ಬಂಟ್ವಾಳ: ಅನಂತಾಡಿ ಮತ್ತು ನೆಟ್ಲ ಮುಡ್ನೂರು ಎರಡೂ ಗ್ರಾಮವನ್ನು ಸಂಪರ್ಕಗೊಳಿಸುವ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿಸುವ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ವಿಶೇಷ ಅನುದಾನ 40 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಮಂಗಳವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅತ್ಯಂತ ಪುರಾತನ ಮತ್ತು ಬಹಳ ಪ್ರಸಿದ್ಧಿ ಇದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಮತ್ತು ಎರಡು ಗ್ರಾಮದ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಒಟ್ಟು 40 ಲಕ್ಷ ರು. ವೆಚ್ಚದಲ್ಲಿ ಈ ರಸ್ತೆಗೆ ಕಾಂಕ್ರೀಟಿಕರಣ ಮಾಡಲಾಗುತ್ತದೆ ಎಂದರು. ಗುತ್ತಿಗೆದಾರರು ಉತ್ತಮವಾಗಿ ಕೆಲಸ ನಿರ್ವಹಿಸಿ, ಗುಣಮಟ್ಟದ ರಸ್ತೆಯನ್ನು ಜನರಿಗೆ ನೀಡುತ್ತಾರೆ ಎಂಬ ಭರವಸೆ ಇದೆ. ಕಾಮಗಾರಿ ವೇಳೆ ಗ್ರಾಮದ ಜನರ ಸಹಕಾರ ಕೂಡ ಅತ್ಯಗತ್ಯವಾಗಿದ್ದು, ಜನರಿಗೂ ತೊಂದರೆಯಾಗದಂತೆ ಹೊಂದಾಣಿಕೆಯಿಂದ ಕಾಮಗಾರಿಯನ್ನು ನಡೆಸುವಂತೆ ಶಾಸಕರು ತಿಳಿಸಿದರು.
ಗ್ರಾಮ ಪ್ರಮುಖ್ ರಾದ ಮಹಾಬಲ ಪೂಜಾರಿ ಬಾಕಿಲ, ನವೀನ ಆಚಾರ್ಯ, ಶಿವರಾಮ್ ಶೆಟ್ಟಿ ಕರಿಂಕ, ಧನಂಜಯ ಗೌಡ ಮೀನಾವು ಮಹಿಳಾ ಮೋರ್ಚಾ ,ಉಪಾಧ್ಯಕ್ಷೆ ಗೀತಾಚಂದ್ರಶೇಖರ್ ಗೋಳಿಕಟ್ಟೆ, ಬಿಜೆಪಿ ಪ್ರಮಖರಾದ ಜ್ಯೋತಿ ಹೆಗ್ಡೆ, ನವೀನ್ ಶೆಟ್ಟಿ, ಶಕೀಲ ಕೃಷ್ಣಪ್ಪ ಪೂಜಾರಿ, ಅಶೋಕ್ ರೈ ಎಲ್ಕಾಜೆ, ಬಾಲಕೃಷ್ಣ ನಾಯ್ಕ್, ಬಾಲಕೃಷ್ಣ ಪೂಜಾರಿ ಸಾಯಿ , ದಯಾನಂದ ಗೌಡ,ರಾಮಪ್ಪ ಗೌಡ,ಜಯರಾಮ್ ಆಚಾರಿ , ರಮೇಶ್ ಗೌಡ,ಕೃಷ್ಣಪ್ಪ ಗೌಡ, ಶಿವಾನಂದ ಶೆಟ್ಟಿ, ಕುಸುಮಧರ, ಧರ್ನಪ್ಪ ಗೌಡ,ಗಣೇಶಾನಂದ ಶೆಟ್ಟಿ, ಉದಯ ಗೌಡ ಕೊಂಕನೋಡಿ, ವಸಂತ್ ರಾಜ್ ಭಟ್,ಚೇತನ್ ರೈ, ಸ್ಥಳದಾನಿಗಳಾದ ರಾಧಾ ಕೃಷ್ಣ ಭಾಗವತ್, ಕೆ.ಟಿ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.