ಸಮಾಜದಲ್ಲಿ ಆದರ್ಶ ದಂಪತಿಗಳಾಗಿ: ಕಳಕಪ್ಪ ಕಂಬಳಿ

KannadaprabhaNewsNetwork |  
Published : Feb 05, 2025, 12:33 AM IST
೦೩ವೈಎಲ್‌ಬಿ೧:ಯಲಬುರ್ಗಾ ತಾಲೂಕಿನ ದಮ್ಮೂರು ಗ್ರಾಮದಲ್ಲಿ ಸೋಮವಾರ ಶ್ರೀ ಭೀಮಾಂಬಿಕಾದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ಹಾಗೂ ಧಾರ್ಮಿಕ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ  ನೀಡಿ ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿದರು. | Kannada Prabha

ಸಾರಾಂಶ

ದುಶ್ಟಟಗಳಿಂದ ದೂರವಿದ್ದು, ಸುಂದರ ಬದುಕನ್ನು ರೂಪಿಸಿಕೊಂಡು ಸಮಾಜದಲ್ಲಿ ಆದರ್ಶ ದಂಪತಿಗಳಾಗಿ ಬಾಳಬೇಕು.

ಭೀಮಾಂಬಿಕಾದೇವಿ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಉಚಿತ ಸಾಮೂಹಿಕ ಹಾಗೂ ಧಾರ್ಮಿಕ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ದುಶ್ಟಟಗಳಿಂದ ದೂರವಿದ್ದು, ಸುಂದರ ಬದುಕನ್ನು ರೂಪಿಸಿಕೊಂಡು ಸಮಾಜದಲ್ಲಿ ಆದರ್ಶ ದಂಪತಿಗಳಾಗಿ ಬಾಳಬೇಕು ಎಂದು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ತಾಲೂಕಿನ ದಮ್ಮೂರು ಗ್ರಾಮದಲ್ಲಿ ಸೋಮವಾರ ಭೀಮಾಂಬಿಕಾದೇವಿ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಉಚಿತ ಸಾಮೂಹಿಕ ಹಾಗೂ ಧಾರ್ಮಿಕ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೀವನದಲ್ಲಿ ಕಷ್ಟ, ಕಾರ್ಪಣ್ಯಗಳು ಬರುವುದು ಸಹಜ. ಅವುಗಳನ್ನು ನವದಂಪತಿಗಳು ಸಮಾನ ಮನಸ್ಕಾರರಾಗಿ ಅರಿತು, ಬೆರೆತು ಜೀವನ ಸಾಗಿಸಬೇಕು ಎಂದರು.

ತಾಲೂಕಿನ ಕುದರಿಮೊತಿ ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ ಹಾಗೂ ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಮತ್ತು ಹಾಲುಮತ ಸಮಾಜದ ತಾಲೂಕಾಧ್ಯಕ್ಷ ವೀರನಗೌಡ ಬಳೂಟಗಿ ಮಾತನಾಡಿ, ಭಕ್ತರಿಂದ ಮಾತ್ರ ಇಂತಹ ಧಾರ್ಮಿಕ ಕಾರ್ಯಕ್ರಮ ನಡೆಯಲು ಸಾಧ್ಯ ಎನ್ನುವುದಕ್ಕೆ ಈ ಗ್ರಾಮದ ಜಾತ್ರೆಯೇ ಸಾಕ್ಷಿ ಎಂದರು.

ಇಟಗಿ ನಾಗಲಿಂಗಪ್ಪಜ್ಜನವರು ಧರ್ಮರಮಠದ, ಮುಖ್ಯಶಿಕ್ಷಕ ಎಸ್.ಎಂ. ಕಿಂದ್ರಿ, ಮುಖಂಡ ಹುಲಗಪ್ಪ ಬಂಡಿವಡ್ಡರ, ದುರಗಪ್ಪ ಹರಿಜನ, ವೇ.ಮೂ. ಶರಣಯ್ಯ ಹಿರೇಮಠ, ಹನುಮಂತಪ್ಪಜ್ಜ ಧರ್ಮರಮಠ, ರಾಶೀದ ಖಾಜಿ, ಮುಖಂಡರಾದ ಶಿವಶಂಕರರಾವ್ ದೇಸಾಯಿ, ಅಲ್ಲಾಸಾಬ ವಾಲಿಕಾರ, ಎಸ್.ಕೆ. ದಾನಕೈ, ಈರಪ್ಪ ಕುಡಗುಂಟಿ, ಮಲ್ಲನಗೌಡ ಕೋನನಗೌಡ್ರ, ಭೀಮಣ್ಣ ಜರಕುಂಟಿ, ರವಿಕುಮಾರ ಲಿಂಗಣ್ಣನವರ, ಯಲ್ಲಪ್ಪ ಹಳ್ಳಿಗುಡಿ, ಈರಪ್ಪ ರ‍್ಯಾವಣಕಿ, ನಾಗರಾಜ ಚೊಣ್ಣದ, ಗುರುನಾಥ ಅಟಮಾಳಗಿ, ರಾಜಪ್ಪ ಹಗೇದಾಳ, ಬಸವರಾಜ ಜಗ್ಲರ, ಹನುಮಂತಪ್ಪ ಉಪ್ಪಾರ, ಬಸವನಗೌಡ ರಾಮಶೆಟ್ಟಿ ಸೇರಿದಂತೆ ಗ್ರಾಪಂ ಸದಸ್ಯರು, ಗುರು-ಹಿರಿಯರು, ಯುವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ
ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ