ಬಸವ ಜಯಂತಿ ಉತ್ಸವ ಸಮಿತಿಯಿಂದ ಬಸವ ನಡಿಗೆ

KannadaprabhaNewsNetwork |  
Published : May 08, 2024, 01:07 AM IST
ಚಿತ್ರ 7ಬಿಡಿಆರ್‌6ಬೀದರ್‌ನಲ್ಲಿ ಬಸವ ಜಯಂತಿ ಉತ್ಸವದ ಪ್ರಚಾರಾರ್ಥ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಇಲ್ಲಿನ ದೇವಿ ಕಾಲೊನಿಯಲ್ಲಿ ಬಸವ ನಡಿಗೆ ನಡೆಯಿತು. | Kannada Prabha

ಸಾರಾಂಶ

ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಬಸವಾನುಯಾಯಿಗಳು ಮನೆ ಮನೆಗೆ ಭೇಟಿ ಕೊಟ್ಟು ಸಾರ್ವಜನಿಕರಿಗೆ ಬಸವ ಜಯಂತಿ ನಿಮಿತ್ತ ನಗರದಲ್ಲಿ ಮೇ 8ರಿಂದ 10ರ ವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಆಹ್ವಾನ ನೀಡಲಾಯಿತು.

ಬೀದರ್‌: ಬಸವ ಜಯಂತಿ ಪ್ರಚಾರಾರ್ಥ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಸೋಮವಾರ ಬಸವ ನಡಿಗೆ ನಡೆಯಿತು.

ದೇವಿ ಕಾಲನಿಯ ಬಿಕೆಡಿ ಫೌಂಡೇಷನ್‌ ಕಾರ್ಯದರ್ಶಿ ಸುವರ್ಣಾ ಬಸವರಾಜ ಧನ್ನೂರ ಅವರ ಮನೆಯಿಂದ ಆರಂಭಗೊಂಡ ನಡಿಗೆಯು ದೇವಿ ಕಾಲನಿ, ಅಕ್ಕ ಮಹಾದೇವಿ ಕಾಲನಿ ಸೇರಿ ವಿವಿಧೆಡೆ ಸಂಚರಿಸಿ ಸಮಾರೋಪಗೊಂಡಿತು. ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಬಸವಾನುಯಾಯಿಗಳು ಮನೆ ಮನೆಗೆ ಭೇಟಿ ಕೊಟ್ಟು ಸಾರ್ವಜನಿಕರಿಗೆ ಬಸವ ಜಯಂತಿ ನಿಮಿತ್ತ ನಗರದಲ್ಲಿ ಮೇ 8ರಿಂದ 10ರ ವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಆಹ್ವಾನ ನೀಡಲಾಯಿತು.

ಇದಕ್ಕೂ ಮುನ್ನ ನಡಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸುವರ್ಣಾ ಧನ್ನೂರ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಗಾದಗಿ ಹಾಗೂ ಜಯದೇವಿ ಯದಲಾಪುರೆ ಅವರನ್ನು ಸನ್ಮಾನಿಸಲಾಯಿತು. ಬಿಕೆಡಿ ಫೌಂಡೇಷನ್‌ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು.

ನೀಲಮ್ಮ ರೂಗನ್‌, ಉಷಾ ಮಿರ್ಚೆ, ಕರುಣಾ ಶೆಟಕಾರ್‌, ಸ್ಫೂರ್ತಿ ಧನ್ನೂರ, ಸುಜಾತಾ ಕಾಮಶೆಟ್ಟಿ, ಉಮಾ ಗಾದಗೆ, ನಿರ್ಮಲಾ ಮಸೂದಿ, ಜ್ಞಾನದೇವಿ ಬಿ, ಜ್ಯೋತಿ ಗಂಗಶೆಟ್ಟಿ, ವಿಜಯಲಕ್ಷ್ಮಿ ಪಾಟೀಲ್‌, ಆರುಂಧತಿ ಹಳ್ಳಿಖೇಡೆ, ಅನುಸೂಯಾ ಶೆಟಕಾರ್‌, ರೂಪಾ ಪಾಟೀಲ್‌, ಸುನಿತಾ ಮಂಗಲಗಿ ಹಾಗೂ ಶ್ರೇಯಾ ಮಹೇಂದ್ರಕರ್ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ