ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾ ಕಸಾಪ ದಕ್ಷಿಣ ವಲಯ ಕಲಬುರ್ಗಿ ಘಟಕದ ವತಿಯಿಂದ ನಡೆದ ಕಲಬುರಗಿ ವಿಭಾಗ ಮಟ್ಟದ ಎರಡನೇ ದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಸಿ ಮಾತನಾಡಿದರು.
ದಾಸ ಸಾಹಿತ್ಯದ ಸಮಗ್ರ ವಿಚಾರಗಳನ್ನು ಮುಂದಿನ ಜನಾಂಗಕ್ಕೆ ತಿಳಿಸಲು ಅಧ್ಯಯನದ ಅಗತ್ಯವಿದ್ದು ಅದಕ್ಕಾಗಿ ಕಲ್ಬುರ್ಗಿ ವಿಶ್ವವಿದ್ಯಾಲದಲ್ಲಿ ಪೀಠ ಆರಂಭಿಸಿದರೆ ಪ್ರಯೋಜನವಾಗಲಿದ್ದು ಕೂಡಲೇ ಸರ್ಕಾರ ಜೊತೆ ಚರ್ಚಿಸುವೆ ಎಂದರು.12ನೇ ಶತಮಾನದ ವಚನಕಾರರು ಮತ್ತು ನಂತರ ಬಂದ ದಾಸರು ಜಾತಿ ತಾರತಮ್ಯ ಅಂಧ ಶ್ರದ್ಧೆ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಹುಟ್ಟು ಹಾಕಲು ಕಾರಣರಾದರು ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾಳು ಮಾಡಬೇಡಿರಿ ಎಂದು ಜನತೆಗೆ ಸಂದೇಶ ನೀಡಿ ಕುಲಕುಲ ಎಂದು ಹೊಡೆದಾಡದಿರಿ ಎಂಬ ಜೀವನ ಮೌಲ್ಯಗಳು ಮಾನವೀಯತೆಯನ್ನು ದಾಸರು ಹಾಡುಗಳಲ್ಲಿ ಸಾರಿದರ ಎಂದರು.
ಹರಿದಾಸರತ್ನ ಪ್ರಶಸ್ತಿ ಪ್ರಧಾನ ಮಾಡಿದ ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಮಾತನಾಡಿ ಇಂದಿನ ಪೀಳಿಗೆಗೆ ಹರಿದಾಸ ಸಾಹಿತ್ಯದ ಮಹತ್ವವನ್ನು ತಿಳಿಸುವ ಈ ಸಮ್ಮೇಳನ ಅರ್ಥಪೂರ್ಣವಾಗಿದೆ. ವಚನಕಾರರು ಮತ್ತು ದಾಸರು ಸಮಾಜಕ್ಕೆ ಮಹೋನ್ನತ ಕೊಡುಗೆ ನೀಡಿ ಮಾರ್ಗದರ್ಶನ ಮಾಡಿರುವುದು ಅನುಕರಣೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶಿವರಾಜ ಅಂಡಗಿ ಸ್ವಾಗತ ಕೋರಿದರು . ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ತೆಗಲ್ ತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ವಲಯ ಅದ ಅಧ್ಯಕ್ಷರಾದ ಶ್ಯಾಮ ಸುಂದರ ಕುಲಕರ್ಣಿ ಭಾಷಣ ಮಾಡಿದರು. ಶ್ರೀಮತಿ ಶ್ರುತಿ ಸಗರ ಪ್ರಾರ್ಥನೆ ಗೀತೆ ಹಾಡಿದರು ನೂತನ ವಿದ್ಯಾಲಯದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತಪಡಿಸಿದರು. ಪರಿಷತ್ತಿನ ಸದಸ್ಯರಾದ ಮಂಜುನಾಥ ಕಂಬಳಿಮಠ ವಂದಿಸಿದರು.
ನಂತರ ನಡೆದ ಅಮೃತ ಸಿಂಚನ ಗೋಷ್ಠಿಯಲ್ಲಿ ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ವಿಷಯದಲ್ಲಿ ಡಾ. ಶೈಲಜಾ ಕೊಪ್ಪರ ಮತ್ತು ರೂಪಾ ಕುಲಕರ್ಣಿ ಉಪನ್ಯಾಸ ನೀಡಿದರು ಹಿರಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು ಶಕುಂತಲಾ ಪಾಟೀಲ್, ಜ್ಯೋತಿ ಕೋಟನೂರ ಜ್ಯೋತಿ ಲಾತೂರಕರ್, ವೆಂಕುಬಾಯಿ ರಜಪೂತ್ ಉಪಸ್ಥಿತರಿದ್ದರು ಸಿದ್ದಲಿಂಗಬಾಳಿ ನಿರೂಪಿಸಿದರು. ಸಮ್ಮೇಳನದಲ್ಲಿ ಅನಂತ ಚಿಂಚನಸೂರು ತಂಡದಿಂದ ಭರತನಾಟ್ಯ ಅನಂತ ಮಿಸ್ತ್ರಿ ಅವರಿಂದ ಸಂಗೀತ ಕಾರ್ಯಕ್ರಮ ವಿವಿಧ ಭಜನಾ ಮಂಡಳಿಗಳಿಂದ ದಾಸರ ಹಾಡಿನ ಸ್ಪರ್ಧೆ ನೆರವೇರಿತು ಈ ಸಂದರ್ಭದಲ್ಲಿ ಮತ್ತು ವಿಶೇಷ ಸೇವೆ ಸಲ್ಲಿಸಿದವರಿಗೆ ಸನ್ಮಾನ ನಡೆಯಿತು.