ಸೆ.15ಕ್ಕೆ ದಾವಣಗೆರೆಗೆ ಬಸವ ಸಂಸ್ಕೃತಿ ಅಭಿಯಾನ: ಸಾಣೇಹಳ್ಳಿ ಶ್ರೀ

KannadaprabhaNewsNetwork |  
Published : Aug 05, 2025, 11:45 PM IST
5ಕೆಡಿವಿಜಿ20, 21, 22, 23-ದಾವಣಗೆರೆಯಲ್ಲಿ ಮಂಗಳವಾರ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬಸವಾನುಯಾಯಿಗಳು. | Kannada Prabha

ಸಾರಾಂಶ

ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಬಸವನ ಬಾಗೇವಾಡಿಯಿಂದ ಬೆಂಗಳೂರುವರೆಗೆ ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನ ಸೆ.15ರಂದು ದಾವಣಗೆರೆಗೆ ಆಗಮಿಸಲಿದೆ. ಅದ್ಧೂರಿಯಾಗಿ ಅಭಿಯಾನ ನಡೆಸಲು ನಗರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

- ಜಾತಿಗಣತಿಯಲ್ಲಿ ಏನು ಬರೆಸಬೇಕೆಂಬ ಗೊಂದಲಕ್ಕೆ ಗುರು-ವಿರಕ್ತರು ತೆರೆ ಎಳೆಯಲಿ: ಸ್ವಾಮೀಜಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಬಸವನ ಬಾಗೇವಾಡಿಯಿಂದ ಬೆಂಗಳೂರುವರೆಗೆ ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನ ಸೆ.15ರಂದು ದಾವಣಗೆರೆಗೆ ಆಗಮಿಸಲಿದೆ. ಅದ್ಧೂರಿಯಾಗಿ ಅಭಿಯಾನ ನಡೆಸಲು ನಗರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿದ್ದ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.

ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಕೆಲವರು ವೀರಶೈವ, ಇನ್ನೂ ಕೆಲವರು ವೀರಶೈವ ಲಿಂಗಾಯತ ಎಂದು ಬರೆಸುವಂತೆ ಹೇಳುತ್ತಿದ್ದಾರೆ. ಲಿಂಗಾಯತ ಮಠಾಧೀಶರ ಒಕ್ಕೂಟದ ನಿಲುವು ಲಿಂಗಾಯತ ಎಂದೇ ಬರೆಸಲು ತೀರ್ಮಾನಿದೆ. ಅಖಿಲ ಭಾರತಿ ವೀರಶೈವ ಮಹಾಸಭಾ ಸರಿಯಾದ ತೀರ್ಮಾನ ಕೈಗೊಂಡರೆ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಸೆ.15ರಂದು ದಾವಣಗೆರೆಗೆ ಬರಲಿದೆ. ರಾಜ್ಯದಲ್ಲೇ ಅದ್ಧೂರಿಯಾಗಿ ಅಭಿಯಾನ ನಡೆಸಿಕೊಟ್ಟ ಜಿಲ್ಲೆ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಬೇಕು ಎಂದರು.

ಅಭಿಯಾನದ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಲಿಂಗಾಯತ ಕುರಿತು ಅರ್ಥಪೂರ್ಣ ಚರ್ಚೆ ಆಗಬೇಕಿದೆ. ಈ ವಿಚಾರ ಬಹುದಿನಗಳಿಂದ ಹೊಗೆಯಾಡುತ್ತಿದೆ. ಅಭಿಯಾನದ ಸಮಾರೋಪವಾದ ಅ.5ರಂದು ಬೆಂಗಳೂರಲ್ಲೇ ಅಂತಿಮ ತೀರ್ಮಾನವಾಗುವ ವಿಶ್ವಾಸವಿದೆ. ಪಂಚಪೀಠಗಳ ಸ್ವಾಮೀಜಿಗಳು ಅಂದು ಆಗಮಿಸಿದರೆ ಅನುಕೂಲ ಎಂದರು.

ಹಿರಿಯ ಪ್ರಾಧ್ಯಾಪಕ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿದರು. ಮುಖಂಡರಾದ ದೇವರಮನಿ ಶಿವಕುಮಾರ, ಕುಸುಮಾ ಲೋಕೇಶ, ಎಂ.ಜಯಕುಮಾರ. ನಿವೃತ್ತ ವಾರ್ತಾಧಿಕಾರಿ ಎಂ.ಮಹೇಶ್ವರಯ್ಯ, ಆವರಗೆರೆ ರುದ್ರಮುನಿ, ಶಿವಕುಮಾರ, ಎನ್.ಎಸ್.ರಾಜು, ಎ.ಎಸ್‌.ಸಿದ್ದಲಿಂಗೇಶ್ವರ, ನಿರ್ಮಲಾ ಸುಭಾಷ್, ನಾಗರತ್ನಮ್ಮ, ಬಸಾಪುರ ಶಶಿ ಇತರರು ಇದ್ದರು.

- - -

(ಟಾಪ್‌ ಕೋಟ್‌)

ಈ ಹಿಂದೆ ರಾಜ್ಯ ಸರ್ಕಾರ ಜಾತಿ ಗಣತಿ ನಡೆಸಿದಾಗ ಎಲ್ಲರೂ ಒಳಪಂಗಡದ ಹೆಸರು ಬರೆಸಿದ್ದರಿಂದ ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತರು ಎಂದು ಬರೆಸುವ ಬಗ್ಗೆ ಎಲ್ಲ ಮಠಾಧೀಶರೂ ಸೇರಿ ಚರ್ಚಿಸಿ, ಒಮ್ಮತದ ತೀರ್ಮಾನಕ್ಕೆ ಬರಬೇಕು.

- ಅಥಣಿ ಎಸ್.ವೀರಣ್ಣ, ಅಭಿಯಾನದ ಗೌರವಾಧ್ಯಕ್ಷ

- - -

-5ಕೆಡಿವಿಜಿ20, 21, 22, 23.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಶ್ರೀ ಶಿವಯೋಗಿ ಮಂದಿರದಲ್ಲಿ ಸಾಣೇಹಳ್ಳಿ ಶ್ರೀ ಸಾನಿಧ್ಯದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಬಸವ ಅನುಯಾಯಿಗಳು ಪಾಲ್ಗೊಂಡರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ