ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕಾರ್ಲ್ ಮಾರ್ಕ್ಸ್ ನಗದಲ್ಲಿ ಕಳೆದ ರಾತ್ರಿ ಕಲ್ಲು ತೂರಾಟ, ಹಿಂದುಗಳ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಸ್ಥಳಗಳಿಗೆ ಭೇಟಿ ನೀಡಿ, ಹಲ್ಲೆಗೊಳಗಾಗಿದ್ದ ಯಮನೂರಪ್ಪ, ಗಂಗಮ್ಮ ಕುಟುಂಬಕ್ಕೆ ಧೈರ್ಯ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಐ ಲವ್ ಮಹಮ್ಮದ್ ಬರಹದ ಬ್ಯಾನರನ್ನು ನಿಷೇಧಿಸಿರುವ ಮಾಹಿತಿ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಅಂತಹ ಬರಹದ ಬ್ಯಾನರ್, ಫ್ಲೆಕ್ಸ್ ನಿಷೇಧಿಸಲಿ. ಮನೆಗಳ ಮೇಲೆ ತೂರಾಡಿದ್ದಕ್ಕೆ ಸಾಕ್ಷಿಯಾಗಿದ್ದ ಕಲ್ಲುಗಳನ್ನೂ ಬಿಡದಂತೆ ಪೊಲೀಸರು ತೆರವು ಮಾಡಿದ್ದಾರೆ. ಎಫ್ಐಆರ್ ಮಾಡಿ, ಸ್ಥಳ ಮಹಜರು ಮಾಡುವ ಮುನ್ನವೇ ಪೊಲೀಸ್ ಇಲಾಖೆಯವರು ಕಲ್ಲುಗಳನ್ನು ಏಕೆ ತೆಗದರು? ಕಾನೂನು ಪ್ರಕಾರ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನಡೆದುಕೊಳ್ಳಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಬೇಕು ಎಂದು ಕಿಡಿಕಾರಿದರು.ಗಂಗಮ್ಮ ಕಣ್ಣೀರು:
ಆಗ ಜಿ.ಎಂ. ಸಿದ್ದೇಶ್ವರ, ನೀವು ಪ್ರಶ್ನೆ ಮಾಡಿದ್ದು ಸರಿಯಾಗಿದೆ. ಮತ್ತೊಂದು ಕೋಮಿನವರು ಗಲಾಟೆ ಮಾಡಿದ್ದು ತಪ್ಪು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯವರು ಸರ್ಕಾರದ ಪರವಾಗಿಯೇ ಮಾತನಾಡುತ್ತಾರೆ ಎಂದು ಕಿಡಿದರು. ಆಗ ಮತ್ತೊಬ್ಬ ಮಹಿಳೆ ಮಾಲಾಶ್ರೀ, ತಮ್ಮ ಮನೆ ಎದುರಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಮೇಲೆ, ಮನೆಗಳ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಅಳಲು ತೋಡಿಕೊಂಡರು.
ಗಂಗಮ್ಮ, ಮಾಲಾಶ್ರೀ ಸೇರಿದಂತೆ ಸ್ಥಳೀಯ ಮಹಿಳೆಯರು, ಮತ್ತೊಂದು ಕೋಮಿನವರು ಎಲ್ಲ ಪ್ಲ್ಯಾನ್ ಮಾಡಿಕೊಂಡೇ ಕಲ್ಲು ತೂರಾಟ ಮಾಡಿ, ಮನೆಗಳಿಗೆ ನುಗ್ಗಿ ದಾಂಧಲೆ ಮಾಡಿ, ಹಲ್ಲೆ ಮಾಡಿದ್ದಾರೆ. ನಾವು ಮೊಬೈಲ್ನಲ್ಲಿ ವೀಡಿಯೋ ಮಾಡಿಕೊಳ್ಳುವುದನ್ನೂ ತಡೆದಿದ್ದಾರೆ. ವೀಡಿಯೋ ಮಾಡುವುದು ತಪ್ಪಾ? ಮನೆ ಒಳಗೆ ನುಗ್ಗುತ್ತಿದ್ದ ಗುಂಪಿನಿಂದಾಗಿ ನಾವೆಲ್ಲರೂ ಭಯಭೀತರಾಗಿದ್ದೆವು ಎಂದು ಅವರು ಕಣ್ಣೀರಿಟ್ಟರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ವಕೀಲ ಎ.ವೈ. ಪ್ರಕಾಶ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಪಕ್ಷದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ, ಮಾಜಿ ಮೇಯರ್ ಕೆ.ಆರ್.ವಸಂತ ಕುಮಾರ, ಬಿ.ರಮೇಶ ನಾಯ್ಕ, ಬಾತಿ ವೀರೇಶ ದೊಗ್ಗಳ್ಳಿ, ಜಯಪ್ರಕಾಶ, ಎಸ್.ಟಿ.ಯೋಗೇಶ್ವರ, ದುಗ್ಗೇಶ, ಶಿವು, ಗಣೇಶ, ಶಿವನಗೌಡ, ಜಗದೀಶ ಕುಮಾರ ಪಿಸೆ ಇತರರು ಇದ್ದರು. * ದಾವಣಗೆರೇಲಿ ಹಿಂದೂಗಳೇ ಬಹುಸಂಖ್ಯಾತರು: ಸಿದ್ದೇಶ್ವರ್
ಕಾರ್ಲ್ ಮಾರ್ಕ್ಸ್ ನಗರಕ್ಕೆ ಗುರುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಒಂದು ಸಲವಾದರೂ ಇಂತಹ ಘಟನೆ ನಡೆದಿದೆಯಾ? ದಾವಣಗೆರೆಯಲ್ಲಿ ಹಿಂದೂಗಳು ಬಹು ಸಂಖ್ಯಾತರಿದ್ದಾರೆ, ನೆನಪಿರಲಿ ಎಂದು ಮತಾಂಧ ಕಿಡಿಗೇಡಿಗಳಿಗೆ ಎಚ್ಚರಿಸಿದರು.