ಕನ್ನಡಪ್ರಭ ವಾರ್ತೆ ಕಲಬುರಗಿ
ಮೂವರು ಮಹಿಳೆಯರ ಸೆರೆ:
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಗುವಿನ ಅಪಹರಣ ಪ್ರಕರಣ ಸುಖಾಂತ್ಯ ಕಂಡ ಬಗೆಯನ್ನು ಮಾಧ್ಯಮದವರಿಗೆ ವಿವರಿಸಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ, ಮೂವರು ಮನೆ ಕೆಲಸದವರು ಸೇರಿ ಮಗು ಅಪಹರಣ ಮಾಡಿರೋದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪ್ರಕರಣದಲ್ಲಿ ಎಂಸ್ಕೆ ಮಿಲ್ ಬಡಾವಣೆಯ ನಿವಾಸಿಗಳಾದ ಮನೆ ಕೆಲಸದ ವೃತ್ತಿಯಲ್ಲಿರುವ ಉಮೇರಾ (30), ನಸರಿನ್ ಬಾನು (32) ಹಾಗೂ ಫಾತಿಮಾ (35) ಈ ಮೂವರು ಮಹಿಳೆಯರನ್ನು ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾಗಿ ಹೇಳಿದ್ದಾರೆ.50 ಸಾವಿರಕ್ಕೆ ಡೀಲ್- ಮಗು ಅಪಹರಣಕ್ಕೆ ಸ್ಕೆಚ್!ಸಂತಾನವಿಲ್ಲದೆ ಪರಿತಪಿಸುತ್ತಿದ್ದ ದಂಪತಿ ಜೋಡಿಗೆ ಮಗು ಬೇಕಾಗಿತ್ತು. ಅದಕ್ಕಾಗಿ ಆ ದಂಪತಿ ದತ್ತು ಪ್ರಕ್ರಿಯೆ ನಡೆಸಲು ಮುಂದಾದರೂ ಗಂಡು ಮಗು ಪಡೆಯಲಾಗದೆ ನಿರಾಶರಾಗಿದ್ದರು. ದತ್ತು ಪ್ರಕ್ರಿಯೆಯಲ್ಲಿ ಹೆಣ್ಣು ಶಿಶುವನ್ನೇ ನೀಡೋದರಿಂದ ಆ ದಂಪತಿ ನಿರಾಶರಾಗಿ ಇಂತಹ ವಾಮ ಮಾರ್ಗಕ್ಕೆ ಇಳಿದಿದ್ದರು. ತಮ್ಮ ಪರಿಚಿತರಿಂದ ಈ ಮೂವರು ಮಕ್ಕಳ ಕಳ್ಳಿಯರ ಸಂಪರ್ಕಕ್ಕೆ ಬಂದ ದಂಪತಿ ಗಂಡು ಮಗುವಿನ ಬೇಡಿಕೆ ಇಟ್ಟು 50 ಸಾವಿರಕ್ಕೆ ಡೀಲ್ ಕುದುರಿಸಿದ್ದರು. ಈ ಮೂವರಿಗೆ ಮುಂಗಡವಾಗಿ 25 ಸಾ. ರು ಹಣವನ್ನೂ ನೀಡಿದ್ದರು ಎಂಬುದನ್ನು ಬಂಧಿತ ಮೂವರು ಮನೆಗೆಲಸದವರು ಬಾಯಿ ಬಿಟ್ಟಿದ್ದಾರೆಂದು ಆಯುಕ್ತ ಡಾ. ಶರಣಪ್ಪ ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನ ಮಗುವಿನ ಅಪಹರಣ ಮಾಡಲಾಗಿತ್ತು. ಈ ಕುರಿತಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮಗು ಪತ್ತೆಗೆ 3 ವಿಶೇಷ ತನಿಖೆ ತಂಡಗಳ ರಚನೆಯಾಗಿತ್ತು.
ರೈಲು, ಬಸ್ ನಿಲ್ದಾಣ ಇಲ್ಲೆಲ್ಲಾ ನಿಗಾ ಇಟ್ಟಿದ್ದೇವು. ನಮ್ಮ ಕಲಬುರಗಿ ಠಾಣೆಗಳ ಎಲ್ಲಾ ಪೊಲೀಸರು ನಗರಾದ್ಯಂತ ಕಾರ್ಯಾಚರಣೆ ನಡೆಸಿ ಘಟನೆ ನಡೆದ 24 ಗಂಟೆಗಳಲ್ಲೇ ಮಗುವನ್ನು ಪತ್ತೆ ಮಾಡಿದ್ದಾರೆಂದು ಡಾ. ಶರಣಪ್ಪ ಪೊಲೀಸ್ ತಂಡವನ್ನ ಅಭಿನಂದಿಸಿದರು.
ಬುಧವಾರ ನಸುಕಿನ ಜಾವ ಎಂಎಸ್ಕೆ ಮಿಲ್ ಬಡಾವಣೆಯಲ್ಲಿ ಆರೋಪಿಗಳ ಮನೆಯಲ್ಲೇ ಮಗು ಪತ್ತೆಯಾಗಿದೆ. ಖುದ್ದು ಪ್ರಕರಣದ ಉಸ್ತುವಾರಿ ವಹಿಸಿದ್ದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗ ಬುಧವಾರ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ಆಸ್ಪತ್ರೆಗೆ ತೆರಳಿ ಮಗುವನ್ನು ತಾಯಿ ಕಸ್ತೂರಿಬಾಯಿ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಡಾ. ಶರಣಪ್ಪ ಢಗೆ, ನಗರ ಪೊಲೀಸ್ ಕಮೀಶ್ನರ್, ಕಲಬುರಗಿ
ರಾಮು ಸಗರ, ವರ್ಕಶಾಪ್ ಮಾಲೀಕ, ಮಗುವಿನ ತಂದೆ, ರಾವೂರು