ದ್ಯಾಮವ್ವನ ಮೂರ್ತಿ ಸೃಷ್ಟಿಸಿದ ಆತಂಕ

KannadaprabhaNewsNetwork |  
Published : Jun 16, 2024, 01:56 AM ISTUpdated : Jun 16, 2024, 06:57 AM IST
ಬೈಲಹೊಂಗಲ | Kannada Prabha

ಸಾರಾಂಶ

ಮೂರ್ತಿ ಸೃಷ್ಟಿಸಿದ ಆತಂಕ, ಮೂರ್ತಿ ಇಟ್ಟು ಹೋಗಿದ್ದ ಅಪರಿಚಿತರು, ಚಕ್ಕಡಿಯಲ್ಲಿದ್ದ ದೇವಿ ಮೂರ್ತಿ, ಸ್ಥಳೀಯರಲ್ಲಿ ಆತಂಕ

ಬೈಲಹೊಂಗಲ: ಸಮೀಪದ ಸಂಪಗಾಂವ ಗ್ರಾಮದ ಹಳೇ ತಿಗಡಿ ರಸ್ತೆಯ ಹತ್ತಿರ ಯಾರೋ ಅಪರಿಚಿತರು ಚಕ್ಕಡಿಯ ಸಮೇತ ಎರಡು ಕಟಗಿಯ ದ್ಯಾಮವ್ವನ ಮೂರ್ತಿಗಳನ್ನು ಇಟ್ಟುಹೋಗಿರುವುದು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಬೆಳಗ್ಗೆ ಗ್ರಾಮದ ಹತ್ತಿರ ಈ ರೀತಿ ಚಕ್ಕಡಿಯಲ್ಲಿ ದೇವತೆಗಳನ್ನು ಇಟ್ಟುಹೋಗಿರುವದರಿಂದ ಗ್ರಾಮಸ್ಥರು ಗುಂಪು-ಗುಂಪಾಗಿ ಹೋಗಿ ಚಕ್ಕಡಿಯಲ್ಲಿರುವ ಮೂರ್ತಿಗಳನ್ನು ಕಂಡು ಏಕೆ ಬಿಟ್ಟು ಹೋಗಿದ್ದಾರೆ ಎಂದು ಸಂಕೆ ವ್ಯಕ್ತಪಡಿಸುತ್ತಿದ್ದಾರೆ. 

ಈ ದೇವತೆ ಮೂರ್ತಿಗಳನ್ನು ಪೂಜೆ ಮಾಡಿ ಒಂದು ಊರಿನಿಂದ ಇನ್ನೊಂದು ಊರಿನ ಹದ್ದಿಗೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಮೂರ್ತಿಗಳನ್ನು ಏನೂ ಮಾಡಬೇಕೆಂಬುದು ತೋಚದಂತಾಗಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ