ಯೋಗ ತೀರ್ಪುಗಾರರಿಗೆ ವಾರ್ಷಿಕ ಕಾರ್ಯಾಗಾರ ಅಗತ್ಯ: ಅಜಿತ್‌ ಕುಮಾರ್‌

KannadaprabhaNewsNetwork |  
Published : Sep 17, 2025, 01:08 AM IST
ನಾಟಿ ವೈದ್ಯ ಕೃಷ್ಣಪ್ಪ ಗೌಡ ಮನ್ಕುಡೆ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು | Kannada Prabha

ಸಾರಾಂಶ

ಮುಗೇರಡ್ಕ ಮೊಗ್ರು ಸರ್ಕಾರಿ ಶಾಲಾ ಸೇವಾ ಟ್ರಸ್ಟ್‌ ಪ್ರಾಯೋಜಕತ್ವದಲ್ಲಿ ಮೊಗ್ರು ಮುಗೇರಡ್ಕ ಸರ್ಕಾರಿ ಕಿ.ಪ್ರಾ. ಶಾಲೆಯಲ್ಲಿಸ್‌ ಬೆಳ್ತಂಗಡಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ ನೆರವೇರಿತು.

ಬೆಳ್ತಂಗಡಿ: ಶಿಕ್ಷಣ ಇಲಾಖೆ ವತಿಯಿಂದ ನಡೆಯುತ್ತಿರುವ ಯೋಗಾಸನ ಸ್ಪರ್ಧೆಯ ಆಸನಗಳ ಆಯ್ಕೆ ಹಾಗೂ ತೀರ್ಪುಗಾರಿಕೆಗೆ ಯೋಗ ಶಿಕ್ಷಕರು ಹಾಗೂ ತೀರ್ಪುಗಾರರಿಗೆ ಪ್ರತಿ ವರ್ಷ ಕಾರ್ಯಾಗಾರ ನಡೆಸುವುದು ಅಗತ್ಯ ಎಂದು ರಾಜ್ಯ ಯೋಗ ತೀರ್ಪುಗಾರ ಅಜಿತ್ ಕುಮಾರ್ ಕುಕ್ರಾಡಿ ಅಭಿಪ್ರಾಯಪಟ್ಟಿದ್ದಾರೆ.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ, ಮುಗೇರಡ್ಕ ಮೊಗ್ರು ಸರ್ಕಾರಿ ಶಾಲಾ ಸೇವಾ ಟ್ರಸ್ಟ್‌ ಪ್ರಾಯೋಜಕತ್ವದಲ್ಲಿ ಮೊಗ್ರು ಮುಗೇರಡ್ಕ ಸರ್ಕಾರಿ ಕಿ.ಪ್ರಾ. ಶಾಲೆಯಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು.

ಮೊಗ್ರು ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಯೋಗ ಗುರು ಕುಶಾಲಪ್ಪ ಗೌಡ ನೆಕ್ಕರಾಜೆ ಮಾತನಾಡಿ, ಋಷಿ ಪರಂಪ ರೆಯ ಯೋಗ ವಿದ್ಯೆ ಮಹರ್ಷಿ ಪತಂಜಲಿ ಸೂತ್ರದಂತೆ ನಿತ್ಯ ಜೀವನವು ಯೋಗದ ಜೀವನ ಶೈಲಿಯಾಗಬೇಕು, ಆ ಮೂಲಕ ಸ್ಥಿತಪ್ರಜ್ಞೆ ಸಾಧಿಸಿದಾಗ ಜೀವನ ಸಾಧನೆಗೆ ಯೋಗಾಭ್ಯಾಸ ಸಹಕಾರಿ ಎಂದರು.ಬೆಳ್ತಂಗಡಿ ತಾಲೂಕು ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಜಯಾ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಸ್ಪರ್ಧೆಗಳು ಅಗತ್ಯ. ಯೋಗಾಭ್ಯಾಸ ಸ್ಪರ್ಧೆಗೆ ಸೀಮಿತವಾಗಿರದೆ ನಿತ್ಯ ಜೀವನದಲ್ಲಿ ಆರೋಗ್ಯ ಪಡೆಯಲು ಸಹಕಾರಿ ಎಂದರು. ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಟ್ರಸ್ಟಿಗಳಾದ ನಿವೃತ್ತ ಪೋಲೀಸ್ ಅಧಿಕಾರಿ ಬಾಬುಗೌಡ ಸಂಪತ್ತು ನಿಲಯ ಹಾಗೂ ನಾಟಿ ವೈದ್ಯ ಕೃಷ್ಣಪ್ಪ ಗೌಡ ಮನ್ಕುಡೆ ಸಮಾರಂಭ ಉದ್ಘಾಟಿಸಿದರು.

ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಜ್ಞಾ, ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮ್, ಮೊಗ್ರು ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗದೀಶ ಅರ್ಬಿ, ಶ್ರೀಕ್ಷೇತ್ರ ಮುಗೇರಡ್ಕದ ಮೊಕ್ತೇಸರ ಚಂದ್ರಹಾಸ ದೇವಸ್ಯ, ಟ್ರಸ್ಟ್‌ ಕೋಶಾಧಿಕಾರಿ ಪುರಂದರ ಗೌಡ ಮತ್ತಿತರರು ಹಾಜರಿದ್ದರು.

ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಮಾಧವ ಗೌಡ ಸ್ವಾಗತಿಸಿದರು. ಶಿಕ್ಷಕಿ ದಿವ್ಯಾ ವಂದಿಸಿದರು. ಶಿಕ್ಷ ಕೀರ್ತಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''