ಕನ್ನಡಪ್ರಭ ವಾರ್ತೆ ಜಮಖಂಡಿ
ಬಸವ ಜಯಂತಿ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಆರು ದಿನಗಳ ಓಲೆಮಠದ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಸಂಜೆಯ ಕಾರ್ಯಕ್ರಮದಲ್ಲಿ ಅವರು ವಚನಗಳಲ್ಲಿ ಸೌಹಾರ್ದತೆಯ ನೆಲೆಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು. ಲಿಂಗದಿಂದಾಚೆಗೆ ಬಸವ ಧರ್ಮವಿದೆ. ಆತ್ಮವೇ ಲಿಂಗಸ್ವರೂಪ. ಲಿಂಗ ಅರಿವಿನ ಕುರುಹು. ಬುದ್ಧಿಯನ್ನು ಹತೋಟಿಯಲ್ಲಿಡಲು ಲಿಂಗಪೂಜೆ ಮಾಡಬೇಕು. ತಮ್ಮನ್ನೇ ತಾವು ಸವಾಲಿಗಿಟ್ಟು ನಡೆದಂತೆ ನುಡಿಯುವುದು ನಿಜವಾದ ತತ್ವ ಎಂದು ಹೇಳಿದರು.
ಓಲೆಮಠದ ಆನಂದ ದೇವರು ನೇತೃತ್ವ ವಹಿಸಿ ಮಾತನಾಡಿ, ಸೌಹಾರ್ದತೆ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ. ಬಸವಾದಿ ಶಿವಶರಣರು ಪ್ರೀತಿ, ವಿಶ್ವಾಸದಿಂದ ಬದುಕಲು ತಿಳಿಸಿದ್ದಾರೆ. ದ್ವೇಷ ಬಿಟ್ಟು ಪ್ರೀತಿ ಮಾಡುವುದೇ ಸೌಹಾರ್ದತೆ ಎಂದು ಆಶೀರ್ವಚನ ನೀಡಿದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ ಮಾತನಾಡಿದರು. ಹಿರೇಪಡಸಲಗಿಯ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಹುಲ್ಯಾಳ ಸಾರವಾಡ ಮಠದ ಕೃಷ್ಣಯ್ಯ ಸ್ವಾಮೀಜಿ, ಹುಲ್ಯಾಳದ ದುಂಡಯ್ಯಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಪೌರಾಯುಕ್ತ ಜ್ಯೋತಿ ಗಿರೀಶ, ಎಂಜಿನಿಯರ್ ಎ.ಆರ್. ಶಿಂಧೆ, ರಮೇಶ ಅಣ್ಣಿಗೇರಿ, ಉಮೇಶ ಶಿದರಡ್ಡಿ, ಡಿ.ಡಿ. ಜೋಗದಂಡೆ, ಮಹೇಶ ಮಡಿವಾಳರ, ಹನುಮಂತ ಮಗದುಮ್, ದಶರಥ ವಗ್ಗೆನ್ನವರ, ಪತ್ರಕರ್ತ ಕೇದಾರೆಪ್ಪ ರಾವಳೋಜಿ, ಅನಿತಾ ಪಾಟೀಲ, ಪ್ರತೀಕ್ಷಾ ಜಿರಲಿ, ಜ್ಯೋತಿ ಕಟಗಿ, ಗಿರಿಜಾ ಮೇತ್ರಿ, ಶ್ವೇತಾ ಬಣ್ಣದ, ಲಕ್ಷ್ಮೀ ನಾಯಕ, ಅನು ನಾಯಕ, ಮುತ್ತವ್ವ ಪೂಜಾರಿ ಇತರರು ಇದ್ದರು.