ಇಂಡಿ: ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್ಗಳಲ್ಲಿ ವಿಕಲಚೇತನರಿಗಾಗಿ ಪ್ರತ್ಯೇಕ ಕೌಂಟರ್ ತೆರೆಯಬೇಕು. ಗ್ರಾಮ ಪಂಚಾಯಿತಿ, ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಸುಸಜ್ಜಿತವಾದ ರಾಂಪ್ಗಳನ್ನು ನಿರ್ಮಿಸಬೇಕು. ಗ್ರಾಮ ಪಂಚಾಯಿತಿ ಇತರೆ ಸರ್ಕಾರಿ ಇಲಾಖೆಗಳಲ್ಲಿ ಶೇ.5 ರಷ್ಟು ಅನುದಾನ ಕಡ್ಡಾಯವಾಗಿ ವಿಕಲಚೇತನರಿಗೆ ಬಳಕೆಯಾಗಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ನಿಂಗರಾಜ ಬಿಸನಾಳ, ಉಪಾಧ್ಯಕ್ಷ ಕನ್ನಯ್ಯ ಹಜೇರಿ, ಶಿವರಾಜ ತಡ್ಲಗಿ, ಪರಮೇಶ್ವರ ಕಂಬಾರ, ಬಾಬು ಹೊಸಮನಿ, ಪಾಂಡು ರಾಠೋಡ, ಸಂತೋಷ ಚವ್ಹಾಣ, ಈರಣ್ಣಾ ಡಂಗೆ, ಮುಬಾರಕ ಮುಲ್ಲಾ, ಸರೂಬಾಯಿ ಹಂಜಗಿ, ಸುಮಯಾ ಮೋಮಿನ, ಸುಮೀನಾ ಬೇಪಾರಿ, ಪ್ರಕಾಶ ಚಿಂಚಗೋಳ, ಶಿವಾನಂದ ಮಲಕಗೊಂಡ, ಹುಸೇನಸಾಬ ಸುತಾರ, ಬಸವರಾಜ ಸೊನ್ನ, ಸಿದ್ದಪ್ಪ ಗುಲೆ, ಶಿವಾನಂದ ಬಿರಾದಾರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.