ಮೈಲನಹಳ್ಳಿ ಈಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಚಳ್ಳಕೆರೆ:
ಸೋಮವಾರ ತಳಕು ಹೋಬಳಿಯ ಮೈಲನಹಳ್ಳಿ ಗ್ರಾಮದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಶ್ರೀ ಈಶ್ವರ ದೇವಸ್ಥಾನದ ಕಳಸಾರೋಹಣ, ನೂತನ ಕರಿಗಲ್ಲು ಸ್ಥಾಪನೆ ಹಾಗೂ ಸ್ವಾಮಿಯವರ ಜಗದ್ಗುರು ಅಡ್ಡಪಲ್ಲಕ್ಕಿ ಮತ್ತು ಜನ ಜಾಗೃತಿ ಧರ್ಮಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಭಾಗಗಳಲ್ಲಿ ಜನರು ಭಕ್ತಿ, ಶ್ರದ್ಧೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇಂದು ಸಾವಿರಾರು ಭಕ್ತರು ವಿವಿಧ ಗ್ರಾಮಗಳಿಂದ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ನಮ್ಮೆಲ್ಲಾ ಧಾರ್ಮಿಕ ಜಾಗೃತಿ ಕಾರ್ಯಕ್ರಮಗಳಿಗೆ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಲಿವೆ ಎಂದು ಹೇಳಿದರು.ಮುಸ್ಟೂರಿನ ದಾಸೋಹ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕ ವಿಚಾರ ಧಾರೆಗಳಿಂದ ಮನುಷ್ಯನ ಪರಿವರ್ತನೆಯೊಂದಿಗೆ ಸಮಾಜದ ಪರಿವರ್ತನೆಯೂ ಸಹ ಸುಲಭವಾಗುತ್ತದೆ. ಸಾಮಾನ್ಯವಾಗಿ ಎಂತಹ ಸಂದರ್ಭದಲ್ಲೂ ಸಹ ವ್ಯಕ್ತಿ ಧರ್ಮವನ್ನು ಬಿಡಲು ಒಪ್ಪುವುದಿಲ್ಲ. ತನ್ನದೇಯಾದ ರೀತಿಯಲ್ಲಿ ಧಾರ್ಮಿಕ ವಿಚಾರಗಳನ್ನು ತಿಳಿದು ಅದರಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ. ಇದೊಂದು ಸಮಧಾನಕರ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಪಾಲಯ್ಯ, ಗ್ರಾಮದ ಮುಖಂಡರಾದ ಗೌಡ್ರ ಬಸವರಾಜಪ್ಪ, ನಾಗಣ್ಣ, ಚಂದ್ರಣ್ಣ, ಚನ್ನವೀರಪ್ಪ, ಮೈಲನಹಳ್ಳಿನಾಗರಾಜು, ದಿನೇಶ್, ಧನಂಜಯ, ಮಂಜಣ್ಣ, ಸದಸ್ಯರಾದ ಜಗನ್ನಾಥ, ಜಯಲಕ್ಷ್ಮಿ, ಶಾಂತಮ್ಮ, ವೆಂಕಟೇಶ್, ಪ್ರಹ್ಲಾದ್, ಮಂಜಣ್ಣ, ಗೋವಿಂದ, ಪಿಡಿಒ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.