ಹಣ ಕೇಳಿದ್ದಕ್ಕೆ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ

KannadaprabhaNewsNetwork |  
Published : Jul 31, 2024, 01:03 AM IST
ಫೋಟೋ: 30 ಹೆಚ್‌ಎಸ್‌ಕೆ 3ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಬೇಕರಿಯ ಶೋಕೇಷನ್ನು ಕಬ್ಬಿಣದ ರಾಡ್‌ನಿಂದ ಪುಡಿ ಮಾಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಘಟನಾಸ್ಥಳಕ್ಕೆ ನಂದಗುಡಿ ಪೊಲೀಸರ ತಂಡ ಧಾವಿಸಿ ಬಂದು ಪರಿಶೀಲಿಸಿ, ದೂರು ದಾಖಲಿಸಿಕೊಂಡು ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಹೊಸಕೋಟೆ: ಬೇಕರಿಯಲ್ಲಿ ಖರೀದಿಸಿದ ತಿಂಡಿ, ತಿನಿಸಿಗೆ ಹಣ ಕೇಳಿದ್ದಕ್ಕೆ ಬೇಕರಿ ಸಿಬ್ಬಂದಿಯನ್ನು ಥಳಿಸಿ, ಅಲ್ಲಿನ ಗಾಜಿನ ಶೋಕೇಸ್ ಅನ್ನು ಕಬ್ಬಿಣದ ರಾಡಿನಿಂದ ಪುಡಿ ಮಾಡಿರುವ ಘಟನೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ. ಕೇರಳ ಮೂಲದ ಬೇಕರಿಯಲ್ಲಿ ಕ್ರೀಮ್ ಬನ್ ತೆಗೆದುಕೊಳ್ಳಲು ಬಂದು ರೋಹನ್ (26), ಭರತ್ (22), ರಾಕೇಶ್ (20) ಹಾಗೂ ಗೌತಮ್ (19) ಕ್ರೀಮ್ ಬನ್ನಿನ ಹಣ ನೀಡುವಂತೆ ಕೇಳಿದಾಗ ಸಿಬ್ಬಂದಿಯನ್ನು ಥಳಿಸಿ, ಕಬ್ಬಿಣದ ಪೈಪ್‌ನಿಂದ ಶೋಕೇಸ್‌ನ ಗಾಜುಗಳನ್ನು ಒಡೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾಸ್ಥಳಕ್ಕೆ ನಂದಗುಡಿ ಪೊಲೀಸರ ತಂಡ ಧಾವಿಸಿ ಬಂದು ಪರಿಶೀಲಿಸಿ, ದೂರು ದಾಖಲಿಸಿಕೊಂಡು ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಲ್ಡನ್‌ ಅವರ್‌ನಲ್ಲಿ 2.16 ಕೋಟಿ ರು, ರಕ್ಷಣೆ
ಇಂದಿನಿಂದ ಲಂಡನ್‌ ಮಾದರಿ ಡಬಲ್‌ ಡೆಕ್ಕರ್‌ ಬಸ್‌ ಸಂಚಾರ