ನಗರಸಭೆಯಾಗಿ ಮೇಲ್ದರ್ಜೆಗೇರಿದ ಅಥಣಿ ಪುರಸಭೆ

KannadaprabhaNewsNetwork |  
Published : Dec 13, 2025, 03:15 AM IST
ಪುರಭಸೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟಮೊದಲ ಪುರಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಥಣಿ ಪುರಸಭೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಅಥಣಿ ಪುರಸಭೆಯು ನಗರಸಭೆಯಾಗಿ ಪರಿವರ್ತನೆ ಹೊಂದಿದೆ ಎಂದು ಪುರಸಭೆಯ ಸದಸ್ಯರು ಹಾಗೂ ಅಭಿಮಾನಿಗಳು ಜೈ ಕಾರ ಹಾಕಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟಮೊದಲ ಪುರಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಥಣಿ ಪುರಸಭೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಅಥಣಿ ಪುರಸಭೆಯು ನಗರಸಭೆಯಾಗಿ ಪರಿವರ್ತನೆ ಹೊಂದಿದೆ ಎಂದು ಪುರಸಭೆಯ ಸದಸ್ಯರು ಹಾಗೂ ಅಭಿಮಾನಿಗಳು ಜೈ ಕಾರ ಹಾಕಿ ಅಭಿನಂದಿಸಿದರು.

ನೆರೆಯ ಮಹಾರಾಷ್ಟ್ರದ ಪುನಾ ಪುರಸಭೆಯೊಂದಿಗೆ ಸ್ಥಾಪನೆಯಾದ ಈ ಪುರಸಭೆ ಮೇಲ್ದರ್ಜೆಗೆ ಏರಿಸಲು ಶತಮಾನವೇ ಕಳೆಯಬೇಕಾಯಿತು. ರಾಜ್ಯ ಸರ್ಕಾರ ಇತ್ತೀಚೆಗೆ ಅನೇಕ ಪುರಸಭೆ, ಪಟ್ಟಣ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿದ್ದು, ಅವುಗಳ ಜೊತೆಗೆ ಅಥಣಿ ಪುರಸಭೆ ಹೆಸರು ಇಲ್ಲದಿರುವುದು ಈ ನಗರ ಸೇವಕರಿಗೆ ಮತ್ತು ನಾಗರಿಕರಿಗೆ ಬೇಸರ ತಂದಿತ್ತು. ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಶಾಸಕ ಲಕ್ಷ್ಮಣ ಸವದಿ ಅವರು ತಿಳಿಸುತ್ತಿದ್ದಂತೆ ಯುವ ಮುಖಂಡ ಶಿವಕುಮಾರ ಸವದಿ, ಪುರಸಭೆ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ ನೇತೃತ್ವದಲ್ಲಿ ಪುರಸಭೆಯ ಸದಸ್ಯರು ಅಂಬೇಡ್ಕರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು

ಈ ಸಂದರ್ಭದಲ್ಲಿ ಯುವ ಮುಖಂಡ ಶಿವಕುಮಾರ ಸವದಿ ಮಾತನಾಡಿ, ಅಥಣಿ ಪುರಸಭೆ ನಗರ ಸಭೆಯಾಗಿ ಈ ಮೊದಲೇ ಮೇಲ್ದರ್ಜೆಗೇರಬೇಕಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಹಿನ್ನಡೆಯಾಗಿತ್ತು. ಅಥಣಿ ಜನರು ಬಹುದಿನಗಳ ಬೇಡಿಕೆಯನ್ನು ಶಾಸಕರಾದ ಲಕ್ಷ್ಮಣ ಸವದಿ ಪ್ರಯತ್ನದ ಫಲವಾಗಿ ಈಡೇರಿದೆ ಪುರಸಭೆಯಿಂದ ನಗರ ಸಭೆಯಾಗಿ ಮೇಲ್ದರ್ಜೆಗೇರಿದ್ದು, ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು.

ಶುಕ್ರವಾರ ಮಧ್ಯಾಹ್ನ ಪುರಸಭೆ ಕಚೇರಿ ಮುಂದೆ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿಯ ಅಧ್ಯಕ್ಷ ದತ್ತಾ ವಾಸ್ಟರ ಸೇರಿದಂತೆ ಅನೇಕ ಪುರಸಭೆ ಸದಸ್ಯರು ಪೌರಕಾರ್ಮಿಕರಿಗೆ ಮತ್ತು ಪುರಸಭೆ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಮಾತನಾಡಿ, 1853 ರಲ್ಲಿ ಕರ್ನಾಟಕದ ಮೊದಲ ಪುರಸಭೆಯಾಗಿ ಸ್ಥಾಪನೆಗೊಂಡಿದ್ದ ಅಥಣಿ ಪುರಸಭೆಯು ಇಂದು ನಗರ ಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿರುವ ವಿಷಯ ತಿಳಿದು ಸಂತೋಷವಾಗಿದೆ ಎಂದು ಅಭಿನಂದಿಸಿದರು.

ಪುರಸಭೆ ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ ಮಾತನಾಡಿ, ಶಾಸಕರಾದ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಅಥಣಿ ಪುರಸಭೆ ಇಂದು ನಗರ ಸಭೆಯಾಗಿ ಪರಿವರ್ತನೆಯಾಗಿದೆ. ಇದರಿಂದ ಅಥಣಿ ಪಟ್ಟಣದ ಸುಧಾರಣೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಮತ್ತು ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಹೆಚ್ಚಾಗಲಿದೆ. ವಿಸ್ತಾರವಾಗಿ ಬೆಳೆದಿರುವ ಅಥಣಿ ಪಟ್ಟಣದ ಸಮರ್ಥ ಆಡಳಿತ ಒದಗಿಸಲು ಸಹಕಾರಿಯಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.ಈ ವೇಳೆ ಸಂತೋಷ ಸಾವಡಕರ, ರಾಜಶೇಖರ ಗುಡೋಡಗಿ, ನರಸು ಬಡಕಂಬಿ, ಮಲ್ಲೇಶ ಹುದ್ದಾರ, ರಾಜು ಬುಲಬುಲೆ, ಬಿ.ಎನ್.ಪಾಟೀಲ, ವಿಶ್ವನಾಥ ಗಡದೆ, ವೆಂಕಟೇಶ ದೇಶಪಾಂಡೆ, ಬಸು ನಾಯಿಕ, ಮುಸ್ತಾಕ್ ಮುಲ್ಲಾ. ಆಸೀಫ್ ತಾಂಬೋಳಿ. ಇಲಿಯಾಸ್ ಹಿಪ್ಪರಗಿ. ಶ್ರೀನಿವಾಸ ಪಟ್ಟಣ, ಆನಂದ ಮಾಕಾಣಿ, ಆನಂದ ಮಾದಗುಡಿ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.ಕೋಟ್‌ ಅಥಣಿ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ನನ್ನದು. ಶಿವಯೋಗಿಗಳ ಪುಣ್ಯ ಭೂಮಿ ಅಥಣಿ ಪಟ್ಟಣ ಸ್ವಚ್ಛ ಹಾಗೂ ಸುಂದರ ತಾಣವನ್ನಾಗಿ ಪರಿವರ್ತಿಸಲು ಅಥಣಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜಗೇರಿಸಲಾಗಿದೆ. ಪಟ್ಟಣದ ಮತ್ತು ತಾಲೂಕಿನ ಜನತೆಗೆ ಪರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಅಭಿನಂದಿಸುತ್ತೇನೆ. ಲಕ್ಷ್ಮಣ ಸವದಿ, ಶಾಸಕರು ಅಥಣಿ

-------

ಕೋಟ್‌,

ಅಥಣಿ ಶಾಸಕರ ಪ್ರಯತ್ನದಿಂದ ಪುರಸಭೆ ಮೇಲ್ದರ್ಜೆಗೇರಿರುವುದು ಸಂತಸ ತಂದಿದೆ. 27 ವಾರ್ಡ್‌ಗಳಲ್ಲಿ ಮತ್ತು ಅನೇಕ ಹೊಸ ಬಡಾವಣೆಗಳನ್ನು ಹೊಂದಿರುವ ಅಥಣಿ ಪಟ್ಟಣ ವಿಸ್ತಾರವಾಗಿ ಬೆಳೆಯುತ್ತಿದೆ. ಇಲ್ಲಿ ನಗರಸಭೆ ಆಗುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಮತ್ತು ಹೆಚ್ಚಿನ ಸಿಬ್ಬಂದಿ ಬರುವುದರಿಂದ ಸಾರ್ವಜನಿಕ ಸೇವೆಗಳನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

ಅಶೋಕ ಗುಡಿಮನಿ, ಪುರಸಭೆ ಮುಖ್ಯಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ