ಅಂಬಿಗರ ಚೌಡಯ್ಯ ಸತ್ಯ ಮತ್ತು ಶುದ್ಧ ಕಾಯಕದ ಪ್ರತೀಕ: ದೇಶಹಳ್ಳಿ ಸಿದ್ದರಾಜು

KannadaprabhaNewsNetwork |  
Published : Jan 22, 2025, 12:30 AM IST
21ಕೆಎಂಎನ್ ಡಿ19 | Kannada Prabha

ಸಾರಾಂಶ

ಸತ್ಯ, ಶುದ್ಧ, ಕಾಯಕದ ನೆಲೆಯಿಂದ ಬೆಳೆದು ಬಂದ ಅಂಬಿಗರ ಚೌಡಯ್ಯ ಅಪ್ಪಟ ಕನ್ನಡ ಪ್ರತಿಭೆ. ಅವರು ನಡೆನುಡಿಯಲ್ಲಿ ಹೆಜ್ಜೆ ತಪ್ಪಿದವರಲ್ಲ. ಸ್ವಾಭಿಮಾನದ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ. ಕಾಯಕಯೋಗಿ ಬಸವಣ್ಣನವರ ಬಹುದೊಡ್ಡ ಅಭಿಮಾನಿಯಾಗಿ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಅಂಬಿಗರ ಚೌಡಯ್ಯ.

ಕನ್ನಡಪ್ರಭ ವಾರ್ತೆ ಮದ್ದೂರು

ಕಾಯಕಯೋಗಿ ಬಸವಣ್ಣನವರ ಬಹುದೊಡ್ಡ ಅಭಿಮಾನಿಯಾಗಿ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಅಂಬಿಗರ ಚೌಡಯ್ಯ ಸತ್ಯ ಮತ್ತು ಶುದ್ಧ ಕಾಯಕದ ಪ್ರತೀಕವಾಗಿ ಬಿಂಬಿತರಾಗಿದ್ದಾರೆ ಎಂದು ಚಾಮನಹಳ್ಳಿ ಗ್ರಾಪಂ ಅಧ್ಯಕ್ಷ ದೇಶಹಳ್ಳಿ ಸಿದ್ದರಾಜು ಹೇಳಿದರು.

ಪಟ್ಟಣದ ತಾಲೂಕು ಗಂಗಾಪರಮೇಶ್ವರಿ ಸಂಘದಿಂದ ಮಂಗಳವಾರ ನಡೆದ ನಿಜಶರಣ ಶ್ರೀಅಂಬಿಗರ ಚೌಡಯ್ಯ ಜಯಂತೋತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

12ನೇ ಶತಮಾನದಲ್ಲಿಯೇ ಜೀವಿಸಿದ್ದ ಅಂಬಿಗರ ಚೌಡಯ್ಯ ಶಿವಚರಣ ಹಾಗೂ ವಚನಕಾರರಾಗುವ ಮೂಲಕ ಉಳಿದೆಲ್ಲಾ ವಚನಕಾರರಿಗಿಂತ ಭಿನ್ನ ಹಾಗು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು ಎಂದು ಅಭಿಪ್ರಾಯಪಟ್ಟರು.

ಗಂಗಾಪರಮೇಶ್ವರಿ ಮೀನುಗಾರರ ಸಂಘದ ನಿರ್ದೇಶಕ ಜಿ.ಶೇಖರ್ ಮಾತನಾಡಿ, ಸತ್ಯ, ಶುದ್ಧ, ಕಾಯಕದ ನೆಲೆಯಿಂದ ಬೆಳೆದು ಬಂದ ಅಂಬಿಗರ ಚೌಡಯ್ಯ ಅಪ್ಪಟ ಕನ್ನಡ ಪ್ರತಿಭೆ. ಅವರು ನಡೆನುಡಿಯಲ್ಲಿ ಹೆಜ್ಜೆ ತಪ್ಪಿದವರಲ್ಲ. ಸ್ವಾಭಿಮಾನದ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ ಎಂದರು.

ಇದಕ್ಕೂ ಮುನ್ನ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ನಡೆದ ಜಯಂತೋತ್ಸವದಲ್ಲಿ ದ್ವಿತೀಯ ದರ್ಜೆ ತಹಸೀಲ್ದಾರ್ ಸೋಮಶೇಖರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಎಂ.ಕೃಷ್ಣಪ್ಪ, ಮಾಜಿ ಸದಸ್ಯ ಕೃಷ್ಣಮೂರ್ತಿ, ಸಂಘದ ಮಾಜಿ ನಿರ್ದೇಶಕ ಡಿ.ಆರ್.ಕೃಷ್ಣಪ್ಪ, ಸಂಘದ ಉಪಾಧ್ಯಕ್ಷ ಜಯರಾಮ, ನಿರ್ದೇಶಕ ಎಸ್. ವೆಂಕಟೇಶ, ಮುಖಂಡರಾದ ಮಹೇಶ್, ಮಧು, ಜಯರಾಮು, ಚೆಲುವರಾಜು, ನವೀನ, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!