ಕನ್ನಡಪ್ರಭ ವಾರ್ತೆ ಮೈಸೂರು
ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆಯು ಅಶೋಕಪುರಂ ಮೂರನೇ ಕ್ರಾಸಿನ ಕೆ. ಶಿವರಾಂ ಕ್ರೀಡಾಂಗಣದ ಭೀಮ ಫಿಟ್ನೆಸ್ ವ್ಯಾಯಾಮ ಶಾಲೆಯ ಬುದ್ಧ ಧ್ಯಾನ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧನ ಕುರಿತ ಪುಸ್ತಕದಿಂದಾಗಿ ಅಂಬೇಡ್ಕರ್ ಬದುಕು ಬದಲಾಯಿತು. ಅದೇ ರೀತಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಬೇಕು. ಆ ಮೂಲಕ ಅಂಬೇಡ್ಕರ್ ಅವರನ್ನು ಅರಿಯಬೇಕು. ಮಗು ನಮ್ಮಂತಾಗಬಾರದು ಎಂದು ವಿದ್ಯೆ ಕೊಡಿಸುವ ತಂದೆ- ತಾಯಿ, ಪ್ರಾಥಮಿಕ ಶಾಲೆಗೆ ದಾಖಲು ಮಾಡಿಕೊಂಡು ವಿದ್ಯೆ ನೀಡುವ ಗುರುಗಳನ್ನು ಮರೆಯಬಾರದು ಎಂದು ಆವರು ಕಿವಿಮಾತು ಹೇಳಿದರು.ಅಂಬೇಡ್ಕರ್ ಅವರು ಕರುಣೆ ಹಾಗೂ ಮೈತ್ರಿ ಕಲಿಸಿದ ಬುದ್ಧ, ಸಂತ ಕಬೀರ್ ಹಾಗೂ ಜ್ಯೋತಿ ಬಾಫುಲೆ ಅವರನ್ನು ಗುರುಗಳಾಗಿ ಗುರುತಿಸಿಕೊಂಡು, ಅರಿವಿನ ಜ್ಞಾನ ಹೆಚ್ಚಿಸಿಕೊಂಡು ಭಾತೃತ್ವ, ಸಮಾನತೆ, ಸೋದರತ್ವ ಬೆಳೆಸಿಕೊಂಡರು. ನೀವು ಅವರಂತಾಗಬೇಕು ಎಂದು ಅವರು ಹೇಳಿದರು.
ಬುದ್ಧ ನಿನಗೆ ನೀನೆ ಬೆಳಕು ಎಂದರು. ಅಂದರೆ ನಾವು ಕಣ್ಣು ಮುಚ್ಚಿದಾಗ ಕತ್ತಲು, ಕಣ್ಣು ತೆರೆದರೆ ಬೆಳಕು. ಅದೇ ರೀತಿ ನಾವು ಅವರಿವರಂತಾಗಬೇಕು ಎಂದು ಬಯಸದೇ ನಾನು ನನ್ನಂತಾಗಬೇಕು. ಅಂಕದ ಹಿಂದೆ ಓಡುವ ಬದಲು ಅಂಕೆಯಲ್ಲಿ ಬದುಕುವಂತಾಗಬೇಕು. ಸಮ ಸಮಾಜ, ಸಾಮರಸ್ಯ, ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಸೋದರತ್ವ ಇರಬೇಕು. ಅಂಬೇಡ್ಕರ್ರ್ ಅವರು ಸಂವಿಧಾನದಲ್ಲಿ ಹೇಳಿರುವುದು ಇದೇ ಅಂಶಗಳನ್ನು ಎಂದು ಅವರು ನೆನಪಿಸಿದರು.
ಸಂಸ್ಥೆಯ ಸದಸ್ಯರು ಬುದ್ಧ ವಂದನೆ ಸಲ್ಲಿಸಿದರು. ಕೆಂಪಸಿದ್ದಯ್ಯ ಪ್ರಾರ್ಥಿಸಿದರು. ಪುರುಷೋತ್ತಮ ಸ್ವಾಗತಿಸಿದರು. ಶಾಂತರಾಜು ನಿರೂಪಿಸಿದರು. ಮಹಾಲಿಂಗಣ್ಣ, ಶಿವಣ್ಣ, ಚಂದ್ರಯ್ಯ, ಚಂದ್ರಶೇಖರ, ಮಹಾದೇವಸ್ವಾಮಿ ಮೊದಲಾದವರು ಇದ್ದರು.