ಬಸವೇಶ್ವರರ ತತ್ವಾದರ್ಶ ಸಮಾಜಕ್ಕೆ ದಾರಿದೀಪ

KannadaprabhaNewsNetwork |  
Published : May 01, 2025, 12:46 AM IST
ಹರಪನಹಳ್ಳಿಯಲ್ಲಿ ತಾಲೂಕು ಆಡಳಿತದವತಿಯಿಂದ ಆಯೋಜಿಸಿದ್ದ ಬಸವೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಉದ್ಘಾಟಿಸಿದರು. ಶಾಸಕಿ ಎಂ.ಪಿ.ಲತಾ ಅಧ್ಯಕ್ಷತೆ ವಹಿಸಿದ್ದರು. | Kannada Prabha

ಸಾರಾಂಶ

ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತು ಯಾವಾಗಲೂ ಪ್ರಸ್ತುತ ಎಂದ ಅವರು, ಬಸವಣ್ಣನವರು ಸಮಾನತೆಯ ಸಂದೇಶ ಸಾರಿದರು

ಹರಪನಹಳ್ಳಿ: ವಿಶ್ವಗುರು, ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ತತ್ವಾದರ್ಶಗಳು ಸಮಾಜಕ್ಕೆ ಯಾವಾಗಲೂ ದಾರಿ ದೀಪ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಅವರು ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ತಾಲೂಕಾಡಳಿತದಿಂದ ಆಯೋಜಿಸಿದ್ದ ಬಸವಣ್ಮನವರ 892ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.

ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತು ಯಾವಾಗಲೂ ಪ್ರಸ್ತುತ ಎಂದ ಅವರು, ಬಸವಣ್ಣನವರು ಸಮಾನತೆಯ ಸಂದೇಶ ಸಾರಿದರು ಎಂದು ಹೇಳಿದರು.

ಜಾತಿ, ಜಾತಿ ಎಂದು ಹೊಡೆದಾಡದೆ ಜಾತ್ಯೀತೀತವಾಗಿ ಬದುಕಬೇಕು ಎಂದ ಅವರು, ವಚನ ಸಾಹಿತ್ಯ ಎಲ್ಲರೂ ಅಭ್ಯಾಸ ಮಾಡಿ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ, ಬಸವಣ್ಣನವರು ಸಾಮಾಜಿಕ, ಆರ್ಥಿಕ ಕ್ರಾಂತಿ ಮಾಡಿ ಬದುಕಿನ ಪಾಠ ಹೇಳಿಕೊಟ್ಟರು, ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನ ಬರೆದರು ಎಂದು ಹೇಳಿದರು.

ವೀರಶೈವ ಮಹಾ ಸಭಾ ತಾಲೂಕು ಘಟಕದ ಅಧ್ಯಕ್ಷ ಎಂ. ರಾಜಶೇಖರ ಮಾತನಾಡಿ, ವಿಶ್ವದ ಎಲ್ಲ ಸಂವಿಧಾನಗಳಲ್ಲಿ ಬಸವಣ್ಣನವರ ತತ್ವ ಅಳವಡಿಕೆಯಾಗಿದೆ, ಆದ್ದರಿಂದ ಅವರು ವಿಶ್ವಮಾನವರು ಎಂದು ಹೇಳಿದರು.

ಸಮಾನತೆಯ ಹರಿಕಾರ ಬಸವಣ್ಣ, ಅವರ ವಚನಗಳನ್ನು ಓದಿ ಅರ್ಥ ಮಾಡಿಕೊಂಡು ಮಾನವನಾಗಿ ಬದುಕಿದರೆ ಜೀವನ ಸಾರ್ಥಕ ಎಂದು ನುಡಿದರು.

ಸಾಹಿತಿ ಇಸ್ಮಾಯಿಲ್‌ ಯಲಿಗಾರ ಮಾತನಾಡಿ, ಮೌಢ್ಯದ ವಿರುದ್ಧ ಹೋರಾಟ ಮಾಡಿ ಸಮ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರ ಪಾತ್ರ ದೊಡ್ಡದು ಎಂದರು.

ಬಸವಣ್ಣ ಕೆಳವರ್ಗದ ಶರಣರಿಗೆ ಸಮಾನತೆಯ ಅವಕಾಶ ಮಾಡಿಕೊಟ್ಟರು ಎಂದ ಅವರು, ಬಸವಣ್ಣ ಸೇರಿದಂತೆ ಯಾವುದೇ ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ ಎಂದು ತಿಳಿಸಿದರು.

ತಹಸೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಕಾರ್ಯನಿರ್ವಣಾಧಿಕಾರಿ ವೈ.ಎಚ್. ಚಂದ್ರಶೇಖರ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ನಾಮನಿರ್ದೇಶಿತ ಸದಸ್ಯೆ ಸುಮಾ ಜಗದೀಶ, ವೀರಶೈವ ಮಹಾಸಭಾದ ಪ್ರದಾನ ಕಾರ್ಯದರ್ಶಿ ಸಿ.ಎಂ. ಕೊಟ್ರಯ್ಯ, ಮಲ್ಲಿಕಾರ್ಜುನ ಕಲ್ಮಟ, ಟಿ.ಎಂ. ಶಿವಶಂಕರ, ಪ್ರಭಾಕರ ಕನ್ನಿಹಳ್ಳಿ, ಟಿ.ಎಚ್.ಎಂ. ಮಲ್ಲಿಕಾರ್ಜುನ, ಪಿ.ಬಿ. ಗೌಡ, ಎಚ್‌.ಎಂ. ಜಗದೀಶ, ಸಂಗಮೇಶ ಕಡೇಮನಿ, ಸಾವಳಗಿ ನಾಗರಾಜ, ದೊಡ್ಡಬಸವರಾಜ ಮುಲಾಲಿ, ಬಿಆರ್‌ ಸಿ ಹೊನ್ನತ್ತೆಪ್ಪ, ಬಿಸಿಎಂ ವಿಸ್ತರಣಾಧಿಕಾರಿ ಭೀಮಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ