ಕನ್ನಡಪ್ರಭ ವಾರ್ತೆ, ಕಡೂರು
ಜೊತೆಗೆ ವಿಕಲಚೇತನರ ಅಭ್ಯುದಯ ಸಂಸ್ಥೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕು ನೊಳಂಬ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದು, ನೊಳಂಬ ಸಹಕಾರ ಸಂಘ, ಸಮುದಾಯ ಭವನ, ಬಯಲು ಬಸವೇಶ್ವರ ಕಲ್ಯಾಣ ಮಂಟಪ ಸೇರಿದಂತೆ ಸಮಾಜದ ಬಂಧುಗಳಿಗೆ ಉತ್ತಮ ಸಹಕಾರ ನೀಡಿದ್ದಾರೆ. ಸಮಾಜ ಸರ್ವಾನುಮತದಿಂದ ಗುರುಪ್ರಸಾದ್ ಆಯ್ಕೆಮಾಡಿದ್ದು, ಮುಂದಿನ ದಿನಗಳಲ್ಲಿ ಸಮಾಜ ಮುನ್ನಡೆಸಲಿದ್ದಾರೆ ಎಂದರು.ನೂತನ ಅಧ್ಯಕ್ಷ ಬಿ.ಗುರುಪ್ರಸಾದ್ ಮಾತನಾಡಿ, ನಮ್ಮ ಸಮಾಜ ಕಳೆದ ಸುಮಾರು 20 ವರ್ಷಗಳಿಂದ ನಾಯಕರಿಲ್ಲದೆ ಸಮಾಜ ನಡೆದುಕೊಂಡು ಬಂದಿದೆ. ಸಮಾಜಕ್ಕೆ ಅಧ್ಯಕ್ಷರ ಅವಶ್ಯಕತೆ ಇದ್ದ ಕಾರಣ ತಾಲೂಕಿನ ಎಲ್ಲ ಹೋಬಳಿಗಳ ಮುಖಂಡರು ಸಭೆ ಸೇರಿ ತಮ್ಮನ್ನು ಆಯ್ಕೆ ಮಾಡಿದ್ದು ತಾವು ಸಮಾಜದ ಮುಖಂಡರಿಗೆ ಕೃತಜ್ಞತೆ ಹೇಳುತ್ತೇನೆ.ಎಲ್ಲ ಸಮಾಜದ ಮುಖಂಡರು ಹಾಗೂ ನಮ್ಮ ಸಮಾಜದ ಹಿರಿಯರು, ಕಿರಿಯರ ಸಲಹೆ ಸೂಚನೆ ಪಡೆದು ಸಮಾಜ ಮುನ್ನಡೆ ಸುತ್ತೇವೆ. ಮೊದಲು ಶೈಕ್ಷಣಿಕವಾಗಿ ಸಮಾಜಕ್ಕೆ ಕೊಡುಗೆ ನೀಡಬೇಕಿದ್ದು. ರಾಜಕೀಯದಿಂದ ದೂರ ಇದ್ದು ಸಮಾಜವನ್ನು ಸಂಘಟಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕಾಮನಕೆರೆ ಶಶಿಧರ್, ಕೆ.ಬಿ.ಬಸವರಾಜಪ್ಪ,ವಕೀಲರಾದ ರಾಜು, ಜಗದೀಶ್, ಕಲ್ಲೇಶಪ್ಪ, ಶಿಕ್ಷಕ ಮಲ್ಲಿಕಾರ್ಜುನ್, ಕುಶ ಸೇರಿದಂತೆ ಮತ್ತಿತರರು ಇದ್ದರು.23ಕೆಕೆಡಿಯು2.
ಕಡೂರು ತಾಲೂಕು ನೊಳಂಬ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಬಿ.ಗುರುಪ್ರಸಾದ್ ಆಯ್ಕೆಯಾದರು. ಅವರನ್ನು ಸಮಾಜದ ಬಂಧುಗಳು ಅಭಿನಂದಿಸಿದರು.