ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಅವರು ಬಡಿಗವೃತ್ತಿ:ವೈಜ್ಞಾನಿಕ ಚಿಂತನೆ ಮತ್ತು ತಿಂತಣಿ ಮೌನೇಶ್ವರ ವಚನ ಪುಷ್ಪಾಂಜಲಿ ಪುಸ್ತಕಗಳನ್ನು ಇಳಕಲ್ಲ ವಿಶ್ವಕರ್ಮ ಸಮಾಜದ ಹಿರಿಯರಾದ ಗಂಗಣ್ಣ ಬಡಿಗೇರ ಅವರು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಕು.ಅನಿತಾ ಆಚಾರ್, ಕಾರವಾದ ವಿಶ್ವಕರ್ಮ ಪಿ.ಎಂ ಯೋಜನೆಯ ಸಂಚಾಲಕ ಪ್ರಶಾಂತ, ಅಧ್ಯಕ್ಷತೆ ವಹಿಸಿದ್ದ ಶಿರಸಂಗಿಯ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ.ಪಿ.ಬಿ. ಬಡಿಗೇರ, ಪೂಜಾ ಮಹೋತ್ಸವ ಸಮಿತಿಯ ನಿರ್ದೇಶಕ ಡಾ.ವೀರೇಶ ಬಡಿಗೇರ ಮಾತನಾಡಿದರು.ಕರ್ನಾಟಕ ರಾಜ್ಯ ವಿಶ್ವ ಬ್ರಾಹ್ಮಣ ಮಠಾಧಿಪತಿಗಳು ಹಾಗೂ ಪೀಠಾಧೀಪತಿಗಳ ಒಕ್ಕೂಟ ಅಧ್ಯಕ್ಷ ರಾಮಚಂದ್ರಸ್ವಾಮೀಜಿ ಹಾಗೂ ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಗನ್ನಾಥ ಸ್ವಾಮೀಜಿ ಆಶಿರ್ವಚನ ನೀಡಿದದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ನಾಗಲಿಂಗಪ್ಪ ಗಂಗೂರು ಸೇರಿದಂತೆ ಅನೇಕ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆ ಮೇಲೆ ಬಾಗಲಕೋಟೆ ತಹಸೀಲ್ದಾರ ವಾಸುದೇವಸ್ವಾಮಿ, ಬಾಗಲಕೋಟೆ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅರವಿಂದ ಪತ್ತಾರ, ಬಾಗಲಕೋಟೆ ತಾಲೂಕು ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ, ಇಳಕಲ್ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ವೀರಭದ್ರಪ್ಪ ಹಿಪ್ಪರಗಿ, ವಿದ್ಯಾಗಿರಿ ಕಾಳಿಕಾ ದೇವಸ್ಥಾನ ಅಧ್ಯಕ್ಷ ವಂತರಾವ್ ಮಾದವ ಕಮ್ಮಾರ, ಬೀಳಗಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೂ ಟಂಕಸಾಲಿ, ಗುಳೇದಗುಡ್ಡ ವಿಶ್ವಕರ್ಮ ಸಮಾಜದ ಅಧ್ಯಕ್ಷ ಚಂದ್ರಶೇಖರ ಬಡಿಗೇರ, ಬಾಗಲಕೋಟೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೌನೇಶ ಪತ್ತಾರ, ಲಕ್ಕುಂಡಿ ಸುಮಲತಾ ಶಿಲ್ಪಿ, ಸಂಚಾಲಕ ಮುತ್ತು ಭಾಸ್ಕರ ಬಡಿಗೇರ, ವ್ಯವಸ್ಥಾಪಕ ಜ್ಞಾನೇಶ್ವರ ಬಡಿಗೇರ, ಕಾಶಿನಾಥ ಪತ್ತಾರ, ಮನೋಹರ ಬಡಿಗೇರ, ಸಿದ್ದಪ್ಪ ಪತ್ತಾರ, ಹಾಗೂ ಸ್ವಾಗತ ಸಮಿತಿ, ಮೆರವಣಿಗೆ ಸಮಿತಿ, ವೇದಿಕೆ ಸಮಿತಿ, ಊಟದ ಸಮಿತಿ ಸದಸ್ಯರು ಭಾಗವಹಿಸಿದ್ದರು.ಮುತ್ತು ಬಾಸ್ಕರ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು, ಡಾ.ಚಂದ್ರಶೇಖರ ಕಾಳನ್ನವರ ವಂದಿಸಿದರು.
ಭವ್ಯ ಮೆರವಣಿಗೆ: ಪ್ರಥಮ ಪೂಜಾ ಮಹೋತ್ಸವ ನಿಮಿತ್ತ ವಿಶ್ವಕರ್ಮಪ್ರಭುವಿನ ಭಾವಚಿತ್ರ ಮೆರವಣಿಗೆ ಲಕ್ಷ್ಮೀದೇವಿ ಡೊಳ್ಳಿನ ಸಂಘದವರಿಂದ ಡೊಳ್ಳು ವಾದ್ಯದೊಂದಿಗೆ ಮೆರವಣಿಗೆಗೆ ಹನುಮಪ್ಪ ಪತ್ತಾರ ಅವರ ಅಧ್ಯಕ್ಷತೆಯಲ್ಲಿ ಬೆಣ್ಣೂರು ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ಲಕ್ಕಪ್ಪ ಹುಂಡೆಕಾರ ಅವರು ಚಾಲನೆ ನೀಡಿದರು. ರಾಚಪ್ಪ ಪಟ್ಟಣದ, ರಾಚಪ್ಪ ಈ ಬೀಳಗಿ, ಸಿದ್ದಪ್ಪ ವಾಲಿಕಾರ, ಎಚ್.ಆರ್. ಮಾಳಿ ಅತಿಥಿಗಳಾಗಿ ಭಾಗವಹಿಸಿದ್ದರು.