ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಅಗಸಿ ಹತ್ತಿರ ಮಲ್ಲಯ್ಯ ದೇವಸ್ಥಾನದ ಬಳಿ ನಮ್ಮ ಸಂಕಲ್ಪ ವಿಕಸಿತ ಭಾರತ (ಮೋದಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು) ಎನ್ನುವ ಗ್ಯಾರಂಟಿ ವಾಹನದ ಮೂಲಕ ಹಮ್ಮಿಕೊಂಡ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿಎಂಜೆಜೆಬಿವೈ-ಪಿಎಂಎಸ್ಬಿವೈ ಮತ್ತು ಎಪಿವೈ ಯೋಜನೆಗಳನ್ನು ಮೋದಿ ಅವರು 2015ರಲ್ಲಿಯೇ ಜಾರಿಗೆ ತಂದರು. ಈ ಮೂರು ಸಾಮಾಜಿಕ ಭದ್ರತಾದಡಿ ಯೋಜನೆಗಳು ನಾಗರಿಕರ ಕಲ್ಯಾಣಕ್ಕೆ ಕಲ್ಪಿಸಲಾಗಿದ್ದು, ಅಪಾಯಗಳು ಅಥವಾ ನಷ್ಟಗಳು, ಜೀವನವನ್ನು ಸುರಕ್ಷಿತಗೊಳಿಸುವ ಅಗತ್ಯ ಹೊಂದಿವೆ ಎಂದರು.ಅಸಂಘಟಿತ ಕಾರ್ಮಿಕರು ಹಾಗೂ ಜನಸಾಮಾನ್ಯರಿಗಾಗಿ ಅಟಲ್ ಪಿಂಚಣಿ ಯೋಜನೆಯು ಬಹಳ ಉಪಯುಕ್ತವಾಗಿದೆ. ಈ ಯೋಜನೆಯಡಿ 18-60 ವರ್ಷದವರೆಗೂ ಪಿಂಚಣಿ ಹಣ ಸಂದಾಯಿಸುತ್ತಾ ಬಂದರೆ, ಕೊನೆಗೆ ಕಟ್ಟಿದ ಹಣದ ಆಧಾರದ ಮೇಲೆ ನಾಗರಿಕರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಸಿಗಲಿದೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡರಿಂದ 2024ನೇ ಸಾಲಿನ ಯೋಜನೆಗಳ ಒಳಗೊಂಡ ಪ್ರಧಾನಿ ನರೇಂದ್ರ ಮೋದಿ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಮುಖಂಡರಾದ ವಿರೇಶ ಸಾಹುಕಾರ ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಬಿಜೆಪಿ ತಾಲೂಕಾಧ್ಯಕ್ಷ ಮೇಲಪ್ಪ ಗುಳಗಿ, ಎಂ.ಎಸ್. ಚಂದಾ, ಸಂಗಣ್ಣ ವೈಲಿ, ಮುರಗೆಣ್ಣ ದೇಸಾಯಿ, ಗೌಡಪ್ಪ ಬಾಲಗೌಡ್ರು, ವಿರುಪಾಕ್ಷ ಸ್ಥಾವರಮಠ, ಬಸವರಾಜ ಮೇಲಿನಮನಿ, ಆನಂದ ಬಾರಗೀಡದ, ನಾಗಯ್ಯಸ್ವಾಮಿ ದೇಸಾಯಿಗುರು, ವಿನೋದ ದೊರೆ ಸೇರಿದಂತೆ ಇತರರಿದ್ದರು.