ಯಕ್ಷಗಾನ ಕಲಾಕೇಂದ್ರದಿಂದ ಅಪ್ಪಣ್ಣ ಹೆಗ್ಡೆಗೆ ಯಕ್ಷ ಮುಕುಟದ ಅಲಂಕಾರ, ಸನ್ಮಾನ

KannadaprabhaNewsNetwork |  
Published : Dec 25, 2024, 12:45 AM IST
ಯಕ್ಷಗಾನ ಕಲಾಕೇಂದ್ರದಿಂದ ಅಪ್ಪಣ್ಣ ಹೆಗ್ಡೆಗೆ ಯಕ್ಷ ಮುಕುಟದ ಅಲಂಕಾರ, ಸನ್ಮಾನ | Kannada Prabha

ಸಾರಾಂಶ

ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಲೋಕದ ಹರಿಕಾರ, ಅಜಾತಶತ್ರು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ವತಿಯಿಂದ ಬಸ್ರೂರಿನ ಹೆಗ್ಡೆಯವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ

ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಲೋಕದ ಹರಿಕಾರ, ಅಜಾತಶತ್ರು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ವತಿಯಿಂದ ಬಸ್ರೂರಿನ ಹೆಗ್ಡೆಯವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಯಕ್ಷಗಾನದ ಕೇದಿಗೆ ಮಂದಲೆ ತೊಡಿಸಿ, ಮಣಿಸರದೊಂದಿಗೆ ಹೆಗ್ಡೆಯವರನ್ನು ಶೃಂಗರಿಸಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪ್ಪಣ್ಣ ಹೆಗ್ಡೆ, ಯಕ್ಷಗಾನ ಸಮಾಜವನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ, ಧರ್ಮವಂತರನ್ನಾಗಿ ಬಾಳಲು ಸಹಕರಿಸುತ್ತದೆ. ಪುರಾಣ ಮುಂತಾದ ಅನೇಕ ವಿಚಾರಗಳನ್ನು ತಿಳಿಸುತ್ತಾ ಜನರನ್ನು ವಿದ್ಯಾವಂತರನ್ನಾಗಿಸುತ್ತದೆ. ಇಂತಹ ಕಲೆಯನ್ನು ಉಳಿಸಿ ಬೆಳಸುವ ಬಗ್ಗೆ ಪರಿಶ್ರಮಿಸುತ್ತಿರುವ ಯಕ್ಷಗಾನ ಕಲಾ ಕೇಂದ್ರಕ್ಕೆ ಶುಭ ಹಾರೈಸಿದರು.

ಕಲಾ ಕೇಂದ್ರದ ಅಧ್ಯಕ್ಷ ಆನಂದ ಕುಂದರ್, ಅಪ್ಪಣ್ಣ ಹೆಗ್ಡೆ ಅವರ ತೊಂಬತ್ತರ ಜನ್ಮದಿನಕ್ಕೆ ಶುಭ ಹಾರೈಸಿದರು.

ಭಾಗವತರಾದ ರಾಘವೇಂದ್ರ ಮಯ್ಯ ಮತ್ತು ಗಣೇಶ ಆಚಾರ್ಯ, ವಿಷ್ಣುಮೂರ್ತಿ ಬೇಳೂರರು ರಚಿಸಿದ ಅಪ್ಪಣ್ಣ ಹೆಗ್ಡೆ ಅವರ ಕುರಿತ ಯಕ್ಷ ಪದ್ಯವನ್ನು ಹಾಡಿದರು.

ವಾಸುದೇವ ಕಾರಂತ, ವೈಕುಂಠ ಹೇರ್ಳೆ, ಸೀತಾರಾಮ ಸೋಮಯಾಜಿ, ವಿಶ್ವೇಶ್ವರ ಹೊಳ್ಳ, ಪ್ರಭಾಕರ ಐತಾಳ್, ಅಂಬರೀಷ್ ಭಟ್ಟ, ಮಾಧವ ಮಣೂರು, ಗಣೇಶ ಚೇರ್ಕಾಡಿ, ದಿನೇಶ್ ಪಡಿಯಾರ್, ಮೇಘಶ್ಯಾಮ ಹೆಬ್ಬಾರ್, ರಾಘವೇಂದ್ರ ಹೊಳ್ಳ, ರಾಮನಾಥ ಅಲ್ಸೆ, ಶ್ರೀನಿವಾಸ ಉಪಾಧ್ಯ, ಸತ್ಯನಾರಾಯಣ ಭಟ್ಟ, ಕಲಾಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಲಾಕೇಂದ್ರ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್‌ ಸ್ವಾಗತಿಸಿದರು. ವಿಷ್ಣುಮೂರ್ತಿ ಬೇಳೂರು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!