ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೈನ್ಸ್ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಬ್ಯಾಂಕ್ ನೌಕರರು, ಶಿವಪ್ಪ ನಾಯಕ ವೃತ್ತ, ಹಮ್ಮಿರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್ ಮೂಲಕ ಮಹಾವೀರ ವೃತ್ತದ ವರೆಗೆ ವಾಕಥಾನ್ ಮಾಡಿದರು.
ಜೋಗ ನೋಡಲು ವೈಭೋಗ, ಮತದಾನ ಮಾಡುವುದು ಸುಯೋಗ, ನಾವು ಶಿವಮೊಗ್ಗ ಜನ, ಮಾಡೇ ಮಾಡ್ತೀವಿ ಮತದಾನ ಇನ್ನೂ ಮುಂತಾದ ಘೋಷಣೆ ಗಟ್ಟಿಯಾಗಿ ಸಾರುತ್ತಾ ಅತ್ಯಂತ ಉತ್ಸಾಹದಲ್ಲಿ ಬ್ಯಾಂಕ್ ನೌಕರರು ಸಾಗಿದರು. ಮತದಾನದ ಜಾಗೃತಿ ಗೀತೆ ದಾರಿಯುದ್ದಕ್ಕೂ ಹಾಡಿದರು.ವಾಕಥಾನ್ನಲ್ಲಿ ಭಾಗವಹಿಸಿದ್ದ ನೌಕರರು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನೈತಿಕ ಮತದಾನದ ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಎಲ್ಲಾ ನೌಕರರು ಬ್ಯಾಂಕ್ ಗೆ ಬರುವ ಸಾರ್ವಜನಿಕರಲ್ಲಿ ಮತದಾನದ ಅರಿವು ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಲೀಡ್ ಬ್ಯಾಂಕ್ ಎಜಿಎಂ ಅಮರನಾಥ್, ಬ್ಯಾಂಕ್ ಆಫ್ ಬರೋಡ ಎಜಿಎಂ ರವಿ, ಕೆನರಾ ಬ್ಯಾಂಕ್ ಡಿಎಂ ಪದ್ಮಜ , ಕರ್ನಾಟಕ ಗ್ರಾಮೀಣ ಬ್ಯಾಂಕ್ ರೀಜನಲ್ ಮ್ಯಾನೇಜರ್ ಶಾರದಮ್ಮ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿವಿಜನಲ್ ಮ್ಯಾನೇಜರ್ ರಂಗಸ್ವಾಮಿ, ಯೂನಿಯನ್ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ಎಂ ಕೆ ಮುರಳಿ, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ನಾಗರಾಜ್, ಲೀಡ್ ಬ್ಯಾಂಕ್ನ ಅಧಿಕಾರಿ ನೆಲ್ಸನ್, ವಾರ್ತಾಧಿಕಾರಿ ರಾಜು ಆರ್, ರಾಜ್ಯಮಟ್ಟದ ಸ್ವೀಪ್ ತರಬೇತಿದಾರ ನವೀದ್ ಅಹಮದ್ ಪರ್ವಿಜ್ , ಸೇರಿದಂತೆ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು, ನೌಕರರು ಹಾಜರಿದ್ದರು.