ಕನ್ನಡಪ್ರಭ ವಾರ್ತೆ ರಾಯಚೂರುನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ನಮಗೆ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆಯೋಣ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಹೇಳಿದರು.
ರಾಯಚೂರು: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಿನ್ನೆಲೆಯಲ್ಲಿ ನಗರದಲ್ಲಿ ಚೌಡಯ್ಯ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆಯನ್ನು ಮಂಗಳವಾರ ನಡೆಸಲಾಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಂಗಾಮತಸ್ಥ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಯಂತೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸ್ಥಳೀಯ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿರುವ ಚೌಡಯ್ಯ ಅವರ ಪುತ್ಥಳಿಗೆ ಗಣ್ಯರು ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ನಂತರ ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಚಾಲನೆ ನೀಡಿದರು.ಅಲ್ಲಿಂದ ಹೊರಟ ಮೆರವಣಿಗೆ ತಿಮ್ಮಾಪುರಪೇಟೆ, ನೇತಾಜಿನಗರ, ಸರಫ್ ಬಜಾರ್,ತೀನ್ ಖಂದಿಲ್, ತಹಸೀಲ್ದಾರ್ ಕಚೇರಿ, ಅಂಬೇಡ್ಕರ್ ವೃತ್ತದ ಮುಖಾಂತರ ರಂಗಮಂದಿರಕ್ಕೆ ಬಂದು ತಲುಪಿತು.ಅದ್ದೂರಿಯಾಗಿ ಸಾಗಿದ ಮೆರವಣಿಗೆ ಯುದ್ಧಕ್ಕು ಕಲಾತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮಹಿಳೆಯರು,ಬಾಲಕಿಯರು ಕುಂಭ-ಕಳಸಗನ್ನು ತಲೆಮೇಲೆ ಹಿಟ್ಟುಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರೇ, ಮಕ್ಕಳು ಕೋಲಾಟವು ಆಕರ್ಷಣೀಯವಾಗಿತ್ತು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಮುಖಂಡರಾದ ಕೆ.ಶಾಂತಪ್ಪ, ಕೆ.ಶರಣಪ್ಪ, ಆಂಜನೇಯ್ಯ, ಬಾಬುರಾವ್, ರುದ್ರಪ್ಪ ಅಂಗಡಿ,ರವೀಂದ್ರ ಜಲ್ದಾರ್, ಶಿವಶಂಕರ, ರಂಗನಾಥ, ಲಲಿತಾ, ವಿಜಯ ರಾಜೇಶ್ವರಿ ಸೇರಿದಂತೆ ವಿವಿಧ ಸಮಾಜದ ಪ್ರಮುಖರು,ಸಂಘಟನೆಗಳ ಪದಾಧಿಕಾರಿಗಳು ಇದ್ದರು.ಸಾಧಕರಿಗೆ ಸನ್ಮಾನ:ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಿನ್ನೆಲೆಯಲ್ಲಿ ನಗರದ ರಂಗಮಂದಿರದಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಂಗಾಮತಸ್ಥ ಸಮಾಜದವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕವಿತಾಳ: ವಿವಿಧೆಡೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಕವಿತಾಳ: ಪಟ್ಟಣ ಸೇರಿದಂತೆ ವಿವಿಧಡೆ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಇಲ್ಲಿನ ಪಟ್ಟಣ ಪಂಚಾಯ್ತಿಯಲ್ಲಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ದಲಿತ ಸಂಘಟನೆ ಮುಖಂಡ ಯಾಕೂಬ ಕಡತಲ ಅವರು ಮಾತನಾಡಿ 12ನೇ ಶತಮಾನದ ಬಸವಣ್ಣ ನವರ ಅನುಭವ ಮಂಟಪದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಒಬ್ಬರು ಹಲವು ವಚನಗಳ ಮೂಲಕ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಯಲ್ಲಪ್ಪ ಮಾಡಗಿರಿ, ಮುಖಂಡರಾದ ಕರಿಯಪ್ಪ ಅಡ್ಡೆ, ಚಾಂದ ಪಾಷಾ, ಹುಚ್ಚಪ್ಪ ವಡವಟ್ಟಿ, ಪ ಪಂ ಮಾಜಿ ಸದಸ್ಯ ಮೌನೇಶ ಹಿರೇಕುರಬರು, ಹನುಮಂತ, ಮೌನೇಶ ಕೊಡ್ಲಿ, ಈರಣ್ಣ, ಹನುಮಂತ, ಶಿವುಕುಮಾರ ಹೋಟೆಲ್, ಮೌನೇಶ ಸೈಕಲ್ ಅಂಗಡಿ, ಸಿಲರ್ ಸಾಬ್, ಸುಗಪ್ಪ, ಸಗರಪ್ಪ, ಶಿವು, ಅಮರೇಶ, ದುರುಗಪ್ಪ ಮತ್ತು ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಸಿರವಾರ ತಾಲೂಕಿನ ಬಾಗಲವಾಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಜಯಂತಿ ಆಚರಿಸಲಾಯಿತು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪಿ. ತಿಪ್ಪಣ್ಣ ವಕೀಲ, ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ, ಸಿಬ್ಬಂದಿ ಈಕಪ್ಪ ಪವಾರ್, ಸದಸ್ಯರು ಮಾರೇಶ್ ಕಾವಲಿ, ಬಸವರಾಜ ಮೇಟಿ ಗಂಗಾಧರ ಹಿಂದಿನಮನೆ, ಮೌನೇಶ ಕೋರಿ ನಾಗರಾಜ್ ಬೋವಿ ಸದ್ದಾಮ್. ಅಂಬರೀಶ್ ಇದ್ದರು.ಮಾನ್ವಿಯಲ್ಲಿ ವೇಮನ ಜಯಂತಿ ಆಚರಣೆ
ಮಾನ್ವಿ:ಮಹಾಯೋಗಿ ವೇಮನ ಜಯಂತಿಯನ್ನು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಜಯಂತಿ ಹಿನ್ನೆಲೆಯಲ್ಲಿ ತಾಲೂಕಾಡಳಿತದಿಂದ ವೇಮನ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ವೇಮನರ ಜೀವನ-ಸಾಧನೆ, ಸಮಾಜಕ್ಕೆ ಅವರು ಕೊಟ್ಟಂತಹ ಕೊಡುಗೆಗಳನ್ನು ಸ್ಮರಿಸಲಾಯಿತು. ಪ್ರಸ್ತುತ ಸಮಾಜಕ್ಕೆ ವೇಮನರ ಸಂದೇಶಗಳ ಅಗತ್ಯವಿದ್ದು, ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಅಧಿಕಾರಿಗಳು ತಿಳಿಸಿದರು.ಈ ವೇಳೆ ತಹಸೀಲ್ದಾರ್ ಕಚೇರಿ ಅಧಿಕಾರಿ,ಸಿಬ್ಬಂದಿ,ನಿವಾಸಿಗಳು ಇದ್ದರು.‘ಕಾಯಕ ಶ್ರೇಷ್ಠತೆ ಸಾರಿದ ಶರಣ ಅಂಬಿಗರ ಚೌಡಯ್ಯ’ಸಿರವಾರ /ದೇವದುರ್ಗ: ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು, ನಮ್ಮ ಕಾಯಕ ನಮಗೆ ಶ್ರೇಷ್ಠ ಎಂದು ಸಾರಿ, ವಚನಗಳಿಂದ ಜಾಗೃತಿ ಮೂಡಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಮಹಾನ್ ನಾಯಕ ಅಂಬಿಗರ ಚೌಡಯ್ಯ ಎಂದು ಎನ್.ಉದಯಕುಮಾರ ಹೇಳಿದರು.ತಾಲ್ಲೂಕು ಆಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಮಂಗಳವಾರ ಪಟ್ಟಣ ಕಾಲುವೆ ಪಕ್ಕದಲ್ಲಿರುವ ಅಂಬಿಗರ ಚೌಡಯ್ಯ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಪಟ್ಟಣದ ದೇವದುರ್ಗ ಕ್ರಾಸ್ ಬಸವ ವೃತ್ತದಿಂದ ಮರಾಠ ರಸ್ತೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ವೃತ್ತದವರೆಗೂ ಮಹಿಳೆಯರಿಂದ ಕಳಸ, ಡೊಳ್ಳು, ಡಿಜೆ ಮೆರವಣಿಗೆಯೊಂದಿಗೆ ಮೆರವಣಿಗೆ ನಡೆಯಿತು.ತಹಸೀಲ್ದಾರ್ ರವಿ ಎಸ್.ಅಂಗಡಿ ಮಾತನಾಡಿದರು. ಗಂಗಾಮತ ಸಮಾಜದ ತಾಲ್ಲೂಕು ಅಧ್ಯಕ್ಷ ತಿಮಣ್ಣ ಕಟ್ಟಿಮನಿ , ನೌಕರರ ಸಂಘದ ಅಧ್ಯಕ್ಷ ಆರೀಫ್ ಮಿಯಾ, ಜೆ.ದೇವರಾಜಗೌಡ, ಜಿ.ಲೋಕರೆಡ್ಡಿ, ಪಪಂ ಸದಸ್ಯರು,ಮುಖಂಡರು, ಗಂಗಾಮತಸ್ಥ ಸೇರಿ ವಿವಿಧ ಸಮಾಜದರು, ಮಹಿಳೆಯರು ಭಾಗವಹಿಸಿದ್ದರು.ನೇರ, ನಿಷ್ಠುರ ಮಾತುಗಳ ನಿಜಶರಣ ಚೌಡಯ್ಯ: ವೆಂಕಟರಾವ್ ನಾಡಗೌಡ ಬಣ್ಣನೆ
ಸಿಂಧನೂರು/ ಮಸ್ಕಿ: ಸಿಂಧನೂರು ನಗರ ಮತ್ತು ಮಸ್ಕಿ ಪಟ್ಟಣ ಸೇರಿದಂತೆ ವಿವಿಧೆಡೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.ಮಸ್ಕಿ ತಾಲೂಕಾಡಳಿತದಿಂದ ಕಚೇರಿಯಲ್ಲಿ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಚೇರಿ ಅಧಿಕಾರಿ,ಸಿಬ್ಬಂದಿ ವರ್ಗದವರು ಇದ್ದರು.ಸಿಂಧನೂರು ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲ್ಲೂಕಾಡಳಿತ ವತಿಯಿಂದ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಈ ವೇಳೆ
ಕೆಓಎಫ್ ರಾಜ್ಯ ಅಧ್ಯಕ್ಷ ವೆಂಕಟರಾವ್ ನಾಡಗೌಡ ಮಾತನಾಡಿ, ಚೌಡಯ್ಯನವರ ನೇರ, ನಿಷ್ಠುರ ಮಾತುಗಳು, ಖಂಡಿಸುವ ಗುಣದಿಂದಲೇ ನಿಜಶರಣ ಎಂದು ಬಿರುದು ಹೊಂದಿದ್ದರು. ವಚನಗಳ ಮೂಲಕ ತಮ್ಮ ಕಾಯಕವನ್ನು ಎತ್ತಿ ಹಿಡಿದಿದ್ದರು ಎಂದರು.ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು. ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಬಸವಕೇಂದ್ರದ ತಾಲ್ಲೂಕು ಘಟಕದ ಅಧ್ಯಕ್ಷ ಕರೇಗೌಡ ಕುರುಕುಂದಾ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರವಿಗೌಡ, ಮುಖಂಡರಾದ ಆರ್.ಮಲ್ಲಯ್ಯ ವಕೀಲ, ಕೊಮಾರೆಪ್ಪ ಜವಳಗೇರಾ, ಮಂಜುನಾಥ ಸೋಮಲಾಪುರ, ಕೆ.ಮರಿಯಪ್ಪ, ಅಲ್ಲಮಪ್ರಭು ಪೂಜಾರ್, ಲಕ್ಷ್ಮಿ ಪತ್ತಾರ ಇದ್ದರು.