ಜಿಲ್ಲೆಯಲ್ಲಿ ಮುಂದುವರೆದ ವರ್ಷಧಾರೆ: ಕೆರೆಯಂತಾದ ರಸ್ತೆಗಳು

KannadaprabhaNewsNetwork |  
Published : Jun 08, 2024, 12:31 AM IST
ತುಮಕೂರಿನಲ್ಲಿ ಮಳೆಯಿಂದಾಗಿ ರಸ್ತೆ ತುಂಬೆಲ್ಲಾ ನೀರು | Kannada Prabha

ಸಾರಾಂಶ

ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಶುಕ್ರವಾರ ಕೂಡ ಮುಂದುವರೆದಿದ್ದು ಒಂದು ಗಂಟೆಗಳ ಕಾಲ ಸುರಿದಿದ್ದು ರಸ್ತೆಗಳು ಜಲಾವೃತವಾಗಿವೆ.

ಕನ್ನಡಪ್ರಭ ವಾರ್ತೆ ತುಮಕೂರುಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಶುಕ್ರವಾರ ಕೂಡ ಮುಂದುವರೆದಿದ್ದು ಒಂದು ಗಂಟೆಗಳ ಕಾಲ ಸುರಿದಿದ್ದು ರಸ್ತೆಗಳು ಜಲಾವೃತವಾಗಿವೆ.ಮಧ್ಯಾಹ್ನದವರೆಗೂ ಸುಡು ಬಿಸಿಲಿದ್ದು ಸಂಜೆ 4.30 ಕ್ಕೆ ಆರಂಭವಾದ ಮಳೆ ಭರ್ತಿ ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ಕಳೆದ ರಾತ್ರಿ ಕೂಡ ಸುಮಾರು ಎರಡು ಗಂಟೆಗಳ ಕಾಲ ಹದವಾದ ಮಳೆ ಬಿದ್ದಿದ್ದು, ನೆಲ ಒಣಗುವ ಮುನ್ನವೇ ಭರ್ಜರಿ ಮಳೆಯಾಗಿದ್ದರಿಂದ ರಸ್ತೆಗಳೆಲ್ಲಾ ಕೆರೆಯಂತಾದವು.ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ತುಮಕೂರಿನಲ್ಲಿ ಸುರಿದ ಮಳೆಗೆ ಸರ್ವೋದಯ ಪಿಯು ಕಾಲೇಜು ಮುಂಭಾಗ ರಸ್ತೆಯಲ್ಲಿ ನೀರು ತುಂಬಿ ಹರಿದಿದ್ದರಿಂದ ವಾಹನ ಸವಾರು ಸಂಚರಿಸಲು ಪರದಾಡುವಂತಾಯಿತು. ಕಳೆದ ಎರಡು ದಿವಸಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಂಪಿನ ಅನುಭವ ಉಂಟಾಗಿದೆ. ಆಟದ ಮೈದಾನಗಳು ಕೆಸರಿನ ಗದ್ದೆಗಳಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು