ಕನ್ನಡಪ್ರಭ ವಾರ್ತೆ ಅಫಜಲ್ಪುರ/ಕರಜಗಿ
ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಗೌರಿ ರಿಕಾರ್ಡಿಂಗ್ ಸ್ಟುಡಿಯೋ ಉದ್ಘಾಟಿಸಿ ಮಾತನಾಡಿ, ಜನಪದ ಕಲೆ ಉಳಿಸುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಜನಪದ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು. ಇಲಾಖೆಯ ಜೊತೆಗೆ ಸಂಘ ಸಂಸ್ಥೆಗಳು ಕೂಡ ಗ್ರಾಮೀಣ ಪ್ರದೇಶದಲ್ಲಿ ಕಲೆಗಳು ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಗೌರಿ ರಿಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆಯಾಗಿದ್ದು. ಗ್ರಾಮೀಣ ಪ್ರದೇಶದ ಯುವ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರ ಗಡಿಭಾಗದಲ್ಲಿರುವ ಕಲಾವಿದರನ್ನು ಗುರುತಿಸಿ ಅವಕಾಶ ಕೊಟ್ಟಾಗ ಮಾತ್ರ ಅವರು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ನಾಗಣಸೂರದ ಅಭಿನವ ಬಸವಲಿಂಗ ಶ್ರೀಗಳು ಹೇಳಿದರು.ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಗೌರಿ ರೆಕಾರ್ಡಿಂಗ್ ಸ್ಟುಡಿಯೋ ಉದ್ಘಾಟಿಸಿ ಮಾತನಾಡಿ, ಕರಜಗಿ ಹೋಬಳಿಯಲ್ಲಿ ಸಮೀಪದಲ್ಲಿ ಯಾವುದೇ ರೆಕಾರ್ಡಿಂಗ್ ಸ್ಟುಡಿಯೋ ಇರಲಿಲ್ಲ. ಈ ಭಾಗದ ಜನರು ವಿಜಯಪುರ ಹಾಗೂ ಸೋಲಾಪುರಕ್ಕೆ ಹೋಗಿ ರೆಕಾರ್ಡಿಂಗ್ ಮಾಡುವಂತಹ ಪರಿಸ್ಥಿತಿಯಿತ್ತು. ಇವತ್ತು ಮಣ್ಣೂರ ಗ್ರಾಮದಲ್ಲಿಯೇ ಗೌರಿ ರೆಕಾರ್ಡಿಂಗ ಸ್ಟುಡಿಯೋ ಪ್ರಾರಂಭವಾಗಿದೆ.
ಈ ಸಂದರ್ಭದಲ್ಲಿ ಕ್ಲಬ್ ಕಲಾವಿದ ಗೌರಿಶಂಕರ ನಾಗಣಸೂರ ಹಾಲಯ್ಯಾ ಸ್ವಾಮಿ ಹಿರೇಮಠ, ಕರಿಸಿದ್ದೇಶ್ವರ ಮುತ್ಯಾ, ಯಲ್ಲಮ್ಮದೇವಿ ಟ್ರಸ್ಟ ಕಮಿಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ ಸುಭಾಷ ಕರೂಟಿ, ವಿಶ್ವನಾಥ ಕೊಪ್ಪಾ ಪ್ರವೀಣ ಗಾಡದ, ಶರಣಪ್ಪ ಕರೂಟಿ, ಹಣಮಂತ ಜಾನಕಾರ, ಸಿದ್ದು ಬಜಂತ್ರಿ ಇತರರಿದ್ದರು.