ಕನ್ನಡಪ್ರಭ ವಾರ್ತೆ, ಮಣಿಪಾಲ
ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ (ಜಿಸಿಪಿಎಎಸ್) ಆಶ್ರಯದಲ್ಲಿ ನಡೆದ ‘ಚಿತ್ರ ಕಲೋಸ್’ ಎಂಬ ಒಂದು ದಿನದ ಚಿತ್ರಕಲಾ ಕಾರ್ಯಾಗಾರವನ್ನು ಚಾರ್ಕೋಲ್ ಸ್ಕೆಚ್ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಉತ್ತಮ ಕಲೆಗೂ ಜನಪ್ರಿಯ ಕಲೆಗೂ ವ್ಯತ್ಯಾಸವಿದೆ ಎಂದ ಅವರು ಉತ್ತಮ ಕಲೆ ಜನಪ್ರಿಯವಾಗದೇ ಇದರಬಹುದು, ಹಾಗೆಯೇ ಜನಪ್ರಿಯ ಕಲೆ ಉತ್ತಮವಾಗಿಲ್ಲದಿರುವ ಸಾಧ್ಯತೆಗಳಿವೆ. ಕಲೆಯನ್ನು ವಿಮರ್ಶಾತ್ಮಕ ದೃಷಿಕೋನದಿಂದ ನೋಡುವುದನ್ನು ಪ್ರತಿಯೊಬ್ಬರೂ ಕಲಿಯಬೇಕು. ಇಂತಹ ಬೋಧನೆಯ ಅವಶ್ಯಕತೆ ಖಂಡಿತ ಇದೆ ಎಂದು ಅಭಿಪ್ರಾಯಪಟ್ಟರು.ಸಂಗೀತವು ರಾಗ, ತಾಳ ಮತ್ತು ಲಯವನ್ನು ಹೊಂದಿರುವಂತೆ ದೃಶ್ಯ ಕಲೆಯು ರೇಖೆ, ರೂಪ ಮತ್ತು ಬಣ್ಣಗಳನ್ನು ಹೊಂದಿದೆ. ಕಲಾವಿದನಾಗುವುದು ಬಹು ಕಷ್ಟದ ಕೆಲಸ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಮಾತ್ರ ಕಲಾವಿದರಾಗಬಹುದು ಎಂದು ರಮೇಶ್ ರಾವ್ ಹೇಳಿದರು.
ಕಲಾವಿದ ಡಾ.ಜನಾರ್ದನ್ ಹಾವಂಜೆ ಮಾತನಾಡಿ, ಕಲೆಯು ಮನಸ್ಸಿನಲ್ಲಿ ಹುಟ್ಟುತ್ತದೆ ಮತ್ತು ಸೃಜನಶೀಲವಾಗಿ ಕ್ಯಾನ್ವಾಸ್ನಲ್ಲಿ ಪ್ರಕಟವಾಗುತ್ತದೆ ಎಂದರು. ಅವರು ಮ್ಯಾಗಜೀನ್ ಪೇಪರ್ಗಳನ್ನು ಬಳಸಿಕೊಂಡು ಅರ್ಥಪೂರ್ಣವಾದ ಕೊಲಾಜ್ ಅನ್ನು ಹೇಗೆ ರಚಿಸಬಹುದು ಎಂಬುದನ್ನು ಪ್ರದರ್ಶಿಸಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸಮಗ್ರ ದೃಷ್ಟಿಕೋನವನ್ನು ಹೊಂದಲು ಪೂರ್ವ ಮತ್ತು ಪಾಶ್ಚಿಮಾತ್ಯ ಕಲಾ ಸಂಪ್ರದಾಯಗಳನ್ನು ತಿಳಿದುಕೊಳ್ಳಬೇಕು ಎಂದರು.ಅಪರ್ಣಾ ಪರಮೇಶ್ವರನ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಮಣಿಪಾಲ ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.