ಕನ್ನಡಪ್ರಭ ವಾರ್ತೆ ಮೈಸೂರು
ಈ ಹಿಂದೆಯೇ ತೀರ್ಪು ಬಂದಾಗ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದರೂ ಯಾರೊಬ್ಬರೂ ಕಿವಿಗೊಡಲಿಲ್ಲ. ಆದರೆ, ಈಗ ಪ್ರಶ್ನಿಸುತ್ತಿದ್ದಾರೆ. ಕಾಲ ಮೀರಿದ್ದು, ಒಂದು ವೇಳೆ ಅವರ ಅರ್ಜಿ ಸ್ವೀಕೃತವಾದಲ್ಲಿ ಮೇಕೆದಾಟು ಯೋಜನೆಗಳಿಗೆ ಹಲವಾರು ಇಲಾಖೆಗಳು ಅನುಮತಿ ನೀಡದೇ, ವಿಷಯ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಬಹುದಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾವೇರಿ ತೀರ್ಪು ಕುರಿತಂತೆ ಮೇಲ್ಮನವಿ ಸಲ್ಲಿಸುವ ನೆಪದಲ್ಲಿ ಹಲವಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಈ ಕುರಿತು ತನಿಖೆ ನಡೆಯಬೇಕು. ರಾಜ್ಯದವರೇ ಈ ರೀತಿ ಅಡ್ಡಗಾಲು ಹಾಕುವ ವೇಳೆ ತಮಿಳುನಾಡಿನವರು ಸುಮ್ಮನಿರುವುದಿಲ್ಲ. ಅವರು ಸಹ ಏನಾದರೂ ತಕರಾರು ತೆಗೆಯುತ್ತಾರೆ. ಹೀಗಾಗಿ, ವ್ಯಾಪ್ತಿಗೆ ಒಳ ಪಡದ ಮೇಲ್ಮನವಿಗಳನ್ನು ಈಗ ವಾಪಸ್ ಪಡೆಯುವುದೇ ಸೂಕ್ತ ಎಂದರು.ರಾಜ್ಯ ರಾಜ್ಯಗಳಿಗೆ ಸಂಬಂಧಿಸಿದ ವಿವಾದದಲ್ಲಿ ಯಾವುದೇ ವ್ಯಕ್ತಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂಬ ಕಾರಣ ಇವರು ಮರೆತಿದ್ದಾರೆ. ಮೇಕೆದಾಟುವಿಗೆ ಸಂಬಂಧಿಸಿದ ಅಡೆತಡೆಗಳನ್ನು ತಮಿಳುನಾಡಿನ ಪುನರ್ ಪರಿಶೀಲನೆ ಅರ್ಜಿ ಸಹ ವಜಾಗೊಳಿಸುವ ಮೂಲಕ ಹಾದಿ ಸುಗಮಗೊಳಿಸಿದೆ. ಹೀಗಿರುವಾಗ ರಾಜ್ಯದ ಹಲವರು ಅನಗತ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು.