ಒಡಿಸ್ಸಾದಿಂದ ಗಾಂಜಾ ಸಪ್ಲೈ । ಗಾಂಜಾ ಘಾಟಿಗೆ ಬೀಳಲಿ ಕಡಿವಾಣಕೃಷ್ಣ ಲಮಾಣಿ
ಕೊಪ್ಪಳದ ಆನೆಗೊಂದಿ, ಸಣಾಪುರ ಭಾಗದಲ್ಲಿ ಹಂಪಿ ಟೂರಿಸಂ ಹೆಸರಿನಲ್ಲಿ ಪ್ರಭಾವಿಗಳ ರೆಸಾರ್ಟ್ಗಳಿವೆ. ಕೋಟ್ಯಂತರ ರು. ಬಂಡವಾಳ ಹೂಡಿ ರೆಸಾರ್ಟ್ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇದೆಲ್ಲವೂ ಸಂಬಂಧಿಸಿದ ಇಲಾಖೆಗಳಿಗೆ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿವೆ.
ರಾಯಚೂರು, ಕೊಪ್ಪಳ ಭಾಗದ ಪ್ರಭಾವಿ ರಾಜಕಾರಣಿಗಳ ರೆಸಾರ್ಟ್ಗಳು ಇಲ್ಲಿ ತಲೆ ಎತ್ತಿವೆ. ವಿರುಪಾಪುರ ಗಡ್ಡಿಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ ಬಳಿಕ ಈ ರೆಸಾರ್ಟ್ಗಳು ಕಂದಾಯ, ಅರಣ್ಯ ಜಮೀನುಗಳಲ್ಲಿ ತಲೆ ಎತ್ತಿವೆ. ರೈತರ ಕೃಷಿ ಜಮೀನುಗಳಲ್ಲೂ ತಲೆ ಎತ್ತಿವೆ. ಸರ್ಕಾರ ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಿ, ದೇಶಿ ಸಂಸ್ಕೃತಿಯನ್ನು ಪ್ರಚುರಪಡಿಸುವ ಹೋಂ ಸ್ಟೇಗಳಿಗೆ ಉತ್ತೇಜನ ನೀಡಲು ಆಲೋಚನೆ ಮಾಡುತ್ತಿದ್ದರೆ, ಪಂಚತಾರಾ ಹೋಟೆಲ್ಗಳಿಗೆ ಸಡ್ಡು ಹೊಡೆಯುವ ಮಾದರಿಯಲ್ಲಿ ಆನೆಗೊಂದಿ, ಸಣಾಪುರ, ಬಸಾಪುರ ಭಾಗಗಳಲ್ಲಿ ರೆಸಾರ್ಟ್ಗಳು ತಲೆ ಎತ್ತಿವೆ. ಪ್ರವಾಸೋದ್ಯಮ ಹೆಸರಿನಲ್ಲಿ ತಲೆ ಎತ್ತಿರುವ ಈ ರೆಸಾರ್ಟ್ಗಳ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ಕೂಡ ಮೌನ ವಹಿಸಿರುವುದು ಈಗ ಭಾರೀ ಚರ್ಚೆಗೆ ಗ್ರಾಸವನ್ನೊದಗಿಸಿದೆ.ಎನ್ಓಸಿ ಇಲ್ಲವೇ ಇಲ್ಲ:
ಗಾಂಜಾ ಘಾಟು:
ಗಂಗಾವತಿ, ಹುಲಿಗಿ ರೈಲ್ವೆ ನಿಲ್ದಾಣ, ಪ್ರಮುಖ ಪಟ್ಟಣಗಳ ಬಸ್ ನಿಲ್ದಾಣಗಳಿಂದ ಗಾಂಜಾ ಪೆಡ್ಲರ್ಗಳು ಪಿಕಪ್ ಪಾಯಿಂಟ್ ಮಾಡಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಬಳಿಯೂ ಜನನಿಬಿಡ ಪ್ರದೇಶಗಳಿಂದಲೇ ಈ ಗಾಂಜಾ ವ್ಯವಹಾರ ಒಬ್ಬರಿಂದ ಇನ್ನೊಬ್ಬರಿಗೆ ರವಾನೆ ಆಗುತ್ತಿದೆ. ಹೊಸ ಪೊಲೀಸರ ಬದಲಿಗೆ; ಎಂಟ್ಹತ್ತು ವರ್ಷಗಳ ಹಿಂದೆ ಕೆಲ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿದ ಪೊಲೀಸರನ್ನು ಬಿಟ್ಟರೆ ಈ ಹಾವಳಿಗೆ ಕಡಿವಾಣ ಬೀಳಲಿದೆ. ಈಗಿನ ಪೊಲೀಸರಿಗೆ ಬಾತ್ಮೀದಾರರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸ್ಮಾರ್ಟ್ಫೋನ್ ಹಾಗೂ ವಾಟ್ಸ್ಆ್ಯಪ್ ಯುಗದಲ್ಲಿ ಎಲ್ಲಿ ತಮ್ಮ ಬಗ್ಗೆ ಮಾಹಿತಿ ಲೀಕ್ ಆಗಲಿದೆ ಎಂಬ ಆತಂಕದಿಂದ ಬಾತ್ಮೀದಾರರು ಎಲ್ಲವನ್ನೂ ನೋಡಿಕೊಂಡು ಕಣ್ಣಿದ್ದು ಕುರುಡರಂತೇ ತೆಪ್ಪಗಾಗಿದ್ದಾರೆ. ಈ ಠಾಣೆಗಳಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಪೊಲೀಸರು ಹಾಗೂ ಬೇರೆ ಠಾಣೆಗಳಿಗೆ ವರ್ಗಾವಣೆಗೊಂಡಿರುವವರನ್ನು ಬಳಸಿಕೊಂಡರೇ ನಾಲ್ಕೈದು ದಿನದಲ್ಲೇ ಆನೆಗೊಂದಿ, ಸಣಾಪುರ, ತುಂಗಭದ್ರಾ ನದಿತೀರದಲ್ಲಿ ಗಾಂಜಾ ಘಾಟಿಗೆ ಶಾಶ್ವತ ಕಡಿವಾಣ ಹಾಕಬಹುದು ಎಂದು ಹೇಳುತ್ತಾರೆ ಸ್ಥಳೀಯರು.