ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಹೆಸರಿನಲ್ಲಿ ಜಗತ್ತಿನಲ್ಲೇ ಭಯೋತ್ಪಾದನೆ ನಡೆದಿಲ್ಲ. ಆದರೆ, ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳುವ ಮೂಲಕ ಬಸವಣ್ಣನವರ ತತ್ವಗಳಿಗೆ ಅಪಮಾನ ಮಾಡಲಾಗಿದೆ ಎಂದು ಟೀಕಿಸಿದರು.
ಬಸವಣ್ಣನವರು ‘ದಯೆಯೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮವಾವುದಯ್ಯ’ ಎಂದು ಪ್ರಶ್ನಿಸಿದ್ದರು. ಹೀಗಿರುವಾಗ ಬಕ್ರೀದ್ ಆಚರಣೆ ಸೇರಿದಂತೆ ಕೆಲವು ವಿಚಾರಗಳಲ್ಲಿ ದಯೆಯ ಅಂಶ ಎಲ್ಲಿದೆ ಎಂದು ಪ್ರಶ್ನಿಸಿದ ಸಿ.ಟಿ.ರವಿ, ರಾಯರೆಡ್ಡಿ ಅವರು ಕುರಾನ್ ಅನ್ನು ನಿಜವಾಗಿಯೂ ಅಧ್ಯಯನ ಮಾಡಿದ್ದರೆ ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದರು.ಕುರಾನ್ ಅಧ್ಯಯನ ಮಾಡದೆ ಕೇವಲ ತೋರಿಕೆಗಾಗಿ ಇಂತಹ ಹೇಳಿಕೆ ನೀಡುವುದು ಅಜ್ಞಾನದ ಪರಾಕಾಷ್ಠೆ. ಇಂತಹ ಹೇಳಿಕೆ ನೀಡುವವರು ಉನ್ನತ ಶಿಕ್ಷಣ ಸಚಿವರಾಗಿರುವುದು ದುರಂತ ಎಂದು ಟೀಕಿಸಿದರು.