ಚನ್ನಪಟ್ಟಣ: ತಾಲೂಕಿನ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಹಾಗೂ ಶ್ರೀಲಕ್ಷ್ಮೀ ವೆಂಕಟೇಶ್ವರ ಬ್ರಹ್ಮರಥೋತ್ಸವ ಜ.12ರಂದು ಶುಕ್ರವಾರದಿಂದ ಜ.22ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ.
ಬಹುದೊಡ್ಡ ಜಾತ್ರೆ:
ಅಯ್ಯನಗುಡಿ ಜಾತ್ರೆಯಲ್ಲಿ ದನಗಳ ಖರೀದಿ ಹಾಗೂ ಮಾರಾಟದ್ದು ವಿಶೇಷ. ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಸಹಸ್ರಾರು ದನಗಳು ಜಾತ್ರೆಗೆ ಆಗಮಿಸುತ್ತವೆ. ಇನ್ನು ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಹೊರರಾಜ್ಯಗಳಿಂದಲೂ ರಾಸುಗಳು ಆಗಮಿಸುತ್ತವೆ.ಸಿದ್ಧತೆಗೆ ಸೂಚನೆ:
ಇನ್ನು ಜಾತ್ರಾ ಮಹೋತ್ಸವದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ರೈತರು ಭಾಗವಹಿಸುವುದರಿಂದ ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಮಳಿಗೆಗಳನ್ನು ತೆರೆಯುವಂತೆ ಸೂಚಿಸಲಾಗಿದೆ.
ಬಾಕ್ಸ್................
ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಹಾಗೂ ಶ್ರೀಲಕ್ಷ್ಮೀ ವೆಂಕಟೇಶ್ವರ ಬಹ್ಮರಥೋತ್ಸವಕ್ಕೆ ಹಿಂದೆಲ್ಲ ದೂರದ ಊರುಗಳಿಂದ ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಕುಟುಂಬ ಸಮೇತರಾಗಿ ಜನ ಆಗಮಿಸುತ್ತಿದ್ದರು.
ಎರಡು ವರ್ಷ ಕೊರೋನಾ ಸಾಂಕ್ರಾಮಿಕದಿಂದ ಕಾರಣಕ್ಕೆ ಜಾತ್ರೆ ಮೇಲೆ ಕಾರ್ಮೋಡ ಕವಿದಿತ್ತು. ಕಳೆದ ವರ್ಷ ರಾಸುಗಳಿಗೆ ಅಂಟಿದ್ದ ಚರ್ಮಗಂಟು ರೋಗದ ಕಾರಣ ಜಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಈ ಬಾರಿ ವಿಜೃಂಭಣೆಯ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ.
ಇಂದಿನಿಂದಲೇ ವಿವಿಧ ಪೂರ್ಜಾ ಕಾರ್ಯ
ಜ.12ರಂದು ನಿತ್ಯಾರಾಧನೆ, ಮಂಗಳಸಪ್ನನ, ಮೃತಿಕಾ ಸಂಗ್ರಹಣಾ, ಅಂಕುರಾರ್ಪಣೆ. 13ರಂದು, ಧ್ವಜಾರೋಹಣ, ಭೇರಿತಾಡನ, ಹಂಸವಾಹನೋತ್ಸವ, 14ರಂದು ಮಹಾ ಸುದರ್ಶನ ಹೋಮ, ಶೇಷವಾಹನೋತ್ಸವ, 15ರಂದು ಪ್ರಾಕಾರೋತ್ಸವ ವಿಷ್ಣು ಸಹಸ್ರನಾಮ ಹೋಮ, ಚಂದ್ರಮಂಡಲ ವಾಹನೋತ್ಸವ, ಹನುಮಂತೋತ್ಸವ, 16ರಂದು ಮೂರ್ತಿ ಹೋಮ, ವೈಭವ ವೈರಮುಡಿ ಉತ್ಸವ, 17ರಂದು ಆಂಜನೇಯ ಸಹಸ್ರನಾಮ ಹೋಮ, ಪ್ರಹ್ಲಾದ ಪರಿಪಾಲನೆ, ಗರುಡೊತ್ಸವ, 18ರಂದು ಮಂಟಪೋತ್ಸವ, ಗಜವಾಹನೋತ್ಸವ, ಶ್ರೀಸ್ವಾಮಿಯವರ ತಿರುಕಲ್ಯಾಣೋತ್ಸವ ನಡೆಯಲಿದೆ.
19ರಂದು ಬೆಳಗ್ಗೆ 11.55ರಿಂದ 12.55ಕ್ಕೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮರಥಾರೋಹಣ, ಶ್ರೀಯವರ ಯಾತ್ರಾದಾನ, ಗೋವು ಮತ್ತು ಅಶ್ವಪೂಜೆ, ರಥಯಾತ್ರೆ, ಹೂವಿನಪಲ್ಲಕ್ಕಿ ನಡೆಯಲಿದೆ. 20ರಂದು ಸಮರಭೂಪಾಲವಾಹನ, ಶ್ರೀಯವರ ಶಯನೋತ್ಸವ, 21ರಂದು ಕುದುರೆಯಾಳಿ ಉತ್ಸವ, ವಸಂತೋತ್ಸವ, ಮಹಾಪೂರ್ಣಾಹುತಿ, ಪುಷ್ಪಮುಡಿ ಉತ್ಸವ, 22ರಂದು ಮಹಾಭಿಷೇಕ, ಶಾಂತೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಶ್ರೀಸಾಮಿಯರಿಗೆ ಪುಷ್ಟಯಾಗ ನಡೆಯಲಿದೆ.ಪೊಟೋ೧೧ಸಿಪಿಟಿ೨:ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ.
ಪೊಟೋ೧೧ಸಿಪಿಟಿ೩:ಶ್ರೀ ಕೆಂಗಲ್ ಆಂಜನೇಯಸ್ವಾಮಿ ವಿಗ್ರಹ.