- ಆಸೆ, ಆಮಿಷಕ್ಕೆ ಒಳಗಾಗದೇ ರವೀಂದ್ರನಾಥ್ ಬಿಜೆಪಿ ಸಂಘಟನೆಗೆ ದುಡಿದವರು - ಎಸ್ಎಸ್, ನರಸಿಂಹಪ್ಪ, ಡಾ.ಎಲಿ, ವಿರೂಪಾಕ್ಷಪ್ಪ, ಇಮಾಂ ಸನ್ಮಾನಕ್ಕೆ ಹರ್ಷ
ಕರ್ನಾಟಕ ರಾಜ್ಯೋತ್ಸವದ ಜೊತೆಗೆ ಪಕ್ಷಾತೀತವಾಗಿ ಅಮೃತ ಪುರುಷರಿಗೆ ಪೌರ ನಾಗರೀಕ ಸನ್ಮಾನ ಮಾಡುವ ಮೂಲಕ ದಾವಣಗೆರೆ ಮಹಾನಗರ ಪಾಲಿಕೆ ಮಾದರಿ ಹೆಜ್ಜೆಯನ್ನಿಟ್ಟಿದೆ. ಆ ಮೂಲಕ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಶ್ಲಾಘಿಸಿದರು.
ನಗರದ ಪಾಲಿಕೆ ಆವರಣದಲ್ಲಿ ಶನಿವಾರ ರಾಜ್ಯೋತ್ಸವ ಸಮಾರಂಭದಲ್ಲಿ ಅಮೃತ ಪುರುಷರಿಗೆ ನಾಗರೀಕ ಪೌರ ಸನ್ಮಾನದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಚನ್ನಗಿರಿ ವಿರೂಪಾಕ್ಷಪ್ಪ, ಡಾ. ಎಸ್.ಎಂ.ಎಲಿ, ಕೆ.ಇಮಾಂ ಮೇಷ್ಟ್ರು ಅವರಿಗೆ ಗೌರವಿಸಿ ಅವರು ಮಾತನಾಡಿದರು.ಹಿರಿಯರು, ಕಲಾ ತಂಡಗಳು, ಅಭಿಮಾನಿಗಳು, ಕನ್ನಡಪರ ಹೋರಾಟಗಾರರು, ಪಾಲಿಕೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ಇಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಂದ ಹಿರಿಯರವರೆಗೆ ಸಾಧನೆ ಗುರುತಿಸಿ, 120ರಿಂದ 180 ಸಾಧಕರಿಗೆ ಸನ್ಮಾನಿಸುವ ಕೆಲಸವಾಗಿದೆ. ದಾವಣಗೆರೆ ಜಿಲ್ಲೆ, ರಾಜ್ಯಕ್ಕೋಸ್ಕರ ಹೋರಾಟ ಮಾಡಿದವರಿಗೆ ಸನ್ಮಾನ ಮಾಡುವ ಕೆಲಸ ಆಗಬೇಕು. ಸಾಧಕರನ್ನು ಗುರುತಿಸಿ, ಸನ್ಮಾನಿಸುವ, ಅಮೃತ ಪುರುಷರಿಗೆ ಸನ್ಮಾನಿಸಲಾಗಿದೆ. ಮೇಯರ್ ಕೆ.ಚಮನ್ ಸಾಬ್, ಉಪ ಮೇಯರ್ ಶಾಂತಕುಮಾರ ಸೋಗಿ, ಆಯುಕ್ತರು, ಸದಸ್ಯರ ಎಲ್ಲರೂ ಉತ್ತಮ ಸಂಪ್ರದಾಯ ಶುರು ಮಾಡಿದ್ದೀರಿ ಎಂದು ಶ್ಲಾಘಿಸಿದರು.
ರೈತರಿಗಾಗಿ ನರಸಿಂಹಪ್ಪ ಕೆಲಸ ಮಾಡಿದ್ದಾರೆ. ಚನ್ನಗಿರಿ ವಿರೂಪಾಕ್ಷಪ್ಪ ದೊಡ್ಡ ಮನೆತನದ ಮುತ್ಸದ್ದಿ. ಇಮಾಂ ಮೇಷ್ಟ್ರು ಶಿಷ್ಯಂದಿರು ದಾವಣಗೆರೆ ಗಲ್ಲಿಯಲ್ಲಿ ಒಬ್ಬರಾದರೂ ಸಿಗುತ್ತಾರೆ. ಡಾ. ಎಸ್.ಎಂ. ಎಲಿ ಅತ್ಯುತ್ತಮ ವೈದ್ಯರಷ್ಟೇ ಅಲ್ಲ, ರೋಗಿಗಳು ತಿಳಿದಷ್ಟು ಡಬ್ಬಿಗೆ ಹಾಕಬೇಕು. ಯಾರಾದರೂ ಹಣ ಇಲ್ಲವೆಂದರೆ, ಡಬ್ಬಿ ತೆಗೆದು, ಅದರಲ್ಲಿ ಎಷ್ಟು ಬೇಕೋ ಅಷ್ಟು ಹಣ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದ ವೈದ್ಯರು. ಇಂತಹ ಅಮೃತ ಪುರುಷರಿಗೆ ಸನ್ಮಾನಿಸುವ ಮೂಲಕ ಪಾಲಿಕೆ ತನ್ನ ಹಿರಿಮೆ, ಗರಿಮೆ ಹೆಚ್ಚಿಸಿಕೊಂಡಿದೆ ಎಂದು ಸಚಿವರು ಮೆಚ್ಚುಗೆ ಸೂಚಿಸಿದರು.
- - -
- ಡಾಲಿ ಧನಂಜಯ, ನಾಯಕ ನಟ