26ರಿಂದ ಮುಂಡರಗಿಯ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಪ್ರವಚನ

KannadaprabhaNewsNetwork |  
Published : Jul 23, 2026, 02:15 AM IST
ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪ್ರವಚನ ಕಮಿಟಿ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಪ್ರವಚನವನ್ನು ಬಸವ ಬೆಳವಿಯ ಚರಂತೇಶ್ವರ ಮಠದ ಶರಣಬಸವ ದೇವರು ನೆರವೇರಿಸಲಿದ್ದಾರೆ. ಜು. 26ರಂದು ಸಂಜೆ 7 ಗಂಟೆಗೆ ಪ್ರವಚನದ ಉದ್ಘಾಟನಾ ಸಮಾರಂಭ ಜರುಗಲಿದೆ.

ಮುಂಡರಗಿ: ಇಲ್ಲಿನ ತೋಂಟದಾರ್ಯ ಮಠದಲ್ಲಿ ಪ್ರತಿವರ್ಷದಂತೆ ಆಷಾಢ ಮಾಸದ ಪ್ರವಚನ ನಡೆಯಲಿದೆ. ಜು. 26ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಎಡೆಯೂರು ತೋಂಟದ ಸಿದ್ದಲಿಂಗೇಶ್ವರರ ಚರಿತಾಮೃತ ಪ್ರವಚನ ಜರುಗಲಿದೆ ಎಂದು ಪ್ರವಚನ ಸಮಿತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವಚನವನ್ನು ಬಸವ ಬೆಳವಿಯ ಚರಂತೇಶ್ವರ ಮಠದ ಶರಣಬಸವ ದೇವರು ನೆರವೇರಿಸಲಿದ್ದಾರೆ. ಜು. 26ರಂದು ಸಂಜೆ 7 ಗಂಟೆಗೆ ಪ್ರವಚನದ ಉದ್ಘಾಟನಾ ಸಮಾರಂಭ ಜರುಗಲಿದ್ದು, ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಟ್ಟಣದ ಹಿರಿಯ ನಾಗರಿಕರಾದ ರತ್ನಾ ಮಹಾಲಿಂಗ ಯಾಳಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉದ್ಯಮಿ ಕಸ್ತೂರೆಮ್ಮ ನಾವಿ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾ‍, ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಐ.ಎಸ್. ಪೂಜಾರ ಆಗಮಿಸಲಿದ್ದಾರೆ.

ಶ್ರೀಮಠದ ಹಿರಿಯರಾದ ಕೊಟ್ರೇಶ ಅಂಗಡಿ ಮತನಾಡಿ, ಜು. 29ರಂದು ರಾತ್ರಿ 8 ಗಂಟೆಗೆ ಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ, ಆ. 2ರಂದು ಸಂಜೆ 7 ಗಂಟೆಗೆ ಪಂ. ಎಂ. ವೆಂಕಟೇಶ ಕುಮಾರ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದೆ. ಆ. 6ರಂದು ರಾತ್ರಿ 8 ಗಂಟೆಗೆ ಅಕ್ಕ ಅಂಗಾರ ತಂಗಿ ಬಂಗಾರ ಹಾಸ್ಯ ಪ್ರಧಾನವಾದ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಪ್ರವಚನ ಸಮಿತಿ ಕಾರ್ಯದರ್ಶಿ ಶರಣಪ್ಪ ಕುಬಸದ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಸಯ್ಯ ಗಿಂಡಿಮಠ, ಖಜಾಂಚಿ ಶಿವಕುಮಾರ ಬೆಟಗೇರಿ, ವೇದಿಕೆ ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಹಿರಿಯರಾದ ಈಶಣ್ಣ ಬೆಟಗೇರಿ, ಪಾಲಾಕ್ಷಿ ಗಣದಿನ್ನಿ, ಎಚ್. ವಿರುಪಾಕ್ಷಗೌಡ, ದೇವಪ್ಪ ರಾಮೇನಹಳ್ಳಿ, ಗಿರೀಶಗೌಡ ಪಾಟೀಲ, ಶಿವಯೋಗಿ ಕೊಪ್ಪಳ, ಅಶೋಕ ಅಣ್ಣೀಗೇರಿ, ಪವನ್ ಚೋಪ್ರಾ, ಸುರೇಶ ನಾಯಕ, ಪರಮೇಶ್ವರಪ್ಪ ಕಣಗಿನಹಾಳ, ಡಿ.ಜಿ. ಪೂಜಾರ, ಸದಾಶಿವಯ್ಯ ಕಬ್ಬೂರಮಠ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕೋಲಾ- ಕಾರವಾರ ಪಾದಯಾತ್ರೆಗೆ ಚಾಲನೆ
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ