ಬಂಜಾರ ಸಮುದಾಯ ಗುರುಭಕ್ತಿಯಿಂದ ಸೇವಲಾಲ್‌ರ ನೆನೆಯಬೇಕ: ಜಿಲ್ಲಾ ಪಂಚಾಯತ್‌ನ ಕೃಷ್ಣನಾಯ್ಕ

KannadaprabhaNewsNetwork |  
Published : Feb 14, 2025, 12:32 AM IST
13 ಜೆ.ಜಿ.ಎಲ್.1) ಸಂತ ಸೇವಲಾಲ್ ಅವರ 286 ನೇ  ಜಯಂತ್ಯೋತ್ಸವದ  ಅಂಗವಾಗಿ ಬಂಜಾರ ಸಮುದಾಯದಿಂದ ಜಗಳೂರು ಪಟ್ಟಣದ ಪ್ರವಾಸಿ ಮಂದಿರದಿಂದ  ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಛೇರಿವರೆಗೂ ಬೆಳ್ಳಿಸಾರೋಟ್ ನಲ್ಲಿ ಸಂತಸೇವಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬೃಹತ್ ಮೆರವಣಿಗೆಗೆ ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ ಚಾಲನೆ ನೀಡಿದರು. | Kannada Prabha

ಸಾರಾಂಶ

2017 ರಲ್ಲಿ ಸರ್ಕಾರದ ಆದೇಶದಂತೆ ಸಂತಸೇವಲಾಲ್ ಅವರ ಜಯಂತಿಯನ್ನು ಸರ್ಕಾರಿ ದಿನಾಚರಣೆಯನ್ನಾಗಿ ಪ್ರತಿ ಕಛೇರಿಗಳಲ್ಲಿಯೂ ರಜಾರಹಿತವಾಗಿ ಆಚರಿಸಲಾಗುತ್ತಿದ್ದು. ಬಂಜಾರ ಸಮುದಾಯದವರು ಸಂತಸೇವಲಾಲ್ ಅವರನ್ನು ಸ್ಮರಿಸುವ ಮೂಲಕ ಗುರುಭಕ್ತಿ ಮೆರೆಯಬೇಕಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ಹೇಳಿದರು.

ಸಂತನ ಜಯಂತ್ಯುತ್ಸವ । ಸಮುದಾಯದ ಬೃಹತ್ ಮೆರವಣಿಗೆ

ಕನ್ನಡ ಪ್ರಭವಾರ್ತೆ ಜಗಳೂರು

2017 ರಲ್ಲಿ ಸರ್ಕಾರದ ಆದೇಶದಂತೆ ಸಂತಸೇವಲಾಲ್ ಅವರ ಜಯಂತಿಯನ್ನು ಸರ್ಕಾರಿ ದಿನಾಚರಣೆಯನ್ನಾಗಿ ಪ್ರತಿ ಕಛೇರಿಗಳಲ್ಲಿಯೂ ರಜಾರಹಿತವಾಗಿ ಆಚರಿಸಲಾಗುತ್ತಿದ್ದು. ಬಂಜಾರ ಸಮುದಾಯದವರು ಸಂತಸೇವಲಾಲ್ ಅವರನ್ನು ಸ್ಮರಿಸುವ ಮೂಲಕ ಗುರುಭಕ್ತಿ ಮೆರೆಯಬೇಕಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ಹೇಳಿದರು.

ಸಂತ ಸೇವಲಾಲ್‌ರ 286ನೇ ಜಯಂತಿ ಅಂಗವಾಗಿ ಬಂಜಾರ ಸಮುದಾಯದಿಂದ ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿವರೆಗೂ ಬೆಳ್ಳಿಸಾರೋಟ್‌ನಲ್ಲಿ ಸಂತಸೇವಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಬಂಜಾರರು ತಮ್ಮ ಸಮಾಜದ ಹಿತಕಾಯುವುದು ಗುರು ಎಂಬುದನ್ನು ಯಾರು ಮರೆಯಬಾರದು ಎಂದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಕಾರ್ಯದರ್ಶಿ ಕೀರ್ತಿಕುಮಾರ್, ಬಂಜಾರ ಸಮುದಾಯದವರ ಬಹುದಿನದ ಬೇಡಿಕೆಯಾದ ಸಮುದಾಯಭವನ ನಿರ್ಮಾಣಕ್ಕೆ ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ ಅವರ ಸಹಕಾರದಿಂದ ನಮ್ಮ ತಂದೆ ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ಸೂಕ್ತ ನಿವೇಶನ ಗುರುತಿಸಲಾಗಿದ್ದು. ಮುಂಬರುವ ವರ್ಷದ ಸಂತಸೇವಲಾಲ್ ಜಯಂತ್ಯುತ್ಸವದ ವೇಳೆಗೆ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಕೆಪಿ ಪಾಲಯ್ಯ ಮಾತನಾಡಿ, ಪ್ರತಿಯೊಂದು ಸಮುದಾಯದ ಯುವಪೀಳಿಗೆ ಆಯಾ ಸಮಾಜದ ಪೂರ್ವಜರ ಆದರ್ಶ,ಕೊಡುಗೆಗಳನ್ನು ಮೈಗೂಡಿಸಿಕೊಳ್ಳಬೇಕು.ಸಮಾಜದ ಸಂಘಟನೆ,ಶಿಕ್ಷಣಕ್ಕೆ ಒತ್ತಕೊಡಬೇಕು ಎಂದು ಕಿವಿಮಾತು ಹೇಳಿದರು.

ಕೊಟ್ಟೂರು ತಾಲೂಕು ದೂಪದಹಳ್ಳಿ ಬಂಜಾರ ಮಠದ ಶಿವಪ್ರಕಾಶ್ ಸ್ವಾಮೀಜಿ ಆಶೀರ್ವಚನ ನೀಡಿ, ಸಂತ ಸೇವಲಾಲ್ ಅವರು ಬಂಜಾರ ಸಮುದಾಯಕ್ಕೆ ಸೀಮಿತವಾಗದೆ ವಿಶ್ವಕ್ಕೆ ಸಂದೇಶ ಸಾರಿದವರು.ಅವರ ಸಂದೇಶಗಳನ್ನು ಸಮಾಜಕ್ಕೆ ಪಸರಿಸೋಣ ಎಂದು ಹೇಳಿದರು.

ಇದೇ ವೇಳೆ ಬಂಜಾರ ಸಮುದಾಯದ ಯುವಕರು, ತೀಜ್ ಹೊತ್ತ ಮಹಿಳೆಯರು, ಲಂಬಾಣಿ ಉಡುಪು ಧರಿಸಿ ಡಿಜೆ ಹಾಡಿಗೆ ಹೆಜ್ಜೆಹಾಕಿದರು. ಮಾಲಾಧಾರಿಗಳು ಫೆ.13 ರಿಂದ ಆರಂಭವಾಗುವ ಸಂತಸೇವಲಾಲ್ ಜಯಂತ್ಯುತ್ಸವದ ಜಾತ್ರೆಗೆ ಮಾಲಾಧಾರಿಗಳು ಭಾಗವಹಿಸಲು ಪಾದಾಯಾತ್ರೆ ತೆರಳಿದರು.ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕಲ್ಪಿಸಲು ಗ್ರೇಡ್ -2 ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿಸಲ್ಲಿಸಿದರು.

ಪಪಂ ಅಧ್ಯಕ್ಷ ನವೀನ್ ಕುಮಾರ್, ಲಂಬಾಣಿ ಸಮಾಜದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿನಾಯ್ಕ, ತಾಪಂ ಇಒ ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಮಾಜದ ಮುಖಂಡರಾದ ಶಶಿ, ಮೂರ್ತಿನಾಯ್ಕ, ನರೇನಹಳ್ಳಿಕುಮಾರನಾಯ್ಕ, ಸತೀಶ್ ನಾಯ್ಕ, ವಕೀಲ ಉಮಾಪತಿನಾಯ್ಕ, ಧರ್ಮನಾಯ್ಕ, ಮಂಜಾನಾಯ್ಕ, ಶಿಕ್ಷಕ ಅಂಜಿನಾಯ್ಕ, ರಾಜುನಾಯ್ಕ, ಕೊಟ್ರೇಶ್ ನಾಯ್ಕ, ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!