ವೈಟ್‌ಫೀಲ್ಡ್‌ನಲ್ಲಿ ಕಾಮಗಾರಿ : ಹಲವು ರೈಲು ಸಂಚಾರ ವ್ಯತ್ಯಯ

Published : May 12, 2025, 07:49 AM IST
Longest train route in the world

ಸಾರಾಂಶ

ನಗರದ ವೈಟ್‌ಫೀಲ್ಡ್‌ ಪ್ಯಾನೆಲ್‌ ಕ್ಯಾಬಿನ್‌ನಲ್ಲಿ ಎಲೆಕ್ಟ್ರಾನಿಕ್‌ ಇಂಟರ್‌ ಲಾಕಿಂಗ್‌ ವ್ಯವಸ್ಥೆಯ ಅಳವಡಿಕೆ, ನಾನ್‌ ಇಂಟರ್‌ಲಾಕಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲು ಸೇವೆ ರದ್ದು ಹಾಗೂ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

  ಬೆಂಗಳೂರು : ನಗರದ ವೈಟ್‌ಫೀಲ್ಡ್‌ ಪ್ಯಾನೆಲ್‌ ಕ್ಯಾಬಿನ್‌ನಲ್ಲಿ ಎಲೆಕ್ಟ್ರಾನಿಕ್‌ ಇಂಟರ್‌ ಲಾಕಿಂಗ್‌ ವ್ಯವಸ್ಥೆಯ ಅಳವಡಿಕೆ, ನಾನ್‌ ಇಂಟರ್‌ಲಾಕಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲು ಸೇವೆ ರದ್ದು ಹಾಗೂ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರೈಲುಗಳ ರದ್ದತಿ: ಬಂಗಾರಪೇಟೆ - ಕೆ.ಎಸ್.ಆರ್ ಬೆಂಗಳೂರು ಮೆಮು (66582), ಕೆ.ಎಸ್.ಆರ್ ಬೆಂಗಳೂರು- ಬಂಗಾರಪೇಟೆ ಮೆಮು (16522), ಬಂಗಾರಪೇಟೆ- ಎಸ್ಎಂವಿಟಿ ಬೆಂಗಳೂರು ಮೆಮು (06527) ಸೇವೆಗಳನ್ನು ಮೇ 13ರಂದು ರದ್ದುಗೊಳಿಸಲಾಗುವುದು. ಎಸ್ಎಂವಿಟಿ ಬೆಂಗಳೂರು - ಬಂಗಾರಪೇಟೆ ಮೆಮು (06528) ಸೇವೆಯನ್ನು ದಿನಾಂಕ ಮೇ 14ರಂದು ರದ್ದುಗೊಳಿಸಲಾಗುತ್ತಿದೆ.

ಭಾಗಶಃ ರದ್ದತಿ:

ಮೇ 13ರಂದು ಮಾರಿಕುಪ್ಪಂ-ಕೃಷ್ಣರಾಜಪುರಂ ಮೆಮು ರೈಲು (66514) ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದಾಗಲಿದೆ. ಕೃಷ್ಣರಾಜಪುರಂ-ಮಾರಿಕುಪ್ಪಂ ಮೆಮು, ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ನಡುವೆ (66515) ಭಾಗಶಃ ರದ್ದಾಗಲಿದೆ. ಈ ರೈಲು ಕೃಷ್ಣರಾಜಪುರಂ ಬದಲಿಗೆ ವೈಟ್‌ಫೀಲ್ಡ್‌ನಿಂದ ಹೊರಡಲಿದೆ.

ಜೋಲಾರಪೇಟ್ಟೈ - ಕೆಎಸ್ಆರ್ ಬೆಂಗಳೂರು ಮೆಮು (66549), ವೈಟ್‌ಫೀಲ್ಡ್ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದೆ. ಕೆಎಸ್ಆರ್ ಬೆಂಗಳೂರು-ಜೋಲಾರ್‌ಪೇಟ್ಟೈ ಮೆಮು (16520), ಕೆಎಸ್ಆರ್ ಬೆಂಗಳೂರು ಮತ್ತು ವೈಟ್‌ಫೀಲ್ಡ್ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲಿಗೆ ವೈಟ್‌ಫೀಲ್ಡ್‌ನಿಂದ ಹೊರಡಲಿದೆ.

ಮಾರಿಕುಪ್ಪಂ- ಕೃಷ್ಣರಾಜಪುರಂ ಮೆಮು (66533) ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದಾಗಲಿದೆ. ಕೃಷ್ಣರಾಜಪುರಂ-ಕುಪ್ಪಂ ಮೆಮು (66534) ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕೃಷ್ಣರಾಜಪುರಂ ಬದಲಿಗೆ ವೈಟ್‌ಫೀಲ್ಡ್‌ನಿಂದ ಹೊರಡಲಿದೆ.

ರೈಲುಗಳ ನಿಯಂತ್ರಣ:

ಮೇ 13ರಂದು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್ ರೈಲನ್ನು (16021) ಮಾರ್ಗದಲ್ಲಿ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್ ರೈಲನ್ನು (16220) ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ