ಪಂಜ ಕೊಯಿಕುಡೆ ಶ್ರೀ ಶನಿಶ್ಚರ ಮಂಡಳಿಯ ವಾರ್ಷಿಕ ಶನಿ ಪೂಜೆ

KannadaprabhaNewsNetwork |  
Published : Mar 11, 2025, 12:48 AM IST
ಪಂಜ ಕೊಯಿಕುಡೆ ಶ್ರೀ ಶನಿಶ್ಚರ ಮಂಡಳಿಯ ವಾರ್ಷಿಕ ಶನಿ ಪೂಜೆ, ಸಾಧಕರಿಗೆ ಸನ್ಮಾನ | Kannada Prabha

ಸಾರಾಂಶ

ಪಂಜ ಕೊಯಿಕುಡೆಯಲ್ಲಿ ಪಂಜ ಕೊಯಿಕುಡೆಯ ಶ್ರೀ ಶನೈಶ್ಚರ ಮಂಡಳಿಯ ವಾರ್ಷಿಕ ಶನಿ ಪೂಜಾ ಮಹೋತ್ಸವ ಪಂಜ ವಾಸುದೇವ ಭಟ್ ನೇತೃತ್ವದಲ್ಲಿ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಪದ್ಮನಾಭ ಶೆಟ್ಟಿ, ಕ್ರೀಡಾ ಪಟುಗಳಾದ ಪವಿತ್ರಾ, ಪ್ರತೀಕ್ಷಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆಯಲ್ಲಿ ಪಂಜ ಕೊಯಿಕುಡೆಯ ಶ್ರೀ ಶನೈಶ್ಚರ ಮಂಡಳಿಯ ವಾರ್ಷಿಕ ಶನಿ ಪೂಜಾ ಮಹೋತ್ಸವ ಪಂಜ ವಾಸುದೇವ ಭಟ್ ನೇತೃತ್ವದಲ್ಲಿ ನೆರವೇರಿತು.

ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ, ಕದ್ರಿ ನವನೀತ್ ಶೆಟ್ಟಿ, ಸೀತಾರಾಮ್ ಕುಮಾರ್ ಕಟೀಲ್, ಡಾ.ಪ್ರಖ್ಯಾತ್ ಶೆಟ್ಟಿ, ವಸಂತ ದೇವಾಡಿಗ ಮತ್ತಿತರರು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನೇಶ್ವರನ ಕತೆಯನ್ನು ಪ್ರದರ್ಶಿಸಿದರು.

ಶ್ರೀ ಜಾರಂದಾಯ ಮಹಿಳಾ ಮಂಡಳಿ ನವಜ್ಯೋತಿ ಮಹಿಳಾ ಮಂಡಳಿ ಪಂಜ ಹಾಗೂ ಪಂಜ ವಿಠೋಬಾ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ ನಡೆಯಿತು.

ಬಳಿಕ ನಡೆ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಪದ್ಮನಾಭ ಶೆಟ್ಟಿ, ಕ್ರೀಡಾ ಪಟುಗಳಾದ ಪವಿತ್ರಾ, ಪ್ರತೀಕ್ಷಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಮಂಡಳಿಯ ಗೌರವಾಧ್ಯಕ್ಷ ವಾಸುದೇವ್ ಭಟ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ನಲ್ಯಗುತ್ತು ವಸಂತ ಶೆಟ್ಟಿ, ಬರ್ಕೆ ರಘುರಾಮ ಶೆಟ್ಟಿ,ಮಂಡಳಿ ಅಧ್ಯಕ್ಷ ನವೀನ್ ಶೆಟ್ಟಿ ಪಾದೆಮನೆ, ಬಾಲಕೃಷ್ಣ ಮೊಯ್ಲಿ, ಸತೀಶ್ ಶೆಟ್ಟಿ ಪಂಜದಗುತ್ತು, ಸತೀಶ್ ಶೆಟ್ಟಿ ಬೈಲಗುತ್ತು, ಕೆಮ್ರಾಲ್ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಪಂಜ ಮತ್ತಿತರರು ಹಾಜರಿದ್ದರು.

ಪಂಜ ವಾಸುದೇವ ಭಟ್ ಪ್ರಾರ್ಥಿಸಿದರು. ನಿತೇಶ್ ದೇವಾಡಿಗ ಸನ್ಮಾನ ಪತ್ರ ವಾಚಿಸಿದರು. ಭಾಸ್ಕರ ಶೆಟ್ಟಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ