ಳೂರು ಮಾತನಾಡಿ, ಡಾ.ಆಶಾದೇವಿ ಗುಡಗುಂಟಿ ಅವರು ಧಾರ್ಮಿಕ ಕಾರ್ಯಕ್ರಮ ಸೇರಿ ಸಾಹಿತ್ಯ, ಸಂಗೀತ, ಕಲೆಗಳನ್ನು ಪ್ರೋತ್ಸಾಹಿಸಿದ್ದಾರೆ. ಶ್ರೀಮಂತರು ಹಲವರಿದ್ದರೂ ಕೊಡುವ ಗುಣ ಇರುವುದು ದೊಡ್ಡತನವಾಗಿದೆ. ಅನೇಕ ಹೆಣ್ಣು ಮಕ್ಕಳ ವಿದ್ಯಾಅಭ್ಯಾಸಕ್ಕೆ, ಶುಭ ಕಾರ್ಯಗಳಿಗೆ, ಆರೋಗ್ಯ ಸಮಸ್ಯೆಗಳಿಗೆ ಆರ್ಥಿಕ ಸಹಾಯ ಮಾಡುತ್ತಿರುವ ಅವರು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಗಿರಿಜಾ ಮೇತ್ರಿ, ಗೀತಾ ಹಿರೇಮಠ ಸವಿತಾ ಸನದಿ ವೇದಿಕೆಯಲ್ಲಿದ್ದರು. ರಜನಿ ಕರಡಿ ಪ್ರಾರ್ಥನಾ ಗೀತೆ ಹಾಡಿದರು. ಕೀರ್ತಿ ಗುಡಗುಂಟಿ ಸ್ವಾಗತಿಸಿದರು. ಗೀತಾ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ತುಪ್ಪದ, ಉಷಾ ರುದ್ರಸ್ವಾಮಿಮಠ, ಡಾ,ಅಶ್ವಿನಿ ಪೂಜಾರ, ಅಂಜು ಮಾಳಿ, ಮಾತನಾಡಿದರು. ದಾನಮ್ಮ ಪಂಚಗಟ್ಟಿಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
- ಗೌರಿ ಈಶ್ವರಿ ಗುಡಗುಂಟಿ ಶಾಸಕ ಜಗದೀಶ ಗುಡಗುಂಟಿಯವರ ಪುತ್ರಿ