ಅಮರೇಶ ಮೈಲಾಪೂರ ಬಣ ಮೇಲುಗೈ

KannadaprabhaNewsNetwork |  
Published : May 08, 2026, 02:15 AM IST
ಫೊಟೊ ವಿವರ- ೭ಕೆಆರ್‌ಟಿ-೨À-ಕಾರಟಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಿಜೆತ ಅಮರೇಶ ಮೈಲಾಪುರ ಬಣ ವಿಜಯೋತ್ಸವ ಆಚರಿಸಿತು. ತಾಲೂಕಿನ ವಿವಿಧ ಶಾಲೆ ಶಿಕ್ಷಕರು ಇದ್ದಾರೆ. | Kannada Prabha

ಸಾರಾಂಶ

ಎರಡು ಗುಂಪುಗಳ ನಡುವೆ ತೀವ್ರ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು ೧೧೬ ಶಿಕ್ಷಕ ಮತದಾರರಲ್ಲಿ ೧೧೦ ಮತಗಳು ಚಲಾವಣೆಗೊಂಡಿದ್ದು, ೬ ಜನ ಮತದಾರರು ಮತದಾನಕ್ಕೆ ಗೈರಾಗಿದ್ದರು

ಕಾರಟಗಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಿಕ್ಷಕ ಅಮರೇಶ ಮೈಲಾಪೂರ ಬಣ ಮೇಲುಗೈ ಸಾಧಿಸಿದೆ.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರಟಗಿ ಘಟಕದ ನಿರ್ದೇಶಕರ ಸಾಮಾನ್ಯ ಕ್ಷೇತ್ರದ ೨ ಸ್ಥಾನಗಳಿಗೆ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಅಮರೇಶ ಮೈಲಾಪೂರ ಮತ್ತು ಮಹಿಳಾ ಕ್ಷೇತ್ರದಿಂದ ಶಂಕ್ರಮ್ಮ ಸಜ್ಜನ ಮತ್ತು ಶಿಕ್ಷಕ ಬಸವರಾಜ ರ‍್ಯಾವಳದ ಮತ್ತು ಶಿಕ್ಷಕಿ ಉಮಾ ಮಹೇಶ್ವರಿ ಶೆಟ್ಟರ್ ಆಯ್ಕೆ ಬಯಸಿ ಸ್ಪರ್ಧಿಸಿದ್ದರು.

ಎರಡು ಗುಂಪುಗಳ ನಡುವೆ ತೀವ್ರ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು ೧೧೬ ಶಿಕ್ಷಕ ಮತದಾರರಲ್ಲಿ ೧೧೦ ಮತಗಳು ಚಲಾವಣೆಗೊಂಡಿದ್ದು, ೬ ಜನ ಮತದಾರರು ಮತದಾನಕ್ಕೆ ಗೈರಾಗಿದ್ದರು. ಚುನಾವಣೆಯಲ್ಲಿ ಅಮರೇಶ ಮೈಲಾಪೂರ ಇವರಿಗೆ ೫೮ ಮತ ಪ್ರತಿಸ್ಪರ್ಧಿ ಬಸವರಾಜ ರ‍್ಯಾವಳದಗೆ ಕೇವಲ ೪೯ ಮತ ಪಡೆದು ಪರಾಭವಗೊಂಡರು. ಅಮರೇಶ ಮೈಲಾಪೂರ ತಂಡದ ಶಂಕ್ರವ್ವ ಸಜ್ಜನ ೬೦ ಮತಗಳನ್ನು ಪಡೆದು ಎದುರಾಳಿ ಉಮಾಮಹೇಶ್ವರಿ ೪೯ ಮತ ಪಡೆದು ಪರಾಭವಗೊಂಡರು.

ಅಮರೇಶ ಮೈಲಾಪೂರ ತಂಡ ಎರಡು ಸ್ಥಾನಗಳಲ್ಲಿ ಜಯಗಳಿಸಿ ಅಭೂತ ಪೂರ್ವ ಸಾಧನೆ ಮಾಡಿದರೆ. ಎದುರಾಳಿ ಬಸವರಾಜ ರ‍್ಯಾವಳದ ತಂಡ ಎರಡು ಸ್ಥಾನಗಳಲ್ಲೂ ಪರಾಭವಗೊಂಡ ಮುಖಭಂಗ ಅನುಭವಿಸಿದೆ.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ೨೦೨೬ ರಿಂದ ೨೦೩೧ರ ಅವಧಿಗೆ ಚುನಾವಣೆ ನಡೆಯಿತು. ಬೆಳಗ್ಗೆ ೮-೩೦ರಿಂದ ೪-೩೦ ವರಗೆ ಚುನಾವಣೆ ನಡೆಯಿತು. ಒಟ್ಟು ೧೧೬ ಪ್ರಾಥಮಿಕ ಶಾಲಾ ಶಿಕ್ಷಕ ಮತದಾರರು ಇದರಲ್ಲಿ ೧೧೦ ಶಿಕ್ಷಕರು ಮತ ಚಲಾಯಿಸಿದರು.

ಅಮರೇಶ ಮೈಲಾಪೂರ ಸಾಮಾನ್ಯ ಪುರುಷ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ೫೮ ಮತ ಪಡೆದು ವಿಜಯಶಾಲಿಗಳಾದರು. ತಮ್ಮ ಎದುರಾಳಿ ಬಣದ ಬಸವರಾಜ್ ರ‍್ಯಾವಳದ ೪೯ ಮತ ಪಡೆದು ೯ ಮತಗಳ ಅಂತರದಿಂದ ಪರಾಭವಗೊಂಡರು ಹಾಗೂ ಮಹಿಳಾ ಕ್ಷೇತ್ರದಿಂದ ಶಂಕ್ರಮ್ಮ ಸಜ್ಜನ ಸ್ಪರ್ಧೆ ಮಾಡಿ ೬೦ ಮತ ಪಡೆದು ಜಯ ಗಳಿಸಿದರು ಎದುರಾಳಿ ಬಣದ ಅಭ್ಯರ್ಥಿ ಉಮಾಮಹೇಶ್ವರಿ ೪೯ ಮತ ಪಡೆದು ಪರಾಭವಗೊಂಡರು. ಈ ಚುನಾವಣೆಯಲ್ಲಿ ಅಮರೇಶ ಮೈಲಾಪೂರ, ತಿಮ್ಮಣ್ಣ ನಾಯಕ, ತೋಟಯ್ಯ ಆಂಗಡಿ, ಬಸಯ್ಯ ಸ್ವಾಮಿ ಶ್ಯಾಮಸುಂದರ ಇಂಜಿನಿ, ರಾಜಶೇಖರ್ ಸಿರಿವಾರ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸಿ ನಗೆ ಬೀರಿದೆ

ಪರಾಜಿತ ತಂಡದ ಬಸವರಾಜ ರ‍್ಯಾವಳದ, ಚನ್ನಬಸಪ್ಪ ಒಕ್ಕಳದ, ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ವಿಠ್ಠಲ ಜೀರಗಾಳಿ, ಕಾಯದರ್ಶಿ ಬೆನಕಟ್ಟಿ ದ್ಯಾವಣ್ಣ ತಂಡಕ್ಕೆ ಶಿಕ್ಷಕರು ಸೋಲುಣಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಣಿ, ಪಕ್ಷಿ ನಿರ್ಲಕ್ಷಿಸಿದರೆ ಪರಿಸರ ನಾಶ: ಈಶ್ವರಪ್ಪ ಹಂಚಿನಾಳ
ಶಿಕ್ಷಕರ ಕೈಯಲ್ಲಿದೆ ಸರ್ಕಾರಿ ಶಾಲೆಗಳ ಭವಿಷ್ಯ: ಆನಂದಗೌಡ ಪಾಟೀಲ